March 26, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಆಂಜೆಲೊರ್ ಧರ್ಮಕೇಂದ್ರದ ಸೆಕ್ಯುಲರ್ ಫ್ರಾನ್ಸಿಸ್ಕನ್ ಮೇಳದ ಸದಸ್ಯರಿಂದ ಮುಡಿಪು ಹಾಗೂ ಬಂಟ್ವಾಳ ಮೊಡಂಕಾಪು ಪುಣ್ಯಕ್ಷೇತ್ರಗಳಿಗೆ ಭೇಟಿ

ಮಂಗಳೂರು ಕ್ರೈಸ್ತ ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರ ಸೂಚನೆಯ ಮೇರೆಗೆ ಮಂಗಳೂರಿನ ಆಂಜೆಲೊರ್ ಕ್ರೈಸ್ತ ಧರ್ಮಕೇಂದ್ರದ ಸೆಕ್ಯುಲರ್ ಫ್ರಾನ್ಸಿಸ್ಕನ್ ಮೇಳದ 37 ಸದಸ್ಯರು ಫೆಬ್ರವರಿ 26ರಂದು ಬುಧವಾರ ಮುಡಿಪು ಹಾಗೂ ಬಂಟ್ವಾಳ ಮೊಡಂಕಾಪು ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಂಡರು. ಆರಾಧನೆ, ಕೀರ್ತನೆ ಮತ್ತು ಪವಿತ್ರ ಬೈಬಲ್ ವಾಚನದೊಂದಿಗೆ ಯಾತ್ರೆ ಆರಂಭಗೊಂಡಿತು. ಮುಡಿಪು ಪುಣ್ಯಕ್ಷೇತ್ರದಲ್ಲಿ ಚರ್ಚ್ ಧರ್ಮಗುರು ವಂದನೀಯ ಫಾದರ್ ಆಸಿಸಿ ರೆಬೆಲ್ಲೊರವರು ಯಾತ್ರಾರ್ಥಿಗಳಿಗಾಗಿ ದಿವ್ಯ ಬಲಿಪೂಜೆ ಅರ್ಪಿಸಿದರು. ದೇವರ ವಾಕ್ಯದ ವಿವರ ನೀಡಿ ಪರಮ ಪ್ರಸಾದ ನೀಡಿದರು.

ನಂತರ ಮೊಡಂಕಾಪು ಬಂಟ್ವಾಳ ಪುಣ್ಯಕ್ಷೇತ್ರದ ಬಾಲಯೇಸುವಿನ ದೇವಾಲಯದಲ್ಲಿ ಧರ್ಮಗುರು ಅತೀ ವಂದನೀಯ ಫಾದರ್ ವಲೇರಿಯನ್ ಡಿಸೋಜರವರ ಮಾರ್ಗದರ್ಶನದಲ್ಲಿ ಆರಾಧನೆ, ಧನ್ಯವಾದ ಸಮರ್ಪಣೆಯ ಬಳಿಕ ದಿವ್ಯ ಪರಮ ಪ್ರಸಾದದ ಆಶೀರ್ವಚನ ಪಡೆದು ಯಾತ್ರಿಕರು ಭಕ್ತಿಗೀತೆ, ಜಪಮಾಲೆ, ಪಠಣವು ಸಂಜೆ 4ಗಂಟೆಗೆಯ ವರೆಗೆ ಏರ್ಪಡಿಸಲಾಗಿತ್ತು. ಅಧ್ಯಕ್ಷೆ ಭಗಿನಿ ಸಿಂತಿಯಾ ರೊಜಾರಿಯೊರವರ ಮುತುವರ್ಜಿಯಲ್ಲಿ ಈ ಯಾತ್ರೆ ನಡೆಯಿತು.

You may also like

News

ದಲಿತ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಮಹೇಶ್ ಭಟ್ ಬಂಧನಕ್ಕೆ ಡಿಎಚ್ಎಸ್ ಒತ್ತಾಯ – ಕಠಿಣ ಕ್ರಮಕ್ಕೆ ಆಗ್ರಹ

ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬವನು ನಿರಂತರ ಲೈಂಗಿಕ ಕಿರುಕುಳ ನೀಡುವ ಮೂಲಕ ಮಾನಸಿಕ
News

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕು – ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ

ಮಂಗಳೂರು : ಇನ್ನೊಬ್ಬರ ಬಾಳಿಗೆ ಬೆಳಕಾಗುವ ನೇತ್ರದಾನ ಶ್ರೇಷ್ಠ ದಾನವಾಗಿದ್ದು, ನೇತ್ರದಾನಿಗಳ ಬದ್ಧತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ ಹೇಳಿದರು. ದಕ್ಷಿಣ ಕನ್ನಡ

You cannot copy content of this page