October 17, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಣ್ಣ ಬೆರಗಿನ ಸಾಂಪ್ರದಾಯಿಕ ನೆಲೆಗಟ್ಟಿನ ಹಬ್ಬ – ಕರಮ್ ಉತ್ಸವ ಧಾರ್ಮಿಕ ಸಭೆಯಲ್ಲಿ ವಂದನೀಯ ಫಾದರ್ ಅಬ್ರಹಾಂ ಡಿಸೋಜ ಬಣ್ಣನೆ.

ಕರಮ್ ಹಬ್ಬವು ಬಣ್ಣ ಬೆರಗಿನ ಮತ್ತು ಸಾಂಪ್ರದಾಯಿಕ ನೆಲೆಗಟ್ಟು ಹೊಂದಿದ ಉತ್ಸವವಾಗಿತ್ತು ಎಂದು ಮುಲ್ಕಿಯ ಡಿವೈನ್ ಕಾಲ್ ರೆಟ್ರೀಟ್ ಸೆಂಟರ್ ನ ನಿರ್ದೇಶಕ ವಂದನೀಯ ಫಾದರ್ ಅಬ್ರಹಾಂ ಡಿಸೋಜ ಹೇಳಿದರು.

ಮಂಗಳೂರು ಮತ್ತು ಸುತ್ತಮುತ್ತಲಿನ 300 ಚೋಟಾ ನಾಗ್ಪುರ್ ವಲಸೆ ಆದಿವಾಸಿಗಳು ಮುಲ್ಕಿ ಕಾರ್ನಾಡು ಡಿವೈನ್ ಕಾಲ್ ರೆಟ್ರೀಟ್ ಸೆಂಟರ್ ನಲ್ಲಿ ಭಾನುವಾರ ತಮ್ಮ ಪಾರಂಪರಿಕ ಕರಮ್ ಹಬ್ಬವನ್ನು ನೃತ್ಯ, ಹಾಡು ಮತ್ತು ಆದಿವಾಸಿ ಸಂಪ್ರದಾಯಗಳೊಂದಿಗೆ ಆಚರಿಸಿದರು. ಮಂಗಳೂರು ಕೇಂದ್ರೀಕೃತಗೊಳಿಸಿ ವಿವಿಧ ಪ್ರದೇಶಗಳಲ್ಲಿ ಚೋಟಾ ನಾಗ್ಪುರ್ ಆದಿವಾಸಿ ವಲಸಿಗರು ಕಾರ್ಖಾನೆಗಳು, ಕೈಗಾರಿಕೆಗಳು, ಆಸ್ಪತ್ರೆಗಳು, ಕೃಷಿ ಮತ್ತು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಚೋಟಾ ನಾಗ್ಪುರ್ ಪ್ರದೇಶದ ಆರ್ಥಿಕ ಕಠಿಣ ಪರಿಸ್ಥಿತಿಯಿಂದ ಜೀವನೋಪಾಯ ಹುಡುಕಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಲಸೆ ಬಂದು ಕುಟುಂಬಗಳೊಂದಿಗೆ ನೆಲೆಸಿದ್ದಾರೆ. ಅವರ ಮಕ್ಕಳು ವಿದ್ಯಾವಂತರಾಗಿದ್ದಾರೆ ಮತ್ತು ಉತ್ತಮ ಉದ್ಯೋಗದಲ್ಲಿದ್ದಾರೆ. ಈ ಕಾರ್ಯಕ್ರಮವು ಎಲ್ಲಾ ವಲಸೆ ಸಮುದಾಯಗಳಿಗೆ ಮಾನ್ಯತೆ, ಗೌರವ ಮತ್ತು ಶೃದ್ಧೆಯನ್ನು ನೀಡುತ್ತದೆ. ವಂದನೀಯ ಫಾದರ್ ಸುಶೀಲ್ ಮತ್ತಿತರೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅನೇಕ ಗಣ್ಯರು ಉಪಸ್ಥಿತರಿದ್ದರು.

You may also like

News

ತಲೆಮರೆಸಿಕೊಂಡ ಆರೋಪಿಗಳ ಜಾಮೀನುದಾರರ ವಿರುದ್ದ ಕ್ರಮ

ಆರೋಪಿಗಳು ಸ್ವತಃ ನ್ಯಾಯಾಲಯಕ್ಕೆ ಶರಣು – ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆಯ ಆರೋಪಿಗಳ ಜಾಮೀನುದಾರರ
News

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸರಸ್ವತಿ ಮಂಟಪ ಲೋಕಾರ್ಪಣೆ

ಧರ್ಮಾಚರಣೆಯಿಂದ ಪ್ರಪಂಚಕ್ಕೆ ಶ್ರೇಯಸ್ಸು – ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಧರ್ಮಾಚರಣೆಯಿಂದ ಪ್ರಪಂಚಕ್ಕೆ ಶ್ರೇಯಸ್ಸು. ಧರ್ಮದಿಂದಲೇ ಸುಖ, ಸಂಪತ್ತು ಸಿದ್ಧಿಸುವುದು. ಜಗತ್ತಿನಲ್ಲಿ ಹಲವಾರು ಸೌಖರ್ಯಗಳಿದ್ದರೂ‌

You cannot copy content of this page