ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ನಿಂದಲೇ ಬ್ಯಾಂಕ್ಗೆ ವಂಚನೆ – ಪ್ರಕರಣ ದಾಖಲು

ಮಂಗಳೂರು: ಮ್ಯಾನೇಜರ್ ತಾನು ಕಾರ್ಯನಿರ್ವಹಿಸುತ್ತಿದ್ದ ಬ್ಯಾಂಕ್ಗೆ ವಂಚಿಸಿದ ಬಗ್ಗೆ ಸೆನ್ ಠಾಣೆಯಲ್ಲಿ ನಿನ್ನೆ ಮಾರ್ಚ್ 16ರಂದು ಆದಿತ್ಯವಾರ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಆಫ್ ಬರೋಡಾದ ಕೊಣಾಜೆ ಶಾಖೆಯಲ್ಲಿ ಆರೋಪಿ ಮ್ಯಾನೆಜರ್ ಡೆರಿಕ್ ಅಜಿತ್ ಡಿಸೋಜ ಎಂಬಾತ 2022ರ ಸೆಪ್ಟಂಬರ್ 22ರಿಂದ 2024ರ ಫೆಬ್ರವರಿ 7ರ ತನಕ ಮ್ಯಾನೇಜರ್ ಆಗಿದ್ದು, ಈ ಸಂದರ್ಭ ಬ್ಯಾಂಕಿನ ಹಿರಿಯ ನಾಗರಿಕರು ಠೇವಣಿಯಲ್ಲಿರಿಸಿದ್ದ ಹಣವನ್ನು ಖಾತೆದಾರರಿಗೆ ತಿಳಿಯದಂತೆ 1,44,71,000 ರೂಪಾಯಿಯನ್ನು ಸಾಲ ರೂಪದಲ್ಲಿ ಇತರರ ಖಾತೆಗೆ ವರ್ಗಾಯಿಸಿದ್ದಾನೆ ಎನ್ನಲಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.