March 24, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜೆರಾರ್ಡ್ ಟವರ್ಸ್ ರವರ ಏಕಾಂಗಿ ಪ್ರತಿಭಟನೆಗೆ ಕಣ್ಣುಗಳನ್ನು ತೆರೆದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು

ಧರೆಗುರುಳಿಸಿದ ಕದ್ರಿ ಶಿವಭಾಗ್ ನಲ್ಲಿರುವ ಒಣ ಮರ

ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ಗಿಟ್ಟಿಸಿಕೊಂಡ ಸಾಮಾಜಿಕ ಕಾರ್ಯಕರ್ತ

ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಶಿವಭಾಗ್ ಬಸ್ ಸ್ಟ್ಯಾಂಡ್ ಬಳಿ ಇದ್ದ ಒಣ ಮರವನ್ನು ತೆಗೆಯಲು ಹಲವು ರೀತಿಯಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗದೇ ಇರುವುದನ್ನು ಗಮನಿಸಿ, ಸಾರ್ವಜನಿಕರಿಗೆ ಈ ಒಣ ಮರದಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಇದೇ ಜನವರಿ 28ರಂದು ವಿನೂತನ ರೀತಿಯಲ್ಲಿ ಏಕಾಂಗಿಯಾಗಿ ಪ್ರತಿಭಟನೆಯನ್ನು ಮಾಡಿ ‘ಒಣಗಿದ ಮರ ಕಡಿಯಿರಿ ಜನರ ಪ್ರಾಣ ರಕ್ಷಿಸಿ’ ಎಂದು ಮಾಧ್ಯಮಗಳ ಮುಖಾಂತರ ಬೀಸಿದ ಚಾಟಿಗೆ ಇಂದು ಫೆಬ್ರವರಿ 6ರಂದು ಗುರುವಾರ ಒಣಗಿದ ಮರವನ್ನು ಕಡಿದು ಧರೆಗುರುಳಿಸುವ ಮುಖಾಂತರ ಯಶಸ್ವಿಯನ್ನು ಕಂಡಿದ್ದಾರೆ.

ಜೆರಾರ್ಡ್ ಟವರ್ಸ್ ರವರ ಈ ಏಕಾಂಗಿ ಪ್ರತಿಭಟನೆಗೆ ಮತ್ತು ಸಿಕ್ಕ ಯಶಸ್ಸಿಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಂದ ಸೋಶಿಯಲ್ ಮೀಡಿಯಾ ಮುಖಾಂತರ ವ್ಯಾಪಕ ಪ್ರಶಂಸೆಗಳು ಹರಿದು ಬರುತ್ತಿವೆ.

You may also like

News

Saint Philomena College in Puttur Celebrates the Inauguration of its Autonomous Status

Saint Philomena College, Puttur managed by the Catholic Board of Education, Mangaluru, proudly announced its official recognition as an Autonomous
News

ಒಳ್ಳೆಯ ಪ್ರಸ್ತಾವನೆಗಾಗಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ವತಿಯಿಂದ MLC ಐವನ್ ಡಿಸೋಜರವರಿಗೆ ಅಭಿನಂದನೆ

ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರ ನಿಯೋಗದಿಂದ ಸನ್ಮಾನ ವಿಧಾನ್ ಪರಿಷತ್ ಕಲಾಪದಲ್ಲಿ ಅಲ್ಪಸಂಖ್ಯಾತರ ಪರವಾಗಿ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿದ MLC ಐವನ್ ಡಿಸೋಜಾ ಮಂಗಳೂರು

You cannot copy content of this page