ಅಳದಂಗಡಿ ಸತ್ಯದೇವತೆ ದೈವದ ಕಾರ್ಣಿಕ – ಕಳೆದುಹೋದ ಚಿನ್ನದ ಬ್ರೆಸ್ ಲೆಟ್ ಪತ್ತೆ

ಬೆಳ್ತಂಗಡಿ : ಅಳದಂಗಡಿಯ ಸಮೀಪ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಫೆಬ್ರವರಿ 7ರಂದು ಮುಂಡೂರು ನಿವಾಸಿ ರಮಣಿ ಯವರ ಚಿನ್ನದ ಬ್ರೆಸ್ ಲೆಟ್ ಕಳೆದು ಹೋಗಿದ್ದು ಫೆ.9 ರಂದು ಅಳದಂಗಡಿ ಸತ್ಯದೇವತೆ ದೈವದ ಕಾರ್ಣಿಕದಿಂದ ಮೇಲಂತಬೆಟ್ಟು ಬಳಿ ಪತ್ತೆಯಾಗಿದೆ.
ರಮಣಿಯವರು ಅಳದಂಗಡಿ ಬಳಿ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ತನ್ನ ಚಿನ್ನವನ್ನು ಕಳೆದುಕೊಂಡಿದ್ದರು. ಅದು ಎಷ್ಟು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಈ ವೇಳೆ ಚಿನ್ನದ ಬ್ರೆಸ್ ಲೆಟ್ ಸಿಕ್ಕಿದರೆ ಅಳದಂಗಡಿ ಸತ್ಯದೇವತೆ ದೈವಸ್ಥಾನಕ್ಕೆ ಹೋಗಿ ಅಗೇಲು ಕೊಡುವುದಾಗಿ ಹರಕೆ ಹೊತ್ತುಕೊಂಡಿದ್ದರು. ಹರಕೆ ಹೊತ್ತ ಫಲದಿಂದ ಫೆಬ್ರವರಿ 9ರಂದು ಚಿನ್ನದ ಬ್ರೆಸ್ ಲೆಟ್ ಪತ್ತೆಯಾಗಿವೆ ಎಂದು ರಮಣಿಯವರು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲರವರಿಗೆ ತಿಳಿಸಿದ್ದಾರೆ.