January 19, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನೀರಜೆಯಲ್ಲಿ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ

ಕೊಯಿಲ : SKSSF ಆತೂರು ಕ್ಲಸ್ಟರ್ ಇದರ ವತಿಯಿಂದ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ ನವಂಬರ್ 18ರಂದು ನೂರುಲ್ ಹುದಾ ಮದರಸ, ಶಂಸುಲ್ ಉಲಮಾ ವೇದಿಕೆ ನೀರಜೆಯಲ್ಲಿ ನಡೆಯಿತು. SKSSF ಅತೂರು ಕ್ಲಸ್ಟರ್ ಅಧ್ಯಕ್ಷ ಎನ್. ಸಿದ್ದಿಕ್ ಧ್ವಜಾರೋಹಣ ಮಾಡಿದರು. ಉದ್ಘಾಟನೆ ಸಮಾರಂಭದಲ್ಲಿ ಸೌಕಾತ್ ಅಲಿ ಫೈಝಿ ದುಆ ಮಾಡಿದರು. ಸತ್ತರ್ ಅಸ್ಲಾಮಿ ಉದ್ಘಾಟನೆ ಮಾಡಿದರು.

ಕಲೋತ್ಸವದ ಕಾರ್ಯಕ್ರಮದ ಸಮಾರೋಪ ಸಮಾರಂಭ, ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಶಂಸುಲ್ ಉಲಮಾ ಮೌಲಿದ್  ಮಗ್ರಿಬ್ ನಮಾಝಿನ ಬಳಿಕ ಶಂಸುಲ್ ಉಲಮಾ ವೇದಿಕೆ ನೀರಜೆಯಲ್ಲಿ ನಡೆಯಿತು. ಶಂಸುಲ್ ಉಲಮಾ ಮೌಲಿದ್ ಗೆ ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಗಳ್ ನೇತೃತ್ವ ನೀಡಿ ದುಆ ಮಾಡಿದರು. SKSSF ಆತೂರು ಕ್ಲಸ್ಟರ್ ಅಧ್ಯಕ್ಷ ಎನ್. ಸಿದ್ದಿಕ್ ಅಧ್ಯಕ್ಷತೆ ವಹಿಸಿದರು. ನೀರಜೆ ಮದರಸ ಸದರ್ ಉಸ್ತಾದ್ ಹಾರಿಸ್ ಆಝ್ ಹರಿ ಉದ್ಘಾಟನೆ ಮಾಡಿದರು. ಅತೂರು ರೇಂಜ್ ಅಧ್ಯಕ್ಷರಾದ ರಫೀಕ್ ಆರ್ಷದಿ ಅನುಸ್ಮರಣೆ ಭಾಷಣ ಮಾಡಿದರು.

