ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿದ ಮಂಗಳೂರು ಹೊಯ್ಸಳ – 5 ಪೊಲೀಸರು

ಆಟೋ ಬಾಡಿಗೆ ವಿಚಾರದಲ್ಲಿ ಇಡೀ ಮಂಗಳೂರು ಮಹಾನಗರ ಪಾಲಿಕೆ ಪ್ರದೇಶದಲ್ಲಿ ಪ್ರತಿದಿನ ಏರಿದ ಸ್ವರದಲ್ಲಿ ಚರ್ಚೆ, ಗಲಾಟೆ, ಹಾಗೂ ಕೈ ಕೈ ಮಿಲಾಯಿಸಿ ಜಗಳ ಆಡುವುದು ಇತ್ತೀಚೆಗೆ ಸರ್ವೇಸಾಮಾನ್ಯವಾಗಿ ಹೋಗಿದೆ. ಇಂತಹದೇ ಒಂದು ಜಗಳವು ಏಪ್ರಿಲ್ 20ರಂದು ಆದಿತ್ಯವಾರ ರಾತ್ರಿ 11 ಗಂಟೆಗೆ ವೆನ್ಲಾಕ್ ಆಸ್ಪತ್ರೆಯ ಪಕ್ಕದಲ್ಲಿ ನಡೆದಿದ್ದು, ಈ ಬಗ್ಗೆ ಆಸ್ಪತ್ರೆಯಿಂದ ಪೊಲೀಸರ ಹೊಯ್ಸಳದ 112ಕ್ಕೆ ದೂರು ಬಂತು.
ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿ ಬಾಡಿಗೆ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದ ಇಬ್ಬರು ಯುವಕರ ಜಗಳವನ್ನು ನಿಲ್ಲಿಸಿ, ಅವರಿಗೆ ಸೂಕ್ತ ತಿಳುವಳಿಕೆಯನ್ನು ನೀಡಿ ಈ ಸಮಸ್ಯೆಯನ್ನು ಸೌಹಾರ್ದವಾಗಿ ಬಗೆಹರಿಸಲಾಗಿದೆ.