April 27, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಇನ್ನು ಎಲ್ಲೆಡೆಗೆ ಆಧಾರ್‌ ಕಾರ್ಡ್‌ ಕೊಂಡೊಯ್ಯುವ ಅಗತ್ಯವಿಲ್ಲ ಡೇಟಾ ಸೋರಿಕೆ ತಡೆಗಟ್ಟಲು ಹೊಸ ಆಧಾರ್‌ ಆ್ಯಪ್ ಬಿಡುಗಡೆ ಮಾಡಿದ ಸರಕಾರ

ಈಗ ಪ್ರತಿಯೊಂದೂ ಕೆಲಸಕ್ಕೂ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಸರಕಾರಿ ಮಾತ್ರವಲ್ಲದೆ ಕೆಲವು ಖಾಸಗಿ ಸಂಸ್ಥೆಗಳ ಕೆಲಸಗಳಿಗೂ ಆಧಾರ್‌ ಕೊಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಆಧಾರ್‌ ಮಾಹಿತಿ ದುರುಪಯೋಗವಾಗುವ ಭೀತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಂಪೂರ್ಣ ಸುರಕ್ಷಿತವಾಗಿರುವ ಆಧಾರ್‌ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಎಪ್ರಿಲ್ 9ರಂದು ಬುಧವಾರ ಹೊಸ ಆ್ಯಪ್ ಬಿಡುಗಡೆ ಮಾಡಿದ್ದಾರೆ.

ಈ ಆ್ಯಪ್ ಇದ್ದರೆ ಆಧಾರ್ ಕಾರ್ಡನ್ನು ಎಲ್ಲೆಡೆಗೆ ಕೊಂಡೊಯ್ಯುವ ಅಗತ್ಯವಿಲ್ಲ. ಪ್ರಸ್ತುತ ಈ ಅಪ್ಲಿಕೇಶನ್ ಬೀಟಾ ಆವೃತ್ತಿಯಲ್ಲಿದ್ದು, ಯುಐಡಿಎಐ ಇದನ್ನು ಪರೀಕ್ಷಿಸುತ್ತಿದೆ. ಎಲ್ಲ ಪರೀಕ್ಷೆಗಳು ಪೂರ್ಣಗೊಂಡ ನಂತರ ಅದನ್ನು ಪ್ಲೇಸ್ಟೋರ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಸಚಿವ ಅಶ್ವಿನಿ ವೈಷ್ಣವ್ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಹೊಸ ಆಧಾರ್ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುತ್ತದೆ. QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮತ್ತು ಮುಖ ದೃಢೀಕರಣವನ್ನು ಬಳಸುವ ಮೂಲಕ ಈ ಪ್ರಕ್ರಿಯೆ ಪೂರ್ಣವಾಗುತ್ತದೆ ಎಂಬುದನ್ನು ವೀಡಿಯೊ ವಿವರಿಸುತ್ತದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಹೊಸ ಆಧಾರ್ ಅಪ್ಲಿಕೇಶನ್ ಫೇಸ್ ಐಡಿ ದೃಢೀಕರಣ. ಈಗ ಯಾವುದೇ ರೀತಿಯ ಭೌತಿಕ ಕಾರ್ಡ್ ಮತ್ತು ಛಾಯಾಚಿತ್ರ ಪ್ರತಿಯನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ಟ್ವೀಟ್ಟರ್ ಎಕ್ಸ್‌ನಲ್ಲಿ ಸಚಿವ ಅಶ್ವಿನಿ ವೈಷ್ಣವ್ ಬರೆದುಕೊಂಡಿದ್ದಾರೆ.

