July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನೊಂದ ಗ್ಯಾರೇಜು ಸದಸ್ಯನಿಗೆ ಆಸರೆಯಾದ ಗ್ಯಾರೇಜ್ ಮಾಲಕರ ಸಂಘ (ರಿ.) ಬಂಟ್ವಾಳ ವಲಯ

ಬಂಟ್ವಾಳ : ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ಇದರ ವತಿಯಿಂದ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ತುತ್ತಾದ ಸಂಘದ ಸಕ್ರಿಯ ಸದಸ್ಯ ದಿನೇಶ್ ಕುಲಾಲ್ ರವರಿಗೆ ಮಾನವೀಯ ನೆಲೆಯಲ್ಲಿ, ಸಂಘದ ಸದಸ್ಯರೆಲ್ಲರೂ ಜೊತೆಗೂಡಿ ತುರ್ತು ಚಿಕಿತ್ಸೆಗಾಗಿ ಸುಮಾರು ಒಂದು ಲಕ್ಷದ ಒಂದು ಸಾವಿರದ ಐನೂರು ರೂಪಾಯಿಗಳ  ಸಹಾಯಧನವನ್ನು ಆಟೋ ಲೈನ್ಸ್ ನಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ  ದಿನೇಶ್ ಕುಲಾಲ್ ರವರ ಧರ್ಮಪತ್ನಿಗೆ ನೀಡಲಾಯಿತು. ಅಧ್ಯಕ್ಷ ಸುಧೀರ್ ಪೂಜಾರಿ ರವರು ಮಾತನಾಡಿ ಸಂಘದ ಸದಸ್ಯರ ಕಷ್ಟಗಳಿಗೆ  ಸ್ಪಂದಿಸುವುದು ಮಾನವ ಧರ್ಮ ಇದನ್ನು ಪಾಲಿಸಿಕೊಂಡು ಬಂದಿರುವುದು ನಮ್ಮ ಸಂಘದ ಹೆಮ್ಮೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಲಾಲ್, ಕೋಶಾಧಿಕಾರಿ ಭಾಸ್ಕರ್ ಕುಲಾಲ್, ಮಾಜಿ ಅಧ್ಯಕ್ಷ ಜಗದೀಶ್ ರೈ, ಉಪಾಧ್ಯಕ್ಷರಾದ ಜನಾರ್ಧನ್ ಕುಲಾಲ್, ಪ್ರಸಾದ್ ಬಂಗೇರ ಜೊತೆ ಕಾರ್ಯದರ್ಶಿ ರಮೇಶ್ ಸಾಲಿಯನ್ ಗೌರವ ಸಲಹೆಗಾರದ ಸುಧಾಕರ್ ಸಾಲ್ಯಾನ್, ವಿಶ್ವನಾಥ ಬಿ., ಅಣ್ಣು ಪೂಜಾರಿ ಸಂಘಟನಾ ಸಂಚಾಲಕರಾದ ಗಣೇಶ್ ಸುವರ್ಣ, ಪ್ರಶಾಂತ್ ಭಂಡಾರ್ಕರ್, ರಮೇಶ್ ಭಂಡಾರಿ, ರಮೇಶ್ ಪೂಜಾರಿ ಸಂಘಟನಾ ಕಾರ್ಯದರ್ಶಿಯಾದ ನವೀನ್ ಕುಲಾಲ್, ರಾಜೇಂದ್ರ ಮಾಣಿ ಕ್ರೀಡಾ ಕಾರ್ಯದರ್ಶಿಗಳಾದ ಯೋಗೀಶ್ ರಾಮಕುಲಾಲ್, ಸೋಮನಾಥ ಸಾಲ್ಯಾನ್, ಗಣೇಶ್ ಕುಲಾಲ್ ಸದಸ್ಯತ್ವ ಅಭಿವೃದ್ಧಿ ಸಂಚಾಲಕರಾದ ಲಕ್ಷ್ಮಣ್ ಕುಲಾಲ್ ಹಾಗೂ ಸಂಘದ ಸದಸ್ಯರು ಉಪಸ್ತಿತರಿದ್ದರು.

You may also like

News

SJEC’s Nikhil A. Poojary to Represent India at International Yoga Championship

Saint Joseph Engineering College (SJEC) Vamanjoor has added another feather to its cap with the outstanding achievement of Nikhil A.
News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ

You cannot copy content of this page