October 18, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದೇಶದ ಎಲ್ಲಾ ವಕೀಲರ ಸಂಘಗಳ ಮೂಲಕ ಭಾರತೀಯ ವಕೀಲರ ಪರಿಷತ್ತು ಮಾರ್ಗಸೂಚಿ ಬಿಡುಗಡೆ – ಕಿರಿಯ ವಕೀಲರಿಗೆ ಕನಿಷ್ಟ ಗೌರವಯುತ ಸಂಭಾವನೆ

ನ್ಯಾಯಾಂಗದ ಸೇವೆಯನ್ನು ಎತ್ತರಕ್ಕೆ ಏರಿಸುವ ಮತ್ತು ವಕೀಲರ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಿರಿಯ ವಕೀಲರಿಗೆ ಕನಿಷ್ಟ ಗೌರವಯುತ ಸಂಭಾವನೆ ನೀಡುವಂತೆ ಎಲ್ಲ ಹಿರಿಯ ವಕೀಲರು ಮತ್ತು ವಕೀಲ ಸಂಸ್ಥೆಗಳಿಗೆ ಭಾರತೀಯ ವಕೀಲರ ಪರಿಷತ್ತು ಮಾರ್ಗಸೂಚಿ ಬಿಡುಗಡೆ ಮಾಡಿದೆ.

ದೇಶದ ಎಲ್ಲಾ ರಾಜ್ಯಗಳ ವಕೀಲರ ಪರಿಷತ್ತಿನ ಮೂಲಕ ಎಲ್ಲಾ ವಕೀಲರ ಸಂಘಗಳಿಗೆ ಭಾರತೀಯ ವಕೀಲರ ಸಂಘ ಪತ್ರ ಬರೆದಿದೆ. ರಿಟ್ ಅರ್ಜಿ 10159/2024ರ ಪ್ರಕರಣದಲ್ಲಿ ದೆಹಲಿಯ ಹೈಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ಭಾರತೀಯ ವಕೀಲರ ಪರಿಷತ್ತು ಈ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಕೀಲ ವೃತ್ತಿ ನಡೆಸುವ ಕಾನೂನು ಸಂಸ್ಥೆಗಳು ಮತ್ತು ಹಿರಿಯ ವಕೀಲರು ಕಾನೂನು ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಉತ್ತಮ ಆದಾಯವನ್ನು ಹೊಂದಿದ್ದಾರೆ. ಆರಂಭದ ದಿನಗಳಲ್ಲಿ ವಕೀಲರು ಸಂಕಷ್ಟಮಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಈ ಹಂತದಲ್ಲಿ ಅವರಿಗೆ ಆರ್ಥಿಕ ನೆರವು ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಭಾರತೀಯ ವಕೀಲರ ಪರಿಷತ್ತು, ನವ ವಕೀಲರಿಗೆ ಮತ್ತು ಕಿರಿಯ ವಕೀಲರಿಗೆ ಕನಿಷ್ಟ ಗೌರವಯುತ ಸಂಭಾವನೆ ನೀಡುವಂತೆ ಮಾರ್ಗಸೂಚಿ ಹೊರಡಿಸಿದೆ.

ನಗರ ಪ್ರದೇಶದಲ್ಲಿ ಹಿರಿಯ ವಕೀಲರು ಹಾಗೂ ಕಾನೂನು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಿರಿಯ ಹಾಗೂ ಜ್ಯೂನಿಯರ್ ವಕೀಲರಿಗೆ ಕನಿಷ್ಟ ರೂಪಾಯಿ 20,000/- ಗೌರವ ಸಂಭಾವನೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಹಿರಿಯ ವಕೀಲರು ಹಾಗೂ ಕಾನೂನು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಿರಿಯ ಹಾಗೂ ಜ್ಯೂನಿಯರ್ ವಕೀಲರಿಗೆ ಕನಿಷ್ಟ ರೂಪಾಯಿ 15,000/- ಗೌರವ ಸಂಭಾವನೆ ನೀಡಬೇಕು. ಈ ಕನಿಷ್ಟ ಗೌರವ ಸಂಭಾವನೆಯು ಕಾಲ ಕಾಲಕ್ಕೆ ವಕೀಲ ಸಮುದಾಯದ ಸೂಕ್ತ ಪರಾಮರ್ಶೆ ನಡೆಸಿ ಅವಲೋಕನದ ಬಳಿಕ ಪರಿಷ್ಕರಿಸಬೇಕು ಎಂದು ಭಾರತೀಯ ವಕೀಲರ ಪರಿಷತ್ತು ತನ್ನ ಪತ್ರದಲ್ಲಿ ತಿಳಿಸಿದೆ.

You may also like

News

Bindu Jewellery Marks 40 Years with Grand Showroom Inauguration in Mangaluru

Bindu Jewellery, a name synonymous with trust and timeless craftsmanship, celebrates 40 years of excellence with the grand opening of
News

ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಪಾಲಕರ ಪಾತ್ರ  ಬಹು ಅಗತ್ಯ – ಇನ್ಸ್‌ಪೆಕ್ಟರ್ ಮಂಜುನಾಥ್ ಲಿಂಗಾರೆಡ್ಡಿ

ಭಟ್ಕಳದ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ಇಂದು ಅಕ್ಟೋಬರ್ 17ರಂದು ಶುಕ್ರವಾರ ನಡೆದ ಪಾಲಕ ಹಾಗೂ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಟ್ಕಳ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ

You cannot copy content of this page