ಹೊಸ ಆಧಾರ್ ಆ್ಯಪ್‌ನಲ್ಲಿ ಕ್ಯೂಆರ್ ಸ್ಕ್ಯಾನಿಂಗ್ ಮತ್ತು ಫೇಸ್ ಅಥೆಂಟಿಕೇಶನ್ ಮೂಲಕ ವೆರಿಫಿಕೇಶನ್ ಆಗುತ್ತೆ. ನಿಮ್ಮ ಒಪ್ಪಿಗೆಯಿಲ್ಲದೆ ಆಧಾರ್‌ನಲ್ಲಿರುವ ಯಾವುದೇ ಡೇಟಾ ಶೇರ್ ಆಗಲ್ಲ. ಪ್ರಸ್ತುತ ಇರುವ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡಿದಾಗ ಅಥವಾ ಅದರ ಪ್ರತಿಯನ್ನು ನೀಡಿದಾಗ ಅದರ ಮೇಲೆ ಮುದ್ರಿಸಲಾದ ಎಲ್ಲ ವಿವರಗಳು ಸೋರಿಕೆಯಾಗುತ್ತವೆ. ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿ ಬಳಕೆದಾರರ ಡೇಟಾ ಗೌಪ್ಯತೆಗೆ ಯಾವುದೇ ಬೆದರಿಕೆ ಇರುವುದಿಲ್ಲ. ಅಂದರೆ ಆಧಾರ್ ಕಾರ್ಡ್‌ನ ವಿವರಗಳು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ. ಹೊಸ ಆಧಾರ್ ಅಪ್ಲಿಕೇಶನ್‌ನಲ್ಲಿರುವ ದೃಢೀಕರಣ ಪ್ರಕ್ರಿಯೆಯ ಮೂಲಕ ಇತರ ವ್ಯಕ್ತಿಗೆ ಅಗತ್ಯವಿರುವ ವಿವರಗಳು ಮಾತ್ರ ಅವನನ್ನು ತಲುಪುತ್ತವೆ. ಆಧಾರ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಪರಿಶೀಲನೆಯನ್ನು QR ಸ್ಕ್ಯಾನಿಂಗ್ ಮತ್ತು ಮುಖ ದೃಢೀಕರಣದ ಮೂಲಕ ಮಾತ್ರ ಮಾಡಲಾಗುತ್ತದೆ. ಗುರುತು ದೃಢೀಕರಣ ಮತ್ತು ಪರಿಶೀಲನೆಗಾಗಿ ಎಲ್ಲಿಯೂ ಮೂಲ ದಾಖಲೆಗಳು ಅಥವಾ ನಕಲು ಪ್ರತಿಗಳನ್ನು ತೋರಿಸುವ ಅಗತ್ಯವಿಲ್ಲ. ಹೋಟೆಲ್‌ಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಆಧಾರ್‌ನಂತಹ ದಾಖಲೆಗಳ ನಕಲು ಪ್ರತಿಗಳನ್ನು ಒದಗಿಸುವ ಅಗತ್ಯವಿಲ್ಲ.

 

 

You may also like

News

‘ಪಿದಾಯಿ’ ತುಳು ಚಿತ್ರ ಮೇ 9ಕ್ಕೆ ಬೆಳ್ಳಿತೆರೆಗೆ

ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ರವರು ನಿರ್ಮಾಣ ಮಾಡಿದ, ರಮೇಶ್ ಶೆಟ್ಟಿಗಾರ್ ಬರೆದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ
News

ಪರಮಪೂಜ್ಯ ಪೋಪ್ ಫ್ರಾನ್ಸಿಸ್‌ರವರಿಗೆ MCC ಬ್ಯಾಂಕ್ ವತಿಯಿಂದ ಗೌರವ ನಮನ

ಮಂಗಳೂರಿನ ಹಂಪನಕಟ್ಟೆಯಲ್ಲಿರುವ MCC ಬ್ಯಾಂಕ್ ಇದರ ಆಡಳಿತ ಕಛೇರಿಯಲ್ಲಿ ಕಥೊಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ರವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಎಪ್ರಿಲ್ 24ರಂದು

You cannot copy content of this page