ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ಹೋಬಳಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ನಿಯುಕ್ತಿ
ಬಹುಭಾಷಾ ಸಾಹಿತಿಗಳು, ಹದಿನೈದು ಪುಸ್ತಕಗಳ ಪ್ರಕಾಶನ ಮಾಡಿದ, ಕಳೆದ ನಲ್ವತ್ತು ವರ್ಷಗಳ ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ಹೋಬಳಿ ಅಧ್ಯಕ್ಷರನ್ನಾಗಿ ಮಾಡಿ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್ ಆದೇಶ ನೀಡಿದ್ದಾರೆ.
“ಪತಿ ಪತ್ನಿ ಸುತಾಲಯ” (ಡೈವರ್ಸ್ ಆಗದ ಹಾಗೆ ಸೂತ್ರಗಳು) ಬಹುಚರ್ಚಿತ ಲೈಬ್ರರಿ ಸ್ವೀಕೃತ ಹಾಗೂ ಕೊಂಕಣಿ, ತುಳು, ಬ್ಯಾರಿ ಭಾಷೆಯಲ್ಲಿ ವಿಮರ್ಶೆಗೆ ಬೇಡಿಕೆಯ ಪುಸ್ತಕವೂ ಸೇರಿದಂತೆ ಸಕಲಾಭರಣ, ಆಭರಣಗಳು ಗದ್ಯ ಪುಸ್ತಕಗಳನ್ನು ಹಾಗೂ ನನ್ನವಳ ಕವಳ ಕವಿತಾ ಸಂಗ್ರಹವು ಕನ್ನಡದ ಇವರ ಬಹುಬೇಡಿಕೆಯ ಇತರ ಕೃತಿಗಳು.
ಮಾತೃಭಾಷೆ ಕೊಂಕಣಿಯಲ್ಲಿ ಎಂಟು ಕೃತಿಗಳು ಪ್ರಕಟವಾಗಿವೆ. ತುಳುವಿನ ಮೊದಲ ಕೃತಿ ಮುದ್ರಣದಲ್ಲಿ ಇದೆ. ಕಳೆದ ವರ್ಷ 26ನೇ ಮಂಗಳೂರು ಪುರಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತ ಸಮಯದಲ್ಲಿ ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳನ್ನು ಆರಂಭ ಮತ್ತು ಸಮಾರೋಪವನ್ನು ಡಾ. ಮೀನಾಕ್ಷಿ ರಾಮಚಂದ್ರ ಜೊತೆಗೆ ಸೇರಿ ಮಾಡಿ ಸಾಹಿತ್ಯ ಮತ್ತು ಸಂಘಟಕರ ಮೆಚ್ಚುಗೆ ಗಳಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಸದಸ್ಯರಾಗಿ ನೇಮಕಗೊಂಡ ನಿಕಟಪೂರ್ವ ಅಧ್ಯಕ್ಷ ಪ್ರೊಫೆಸರ್ ಪುಷ್ಪರಾಜ್ ಶುಭಾಶಯ ಕೋರಿ ಹರ್ಷ ವ್ಯಕ್ತಪಡಿಸಿದ್ದಾರೆ.