ಫಾದರ್ ಬಾಜಿಲ್ ವಾಸ್, ಸ್ಟೀವನ್ ಕ್ವಾಡ್ರಸ್ ಹಾಗೂ ಜೋಸೆಫ್ ಮಥಾಯಸ್ ಇವರಿಗೆ ಸನ್ಮಾನ

ಕರ್ನಾಟಕದ ಗಡಿನಾಡಿನಲ್ಲಿ ಹಾಗೆಯೇ ವಿದೇಶದಲ್ಲಿ ನೆಲೆಸಿ, ಕನ್ನಡ ಭಾಷೆ, ಸಾಹಿತ್ಯ ಹಾಗೂ ಶಿಕ್ಷಣಕ್ಕಾಗಿ ನೀಡಿದ ನಿರಂತರ ಸೇವೆಗಾಗಿ ವಂದನೀಯ ಫಾದರ್ ಬಾಜಿಲ್ ವಾಸ್, ಸ್ಟೀವನ್ ಕ್ವಾಡ್ರಸ್ ಪೆರ್ಮುದೆ ಹಾಗೂ ಜೋಸೆಫ್ ಮಥಾಯಸ್ ಇವರಿಗೆ ತಿರುವನಂತಪುರಂ ಇಲ್ಲಿನ ಭಾರತ್ ಭವನದಲ್ಲಿ ನವಂಬರ್ 27ರಂದು ಸನ್ಮಾನಿಸಲಾಯಿತು. ಈ
ಸನ್ಮಾನವು ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಇವರ ಸಹಯೋಗದಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೇರಳ ಸರ್ಕಾರದ ಮಂತ್ರಿಗಳಾದ ಕಡವಪಳ್ಳಿ ರಾಮಚಂದ್ರನ್ ಮತ್ತು ಜಿ.ಆರ್. ಅನಿಲ್ ಉಪಸ್ಥಿತರಿದ್ದರು. ಕಾಸರಗೋಡಿನ ಶಾಸಕ ನೆಲ್ಲಿಕುನ್ನು ಮತ್ತು ಮಂಜೇಶ್ವರದ ಶಾಸಕ ಆಶ್ರಫ್ ಸಭೆಯಲ್ಲಿ ಹಾಜರಿದ್ದರು.