May 15, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಜ್ಪೆ ಚರ್ಚ್ ನ ಯುವಕ ಜೋಶ್ವಾ ಪಿಂಟೊ ಅಪಘಾತದಲ್ಲಿ ಮೃತ್ಯು

ಏಪ್ರಿಲ್ 20ರಂದು ಈಸ್ಟರ್ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ, ಮಂಗಳೂರಿನಿಂದ ತನ್ನ ಮಿತ್ರರೊಡನೆ ಕಾರಲ್ಲಿ ವಾಪಸ್ ಪೆರ್ಮುದೆಗೆ ಬರುವಾಗ, ಆಕಸ್ಮಿಕ ಅವಘಡ ಸಂಭವಿಸಿ ಬಜ್ಪೆ ಚರ್ಚ್ ನ ಯುವಕ 27 ವರ್ಷ ಪ್ರಾಯದ ಜೋಶ್ವಾ ಪಿಂಟೊ ಮೃತಪಟ್ಟಿದ್ದಾರೆ. ತನ್ನ ಕಾರಲ್ಲಿ ಮಿತ್ರರೊಂದಿಗೆ ಬರುವಾಗ ರಸ್ತೆಯಲ್ಲಿನ ಹೊಂಡಕ್ಕೆ ಕಾರು ಬಡಿದು, ನಿಯಂತ್ರಣ ಕಳೆದುಕೊಂಡು ತಿರುವಿನಲ್ಲಿ ಕಾರು ತಲೆಕೆಳಗಾಗಿ ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ತನ್ನ ಸಮುದಾಯದಲ್ಲಿ ನಿಸ್ವಾರ್ಥ ಸೇವೆ ಮಾಡುವ ಜೋಶ್ವಾ ಪಿಂಟೊ ಬಜ್ಪೆ ಚರ್ಚ್ ನ ಸದಸ್ಯರಾಗಿದ್ದರು. ಆತನ ನಾಯಕತ್ವ ಗುಣಗಳಿಗೆ ಹಾಗೂ ಎಲ್ಲರೊಂದಿಗೆ ಸ್ನೇಹದಿಂದ ಇದ್ದ ಇವರನ್ನು ಚರ್ಚಿನವರೆಲ್ಲರೂ ಗೌರವಿಸುತ್ತಿದ್ದರು. ಆತನ ಆಕಸ್ಮಿಕ ಸಾವಿಗೆ ಎಲ್ಲಾ ಕಡೆಯಿಂದಲೂ ಸಂತಾಪ ಸೂಚಕಗಳು ಕುಟುಂಬಕ್ಕೆ ಹರಿದು ಬರುತ್ತಿವೆ. ಅವರ ಅಂತ್ಯಕ್ರಿಯೆಯು ನಾಳೆ ಏಪ್ರಿಲ್ 22ರಂದು ಮಂಗಳವಾರ ಸಾಯಂಕಾಲ 4 ಗಂಟೆಗೆ ಸಂತ ಜೋಸೆಫರ ದೇವಾಲಯ ಬಜಪೆಯಲ್ಲಿ ನಡೆಯಲಿದೆ.

You may also like

News

ಶ್ರೀರಾಮ್ ಫೈನಾನ್ಸ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ಮಾನ

ಶ್ರೀರಾಮ್ ಫೈನಾನ್ಸ್ ವತಿಯಿಂದ ಶ್ರೀರಾಮ್ ಗ್ರಾಹಕರ ಮಕ್ಕಳಿಗೆ ಸ್ಕಾಲರ್ಷಿಪ್ ವಿತರಣೆ ಮಾಡುತ್ತಿದ್ದಾರೆ. ಪ್ರಸ್ತುತ ವರ್ಷದಲ್ಲಿ 8ನೇ ತರಗತಿಯಿಂದ 11ನೇ ತರಗತಿಯ ವರೆಗೆ ಕಲಿಯುತ್ತಿರುವ ಗ್ರಾಹಕರ 60% ಮೇಲ್ಪಟ್ಟು
News

ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಲು ತಂಡ ರಚನೆ

ಮಂಗಳೂರು:  ಜಿಲ್ಲೆಯ ರಾಜ್ಯ ಮತ್ತು ಗ್ರಾಮೀಣ ಭಾಗದ ರಸ್ತೆ ಬದಿಯ ತ್ಯಾಜ್ಯ ಬೀಳುವುದನ್ನು ತಡೆಯುವ ಸಲುವಾಗಿ “ಸ್ವಚ್ಛತೆಗಾಗಿ ನಿಮ್ಮೊಂದಿಗೆ ನಾವು ನಮ್ಮೊಂದಿಗೆ ನೀವು” ಅಭಿಯಾನ ಯಶ್ವಸ್ವಿಯಾಗಿ ಕೈಗೊಳ್ಳುವಂತೆ

You cannot copy content of this page