August 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಪಾಲಕರ ಪಾತ್ರ  ಬಹು ಅಗತ್ಯ – ಇನ್ಸ್‌ಪೆಕ್ಟರ್ ಮಂಜುನಾಥ್ ಲಿಂಗಾರೆಡ್ಡಿ

ಭಟ್ಕಳದ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ಇಂದು ಅಕ್ಟೋಬರ್ 17ರಂದು ಶುಕ್ರವಾರ ನಡೆದ ಪಾಲಕ ಹಾಗೂ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಟ್ಕಳ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ಲಿಂಗಾರೆಡ್ಡಿಯವರು ಪಾಲಕರಿಗೆ ಹಾಗೂ ಶಿಕ್ಷಕರಿಗೆ ಪ್ರೇರಣಾದಾಯಕ ಮಾತುಗಳನ್ನು ಆಡಿದರು. ಮಕ್ಕಳ ಶಿಕ್ಷಣ ಮತ್ತು ಭವಿಷ್ಯ ನಿರ್ಮಾಣದಲ್ಲಿ ಪಾಲಕರ ಪಾತ್ರದ ಮಹತ್ವವನ್ನು ತಿಳಿಸಿ, ಮಕ್ಕಳನ್ನು ಉತ್ತಮ ಮಾರ್ಗದರ್ಶನಕ್ಕೆ ಹೇಗೆ ಪ್ರೇರೇಪಿಸಬಹುದೆಂದು ವಿವರಿಸಿದರು. ಮಕ್ಕಳ ಗುಣಾತ್ಮಕ ಬೆಳವಣಿಗೆ, ಡಿಜಿಟಲ್ ಯುಗದಲ್ಲಿ ಗಮನ ಹರಿಸುವ ತಂತ್ರಗಳು ಮತ್ತು ಕುಟುಂಬ ಹಾಗೂ ಶಾಲೆಯ ಸಹಕಾರದ ಅಗತ್ಯವನ್ನು ವಿಶೇಷವಾಗಿ ಒತ್ತಿ ಹೇಳಿದರು.

”ಪ್ರಸ್ತುತ ವೈಜ್ಞಾನಿಕ ಯುಗದಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸಲು ಶಿಕ್ಷಣವನ್ನು ಮಾತ್ರವಲ್ಲದೆ ಸೃಜನಾತ್ಮಕತೆ, ತಂತ್ರಜ್ಞಾನ, ವೈಜ್ಞಾನಿಕ ಚಿಂತನ ಶಕ್ತಿ ಮತ್ತು ನೈತಿಕ ಮೌಲ್ಯಗಳ ಬೆಳೆಸುವಿಕೆ ಅಗತ್ಯ. ಮಕ್ಕಳಿಗೆ ತಕ್ಕಂತೆ ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು ಕಲಿಕೆಯ ಅನುಭವವನ್ನು ಸುಗಮಗೊಳಿಸಲು ಶಿಕ್ಷಕರೂ, ಪಾಲಕರೂ ಸಹಕರಿಸಬೇಕು. ವೈಜ್ಞಾನಿಕ ಪ್ರಯೋಗಗಳು, ಸಮಸ್ಯೆ ಪರಿಹಾರ ಚಟುವಟಿಕೆಗಳು ಮತ್ತು ರೋಚಕ ಪಾಠಗಳನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಅವರ ತರ್ಕಶಕ್ತಿಯನ್ನೂ, ಹೊಸ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಗಳ ಉತ್ಪತ್ತಿಯನ್ನೂ ಉತ್ತೇಜಿಸಬಹುದು. ಇಂತಹ ಪ್ರಬಲ ಶೈಕ್ಷಣಿಕ ಪರಿಕಲ್ಪನೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಸಾಮಾಜಿಕ ಜವಾಬ್ದಾರಿತನವನ್ನು ಬೆಳೆಸುತ್ತವೆ. ತಂತ್ರಜ್ಞಾನ ಮತ್ತು ವೈಜ್ಞಾನಿಕ ಚಿಂತನೆಗೆ ಒತ್ತಾಯ ಮಾಡುವ ಮೂಲಕ, ಅವರು ಜಗತ್ತಿನ ಸುಧಾರಣೆಗೆ ಸಹಕರಿಸುವ ಸಾಧ್ಯತೆಯನ್ನು ಹೊಂದುತ್ತಾರೆ. ಅಂತಹ ಸಮಗ್ರ ಶೈಕ್ಷಣಿಕ ಮತ್ತು ಮಾನಸಿಕ ಬೆಳೆಸುವಿಕೆಯ ಮೂಲಕ, ಮಕ್ಕಳ ಭವಿಷ್ಯವು ನಿಖರ, ಸಮರ್ಥ ಮತ್ತು ಶ್ರೇಷ್ಠವಾಗಿರುತ್ತದೆ ಎಂದು ಮಾತನಾಡಿದರು.

ಪಾಲಕರಿಂದ ಮತ್ತು ಶಿಕ್ಷಕರಿಂದ ಮೆಚ್ಚುಗೆ

ಪಾಲಕರಿಂದ ಮತ್ತು ಶಿಕ್ಷಕರಿಂದ ಇನ್ಸ್ ಪೆಕ್ಟರ್ ಲಿಂಗಾರೆಡ್ಡಿಯವರ ಮಾತುಗಳು ಗಮಾನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಕೆಲವರು ಅವರು ನೀಡಿದ ಉದಾಹರಣೆಗಳು ಸ್ಪಷ್ಟವಾಗಿದ್ದು, ಮಕ್ಕಳ ಜೀವನದಲ್ಲಿ ಪ್ರೇರಣೆಯಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದರೆಲ್ಲರೂ ತಮ್ಮ ಪ್ರತಿಕ್ರಿಯೆಯಲ್ಲಿ, ಇಂತಹ ಪ್ರೇರಣಾದಾಯಕ ಕಾರ್ಯಕ್ರಮಗಳು ಮಕ್ಕಳ ಉತ್ತಮ ಬೆಳವಣಿಗೆಗೆ ಪ್ರೇರಣೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

 

 

You may also like

News

ಓಣಂ ಸಂಭ್ರಮದ ನಡುವೆ ದುರಂತ – ತೆರೆದ ಬಾವಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು

ಓಣಂ ಆಚರಣೆಯ ಸಂಭ್ರಮದ ನಡುವೆ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಕನ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ನಡೆದಿದೆ. ಮೃತ
News

National Library Day Celebrated at Father Muller Charitable Institutions Mangaluru

The National Library Day was celebrated at Father Muller Charitable Institutions Central Library on 29th August 2026 at 3.00p.m. in

You cannot copy content of this page