ಪೊಲೀಸ್ ಘಟಕಗಳ “ವಾರ್ಷಿಕ ಕ್ರೀಡಾಕೂಟ–2025” ಕ್ಕೆ ಭವ್ಯ ಚಾಲನೆ
ಮಂಗಳೂರು ನಗರ ಪೊಲೀಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕಗಳ ಸಂಯೋಜಿತವಾಗಿ ಆಯೋಜಿಸಲಾದ “ವಾರ್ಷಿಕ ಕ್ರೀಡಾಕೂಟ–2025” ನ್ನು ನಿನ್ನೆ ನವೆಂಬರ್ 21ರಂದು ಶುಕ್ರವಾರ ಮಂಗಳೂರಿನಲ್ಲಿ ಉದ್ಘಾಟನೆ ನೆರವೇರಿತು.




ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಐಎಎಸ್, ರವರು ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.



ಈ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್., ಐಪಿಎಸ್, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ., ಐಪಿಎಸ್ ಉಪಸ್ಥಿತರಿದ್ದು, ಪೊಲೀಸ್ ಸಿಬ್ಬಂದಿಗಳ ಕ್ರೀಡಾ ಮನೋಭಾವ ಹಾಗೂ ತಂಡಭಾವನೆಗೆ ಪ್ರೋತ್ಸಾಹ ವ್ಯಕ್ತಪಡಿಸಿದರು.