ವೇದಿಕೆಯಲ್ಲಿ ಅದ್ನಾನ್ ಅನ್ಸಾರಿ, ಮನ್ಸೂರ್ ಯಾಮಾನಿ, ಎನ್.ಬಿ, ದಾರಿಮಿ, ಇಸ್ಮಾಯಿಲ್ ದಾರಿಮಿ, ಝಕರಿಯಾ ಮುಸ್ಲಿಯಾರ್, ಬದ್ರುದ್ದಿನ್ ಮುಸ್ಲಿಯಾರ್, ಅಬ್ದುಲ್ ರಝಕ್ ಫೈಝಿ, ಇಸ್ಮಾಯಿಲ್ ಅಸ್ಲಾಮಿ, ಜಂಶೀರ್ ಫೈಝಿ, ಶಮೀರ್ ದಾರಿಮಿ, ಹಕೀಮ್ ಜಾಹರಿ, ಹಸೈನಾರ್ ಹಾಜಿ ಕೊಯಿಲ, ಅಹಮದ್ ಕುಂಞಿ, ಪೊಡಿಕುಂಞಿ ನೀರಜೆ, ಸಿರಾಜ್ ಬಡ್ಡಮೆ, ಅಬ್ದುಲ್ ರಝಕ್ ಬಿ.ಕೆ., ರಫೀಕ್ ಗಂಡಿಬಾಗಿಲು, ಖಲಿಲ್ ಹಾಜಿ, ಇಸಾಕ್ ಬಿ., ಹನೀಫ್ ಜನಪ್ರಿಯ, ನಝಿರ್ ಕೊಯಿಲ, ಯೂಸುಫ್ ನೀರಜೆ, ಖಲಂದರ್ ಎಸ್.ಪಿ., ಬಷೀರ್ ಪೆರಿಯಡ್ಕ, ಅಝೀಝ್ ಪಲ್ತಾಡಿ, ಅಝೀಝ್ ಪೆರಿಯಡ್ಕ, ಹನೀಫ್ ಪೆರಿಯಡ್ಕ, ಇಸ್ಮಾಯಿಲ್ ಆತೂರುಬೈಲ್, ಅಝೀಝ್ ಹಲ್ಯಾರ, ಕರೀಂ ಹೆಂತಾರ್, ಇಸ್ಮಾಯಿಲ್ ಗೊಳಿತ್ತಾಡಿ, ಅನ್ಸಾರ್, ಪುತ್ತುಕುಂಞಿ, ಸಿರಾಜ್, ಅಶ್ರಫ್, ಸಿದ್ದಿಕ್, ಮುಸ್ತಾಫಾ, ಜೈನದ್ದಿನ್ ಆತೂರು, ಸಾಜಿ, ಫಾರೂಕ್ ಉಪಸ್ಥಿತರಿದ್ದರು. SKSSF ಅತೂರು ಕ್ಲಸ್ಟರ್ ಪರಿಸರದ ಜಮಾಹತ್ ಅಧ್ಯಕ್ಷರಿಗೆ, ಮದರಸ ಸದರ್ ಉಸ್ತಾದ್ ರಿಗೆ ಹಾಗೂ ಶಾಖೆ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು.

ಬೆಳಿಗ್ಗೆಯಿಂದ ಸಂಜೆ ವರೆಗೆ ನಡೆದ ಕಲೋತ್ಸವ ಕಾರ್ಯಕ್ರಮದಲ್ಲಿ SKSSF ಆತೂರು ಶಾಖೆ ಚಾಂಪಿಯನ್ ವಾಗಿ ಮೂಡಿ ಬಂತು. SKSSF ನೀರಜೆ ಶಾಖೆ ರನ್ನರ್ ಶಿಪ್ ಪಡೆಯಿತು. ಯಾಹ್ಯ ಫೈಝಿ ಸ್ವಾಗತ ಭಾಷಣ ಮಾಡಿದರು. ಶರೀಫ್ ನಿಝಮಿ ವಂದಿಸಿದರು. ಅಶ್ರಫ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.

 

You may also like

News

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

ಬೆಳ್ತಂಗಡಿ ಇತಿಹಾಸ ಪ್ರಸಿದ್ಧ ಧಾರ್ಮಿಕ ಸಮನ್ವಯ ಕೇಂದ್ರ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಕಾಜೂರು ಮಖಾಂ ಶರೀಫ್ ನಲ್ಲಿ ಈ‌ ವರ್ಷದ ಉರೂಸ್ ಮಹಾ
News

ಬಹ್ರೇನ್ನಲ್ಲಿ 71 ಕೋಟಿ ರೂಪಾಯಿ ಲಾಟರಿ ಗೆದ್ದ ಕೇರಳ ಮೂಲದ ನರ್ಸ್ ಮನು  ಮೋಹನನ್

ಬಹ್ರೇನ್ನಲ್ಲಿ ನರ್ಸಿಂಗ್ ಕೆಲಸ ಮಾಡುತ್ತಿರುವ ಕೇರಳದ 36 ವರ್ಷದ ಆಂಬ್ಯುಲೆನ್ಸ್ ನರ್ಸ್ ಮನು ಮೋಹನನ್ ಇವರಿಗೆ ಬಿಗ್ ಟಿಕೆಟ್ ಲಾಟರಿಯಲ್ಲಿ 71 ಕೋಟಿ ರೂಪಾಯಿ (30 ಮಿಲಿಯನ್

You cannot copy content of this page