March 26, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಾಳ್ಯತ್ತಡ್ಕ ಮಹ್ಳರತ್ತುಲ್ ಬದ್ರಿಯಾ ಮಜ್ಲಿಸ್ ಹಾಗೂ ಹಾಫಿಳ್ ಮಸ್ಹೂದ್ ಸಖಾಫಿ ಉಸ್ತಾದ್ ಅನುಸ್ಮರಣೆ

ಹಾಫಿಳ್ ಮಸ್ಹೂದ್ ಸಖಾಫಿ ಉಸ್ತಾದ್  ಮಾದರಿ ಪುರುಷ – ಅಬ್ದುಲ್ ರಝಾಕ್ ಖಾಸಿಮಿ

ಈಶ್ವರ ಮಂಗಳ: ಹಾಫಿಳ್ ಮಸ್ಹೂದ್ ಸಖಾಫಿ ಉಸ್ತಾದ್ ಅಲ್ಲಾಹನನ್ನು ಭಯಪಟ್ಟು ಜೀವಿಸಿದ ಒಬ್ಬ ಮಹಾನ್ ವ್ಯಕ್ತಿ. ಅವರ ಜೀವನ ಶೈಲಿ ನಾವೂ ಅವಲಂಬಿಸಬೇಕು ಎಂದು KMJ ಪಾಳ್ಯತ್ತಡ್ಕ ಶಾಖಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಖಾಸಿಮಿ ರವರು KMJ  SჄS SSF ಪಾಳ್ಯತ್ತಡ್ಕ ಶಾಖೆ ಸಂಘಟಿಸಿದ ಹಾಫಿಳ್ ಮಸ್ಹೂದ್ ಸಖಾಫಿ ಉಸ್ತಾದ್ ಅನುಸ್ಮರಣೆ ಹಾಗೂ ಮಹ್ಳರತ್ತುಲ್ ಬದ್ರಿಯಾ ಮಜ್ಲಿಸ್ ನ ಉದ್ಘಾಟನಾ ಭಾಷಣದಲ್ಲಿ ಕರೆ ನೀಡಿದರು.

SჄS ಪಾಳ್ಯತ್ತಡ್ಕ ಶಾಖೆ ಪ್ರಧಾನ ಕಾರ್ಯದರ್ಶಿ ಹುಸೈನ್ ಜೌಹರಿ ಸ್ವಾಗತಿಸಿ, ಉಮರ್ ಸ ಅದಿ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. KMJ ಪಾಳ್ಯತ್ತಡ್ಕ ಶಾಖಾ ಅಧ್ಯಕ್ಷರಾದ ಅಬ್ದುಲ್ಲಾ ಹಾಜಿ ರವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ KMJ ಈಶ್ವರ ಮಂಗಳ ಸರ್ಕಲ್ ಪ್ರಧಾನ ಕಾರ್ಯದರ್ಶಿ ಆದಂ ಹಾಜಿ.ಕೆ.ಪಿ ,SSF ಪುತ್ತೂರು ಡಿವಿಷನ್ ಪ್ರಧಾನ ಕಾರ್ಯದರ್ಶಿ ಸಿನಾನ್ ಸ ಅದಿ, SჄS ಪಾಳ್ಯತ್ತಡ್ಕ ಶಾಖಾ ಅಧ್ಯಕ್ಷರಾದ ಅಬ್ಬಾಸ್ ರೋಯಲ್, ಇಬ್ರಾಹಿಂ ಮುಸ್ಲಿಯಾರ್ ಟಿ.ಪಿ., ಆದಂ ಮುಸ್ಲಿಯಾರ್, ಇಬ್ರಾಹಿಂ ಹಾಜಿ, ರಶೀದ್ ಹಿಮಮಿ ಸಖಾಫಿ, ಅಶ್ರಫ್ ಸ ಅದಿ, ಶಿಹಾಬ್ ಸಖಾಫಿ ಹಾಗೂ KMJ SჄS SSF SBS ನ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.

You may also like

News

ದಲಿತ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಮಹೇಶ್ ಭಟ್ ಬಂಧನಕ್ಕೆ ಡಿಎಚ್ಎಸ್ ಒತ್ತಾಯ – ಕಠಿಣ ಕ್ರಮಕ್ಕೆ ಆಗ್ರಹ

ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬವನು ನಿರಂತರ ಲೈಂಗಿಕ ಕಿರುಕುಳ ನೀಡುವ ಮೂಲಕ ಮಾನಸಿಕ
News

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕು – ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ

ಮಂಗಳೂರು : ಇನ್ನೊಬ್ಬರ ಬಾಳಿಗೆ ಬೆಳಕಾಗುವ ನೇತ್ರದಾನ ಶ್ರೇಷ್ಠ ದಾನವಾಗಿದ್ದು, ನೇತ್ರದಾನಿಗಳ ಬದ್ಧತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ ಹೇಳಿದರು. ದಕ್ಷಿಣ ಕನ್ನಡ

You cannot copy content of this page