“ಕೋಸ್ಟಲ್ ಬಿಗ್ ಭಾಷ್ ಲೀಗ್”ಕ್ರಿಕೆಟ್ ಪಂದ್ಯಾಟ, ಹರಾಜು ಮೂಲಕ ಆಟಗಾರರ ಆಯ್ಕೆ
ಮಂಗಳೂರಿನಲ್ಲಿ ಜನವರಿ 25ರಿಂದ ಫೆಬ್ರವರಿ 1ರ ತನಕ ನಡೆಯಲಿರುವ “ಕೋಸ್ಟಲ್ ಬಿಗ್ ಭಾಷ್ ಲೀಗ್” ಕ್ರಿಕೆಟ್ ಪಂದ್ಯಾಟಕ್ಕೆ ಆಟಗಾರರ ಹರಾಜು ಪ್ರಕ್ರಿಯೆ ನಗರದ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಜರುಗಿತು. ಕುಳಾಯಿ ರೆಡ್ ಹಾಕ್ಸ್ ತಂಡಕ್ಕೆ ಕೆಸಿ ಕರಿಯಪ್ಪ, ನವೀನ್ ಎಂ.ಜಿ., ಕಾರ್ತಿಕ್ ಎಸ್.ಯು., ಜಹಾನ್ ಪಿ.ಸಿ., ಕೆ.ಎಸ್. ದೇವಯ್ಯ, ನಿಖಿಲ್ ಐತಾಳ್, ನಿಶ್ಚಿತ್ ಎನ್. ಪೈ, ಸ್ವಸ್ತಿಕ್ ಸುಂದರ ಎಂ., ಪವನ್ ಜೆ. ಗೋಖಲೆ, ಗೌರವ್ ಅಪ್ಪಣ್ಣ, ಮೋಹಿತ್ ಎಂ., ಶ್ರೀರಾಜನ್ ಪಿ. ಅಮೀನ್, ಪ್ರಸನ್ನ ಕುಮಾರ್, ಪ್ರಣವ್ ರಾಜ್, ಲೋಕೇಶ್ ಐ., ಧ್ರುವಿರಾಜ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಮತ್ಸ್ಯರಾಜ್ ಗ್ರೂಪ್ ಮಲ್ಪೆ ತಂಡಕ್ಕೆ ಭರತ್ ಧುರಿ, ರಕ್ಷಿತ್ ಶಿವಕುಮಾರ್, ಆದಿತ್ಯ ಸೋಮಣ್ಣ, ಸಚಿನ್ ವಿ. ಭಟ್, ಲಾಲ್ ಸಚಿನ್, ಭರತ್ ಕೋಟ, ಇಮ್ರಾನ್ ನಝಿರ್, ಅದ್ವಿತ್ ಶೆಟ್ಟಿ, ಶ್ರೀಶ ಎಸ್. ಆಚಾರ್ಯ, ಸುಪ್ರೀತ್ ಕುಮಾರ್, ನಯನ್ ಸಿ.ಹೆಚ್., ತೇಜಸ್ ಆರ್. ನಾಯ್ಕ್, ಸೋಮನಾಥ್ ಶೆಟ್ಟಿ, ಅಭಿಜಿತ್ ಕೋಟ್ಯಾನ್, ಪುನೀತ್, ಸಚಿನ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಯುನೈಟೆಡ್ ಉಳ್ಳಾಲ್ ತಂಡಕ್ಕೆ ನಿಶಿತ್ ರಾಜ್, ಲಂಕೇಶ್ ಕೆ.ಎಸ್., ದರ್ಶನ್ ಎಂ.ಬಿ., ಸಚೇತ್ ಕುಮಾರ್, ಶಬರೀಶ, ಶ್ರೀವತ್ಸ ಆರ್. ಆಚಾರ್ಯ, ಹೃಷಿತ್ ಶೆಟ್ಟಿ, ಅಶ್ವಿಜ್ ಹೆಗ್ಡೆ, ವಿನಾಯಕ್ ಹೊಳ್ಳ, ನಿಖಿಲ್ ಬರೆತ್, ಆದಿತ್ಯ ರೈ, ಋಷಿ ಬಿ. ಶೆಟ್ಟಿ, ಅಧೋಕ್ಷ್ ಹೆಗ್ಡೆ, ಸುರೇನ್ ಎಂ.ಯು., ರಿಷಭ್, ವಿರಲ್ ಕಿಶೋರ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ.
