July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಚರ್ಚ್ ಆವರಣದಲ್ಲಿ ಅಡಿಕೆ ಕೃಷಿ – ಲಕ್ಷಾಂತರ ರೂಪಾಯಿ ಆದಾಯದತ್ತ ಸೂರಿಕುಮೇರು ಚರ್ಚ್!

ವಂದನೀಯ ಫಾದರ್ ಗ್ರೆಗರಿ ಪಿರೇರಾ ಅವರಿಗೆ ಕೃತಜ್ಞತೆ ಸಲ್ಲಿಸಿದ ಹಿಂದಿನ ಚರ್ಚ್ ಆಡಳಿತ ಮಂಡಳಿ

ಕೇವಲ ಸಾಂಪ್ರದಾಯಿಕ ಕೃಷಿಗೆ ಸೀಮಿತವಾಗದೆ, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬದಲಾವಣೆ ತಂದರೆ ಹೇಗೆ ಯಶಸ್ಸು ಪಡೆಯಬಹುದು ಎಂಬುದಕ್ಕೆ ಸೂರಿಕುಮೇರು ಚರ್ಚ್ ಒಂದು ಉತ್ತಮ ನಿದರ್ಶನವಾಗಿದೆ.

ವರದಿಯ ವಿವರ:

ಮಂಗಳೂರು ಧರ್ಮಕ್ಷೇತ್ರದ ಸೂರಿಕುಮೇರು ಚರ್ಚ್ ಆವರಣದಲ್ಲಿ ಕೆಲವು ವರ್ಷಗಳ ಹಿಂದೆ ಕೇವಲ ರಬ್ಬರ್ ಗಿಡಗಳನ್ನು ಬೆಳೆಸಲಾಗಿತ್ತು. ಆದರೆ ಇದರಿಂದ ನಿರೀಕ್ಷಿತ ಲಾಭ ಬರುತ್ತಿಲ್ಲ ಎಂಬುದನ್ನು ಮನಗಂಡ ಅಂದಿನ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ಗ್ರೆಗರಿ ಪಿರೇರಾ ಅವರು, ರಬ್ಬರ್ ಗಿಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಆ ಜಾಗದಲ್ಲಿ ಅಡಿಕೆ ಮತ್ತು ಇತರೆ ಕೃಷಿ ಗಿಡಗಳನ್ನು ನೆಡುವ ಮಹತ್ತರ ನಿರ್ಧಾರ ಕೈಗೊಂಡಿದ್ದರು.

ಅವರ ಈ ದೂರದೃಷ್ಟಿಯ ಫಲವಾಗಿ ಮತ್ತು ಅಂದಿನ ಚರ್ಚ್ ಆಡಳಿತ ಮಂಡಳಿಯವರ ನಿರಂತರ ಕಾಳಜಿಯಿಂದಾಗಿ, ಇಂದು ಈ ಕೃಷಿ ಭೂಮಿಯಿಂದ ಸುಮಾರು 18 ಲಕ್ಷ ರೂಪಾಯಿಗಳಿಗೂ ಅಧಿಕ ಆದಾಯ ಬರುತ್ತಾ ಇದೆ. ಈ ಹಣವನ್ನು ಚರ್ಚ್‌ನ ಅಭಿವೃದ್ಧಿ ಕೆಲಸಗಳಿಗಾಗಿ ಬಳಸಲು ನಿರ್ಧರಿಸಲಾಗಿದೆ ಎಂದು ಪ್ರಸ್ತುತ ಚರ್ಚ್ ಧರ್ಮಗುರು ಈಸ್ಟರ್ ಹಬ್ಬ ದ ದಿನದಂದು ಭಕ್ತಾದಿಗಳಿಗೆ ತಿಳಿಸಿದ್ದಾರೆ.

ಪ್ರಮುಖ ಅಂಶಗಳು:

* ಕ್ರಾಂತಿಕಾರಿ ಬದಲಾವಣೆ: ರಬ್ಬರ್ ಕೃಷಿಯಿಂದ ಲಾಭದಾಯಕ ಅಡಿಕೆ ಕೃಷಿಗೆ ಚರ್ಚ್ ಭೂಮಿಯನ್ನು ಪರಿವರ್ತಿಸಲಾಗಿದೆ.

* ಗಣನೀಯ ಆದಾಯ: ಪ್ರಸ್ತುತ ಬೆಳೆಯಿಂದ ಸುಮಾರು 18 ಲಕ್ಷ ರೂಪಾಯಿಗಳ ಆದಾಯ ಲಭ್ಯವಾಗಿದೆ.

* ಅಭಿನಂದನೆ ಸಲ್ಲಿಕೆ: ಈ ಯಶಸ್ಸಿಗೆ ಕಾರಣರಾದ ವಂದನೀಯ ಫಾದರ್ ಗ್ರೆಗರಿ ಪಿರೇರಾ, ವಂದನೀಯ ಫಾದರ್ ಮೆಲ್ವಿನ್ ನೊರೋನ್ಹಾ ಮತ್ತು ಅಂದಿನ ಚರ್ಚ್ ಪಾಲನಾ ಸಮಿತಿಯ ಪದಾಧಿಕಾರಿಗಳಾದ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಎಲಿಯಾಸ್ ಪಿರೇರಾ, ರೋಷನ್ ಬೊನಿಫಾಸ್ ಮಾರ್ಟಿಸ್ (ಉಪಾಧ್ಯಕ್ಷರುಗಳು) ಹಾಗೂ ಸ್ಟೀವನ್ ಆಲ್ವಿನ್ ಪಾಯ್ಸ್, ಮೇರಿ ಡಿಸೋಜ, ಪ್ರೀತಿ ಲ್ಯಾನ್ಸಿ ಪಿರೇರಾ (ಕಾರ್ಯದರ್ಶಿಗಳು) ಮತ್ತು ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ ಭಕ್ತಾದಿಗಳು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ರಬ್ಬರ್ ಗಿಡಗಳನ್ನು ತೆರವುಗೊಳಿಸುವಾಗ ಕೆಲವರು ಮತ್ಸರದಿಂದ ವಿರೋಧಿಸಿದ್ದರು. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಿಗೆ ಪತ್ರಗಳನ್ನು ಬರೆದು ಆಕ್ಷೇಪಣೆ ಸಲ್ಲಿಸಿದ್ದರು. ಆದರೂ ಅಂದಿನ ಚರ್ಚ್ ಆಡಳಿತ ಮಂಡಳಿ ಅಂದು ಕೈಗೊಂಡ ಧೈರ್ಯದ ನಿರ್ಧಾರ ಇಂದು ಚರ್ಚ್ ಆರ್ಥಿಕವಾಗಿ ಸ್ವಾವಲಂಬಿಯಾಗಲು ಮತ್ತು ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕಾರಿಯಾಗಿದೆ ಎಂದು ಭಕ್ತಾದಿಗಳು ಶ್ಲಾಘಿಸಿದ್ದಾರೆ. ಇಷ್ಟು ದೊಡ್ಡ ಮೊತ್ತದ ಆದಾಯದಿಂದ ವಿರೋಧಿಸಿದವರಿಗೆ ನಾಚಿಕೆ ಪಡುವಂತೆ ಆಗಿದೆ.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page