ಮಂಗಳೂರು ಲಯನ್ಸ್ ತಂಡಕ್ಕೆ ನಿಹಾಲ್ ಉಳ್ಳಾಲ್, ಆನಂದ್ ಡಿ., ಕುಮಾರ್ ಎಲ್.ಆರ್., ಸೂರಜ್ ಎಸ್.ಎ., ಅಕ್ಷಯ್ ಅಜಯ್ ಕಾಮತ್, ನಿಶ್ಚಿತ್ ಎನ್. ರಾವ್, ದೀಪಕ್ ದೇವಾಡಿಗ, ಮನೋಜ್ ಎಂ., ರೋಹಿತ್ ವಿನಾಯಕ್, ಅದಿತ್ ಎಂ., ಆರ್ಯನ್, ರಾಹುಲ್ ಎ.ಎಸ್., ಭಾರ್ಗವ್ ಎಸ್., ಎಂ.ಎನ್. ವಿಕಾಸ್, ಇಸ್ಮಾಯಿಲ್ ಮೊಹತೆಸಾ, ತುಷಾರ್ ಮಂದಾರ್ ಅವರನ್ನು ಆಯ್ಕೆ ಮಾಡಲಾಯಿತು. ಕರಾವಳಿ ಟೈಗರ್ಸ್ ತಂಡಕ್ಕೆ ಶುಭಂಗ್ ಹೆಗ್ಡೆ, ಚೇತನ್ ಎಲ್.ಆರ್., ಶರತ್ ಬಿ.ಆರ್., ಅಮೃತ್ ಪ್ರವೀಣ್, ಗಗನ್ ರಾವ್ ಎಸ್., ರೋಹನ್ ಆರ್. ರೇವಣ್ಕರ್, ಪ್ರಥಮ್ ರಾಜೇಶ್, ಅಭಿಲಾಷ್ ಶೆಟ್ಟಿ, ನಿಹಾಲ್ ಡೇನಿಯಲ್ ಡಿಸೋಜ, ಪ್ರವೇಶ್ ಕೆ.ಎಂ., ವಿಕ್ರಂ ಪಿ.ಎಸ್., ಅಮೋಘ ಶಿವಕುಮಾರ್, ಹೃದ್ದಿಮಾನ್ ಬಾಸು, ಶರತ್ ಪೂಜಾರಿ, ಅದ್ವಿಕ್, ಚರಣ್ ರಾಜ್ ರನ್ನು ಆಯ್ಕೆ ಮಾಡಲಾಯಿತು.
ಇನ್ನು ಟೀಮ್ ಬಾವಾ ತಂಡಕ್ಕೆ ಕಾರ್ತಿಕ್ ಸಿ.ಎ., ಲೋಚನ್, ಲವೀಶ್ ಕೌಶಲ್, ರಾಣೆ ಕುರುಂಬಯ್ಯ, ಮನೀಶ್ ಬಿ. ಪ್ರದೀಪ್, ರಾಹುಲ್ ಜೆ. ಶೆಟ್ಟಿ, ನಿಹಾಂಶ್ ನರೇಂದ್, ಭುವನ್ ಭಟ್, ನತನ್ ಡಿಮೆಲ್ಲೋ,. ಶಾನ್ ನೋರೋನ್ಹ, ಅಂಕಿತ್ ವಿ. ಪೂಜಾರಿ, ರೆಹನ್ ಅಲರಿಕ್, ರಿತಿನ್ ಕ್ರಿಷ್ಟಿ, ಮಶೂಕ್, ಅಜಿತ್, ನಿತಿನ್ ಶೆಟ್ಟಿ ಅವರನ್ನು ಹರಾಜು ಮೂಲಕ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರಾದ ಸುರೇಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಶಬರಿ ಉಪಸ್ಥಿತರಿದ್ದರು.
ಸಹ್ಯಾದ್ರಿ ಕಾಲೇಜಿನ ಮೈದಾನಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು ಇದು ಟಿ20 ಫಾರ್ಮ್ಯಾಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು ಫ್ರಾಂಚೈಸಿ ಆಧಾರಿತ ಟೂರ್ನಮೆಂಟ್ ಅಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯೋಜಕರಾದ ಕೀರ್ತಿರಾಜ್ ರೈ (9741931062), ಶೈಖ್ ಮೊಹಮ್ಮದ್ ಅತಿಫ್ (9901683095), ಅಖಿಲೇಶ್ ಶೆಟ್ಟಿ (9594367713) ಇವರನ್ನು ಸಂಪರ್ಕಿಸಬಹುದಾಗಿದೆ.