May 10, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಹೋಟೆಲ್ ಮೋತಿಮಹಲ್, 1.70 ಎಕ್ರೆ ಜಮೀನು ಹಾಗೂ ರೂಪಾಯಿ 11.50 ಕೋಟಿ ಸಮೇತ ಮಂಗಳೂರು ಧರ್ಮಕ್ಷೇತ್ರದ ಸಂಸ್ಥೆಗೆ ಹಸ್ತಾಂತರಿಸಿದ ಎ.ಜೆ. ಶೆಟ್ಟಿ ಆ್ಯಂಡ್ ಕಂಪೆನಿ

ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ನಿನ್ನೆ ಎಪ್ರಿಲ್ 30ರಂದು ಬುಧವಾರ ಎ.ಜೆ ಶೆಟ್ಟಿ ಆ್ಯಂಡ್ ಕಂಪನಿಯು, ಹೋಟೆಲ್ ಮೋತಿಮಹಲ್ ಕಟ್ಟಡ ಸಮೇತ 1.70 ಎಕ್ರೆ ಜಮೀನು ಹಾಗೂ 11.50 ಕೋಟಿ ರೂಪಾಯಿ ಮೂಲ ಮಾಲಕರಾದ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಸೈಂಟ್ ಆ್ಯಂಟನೀಸ್ ಚಾರಿಟೇಬಲ್ ಟ್ರಸ್ಟಿಗೆ ಕೋರ್ಟ್ ಆದೇಶದಂತೆ ಹಸ್ತಾಂತರಿಸಿತು.

ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಹಾಗೂ ಚಾರಿಟೇಬಲ್ ಟ್ರಸ್ಟ್ ಮೂಲಿ ಹಾಗೂ ಮೂಲಗೇಣಿ ಹಕ್ಕು ಹೊಂದಿರುವ 1.70 ಎಕರೆ ಜಮೀನು ಹಾಗೂ ಅದರಲ್ಲಿರುವ ಮೋತಿಮಹಲ್ ಹೋಟೆಲ್ ಅನ್ನು ಲೀಸ್ಡ್ ಶರ್ತ ಪ್ರಕಾರ ಮೂಲಿಗೆ ಒಪ್ಪಿಸಲು ಹಾಗೂ 2011ರ ನಂತರ ಅಂದರೆ ಲೀಸ್ ಅವಧಿ ಮುಗಿದ ಬಳಿಕವೂ ಸ್ವಾಧೀನವನ್ನು ಎ.ಜೆ. ಶೆಟ್ಟಿ ಆ್ಯಂಡ್ ಕಂಪೆನಿ ಬಿಟ್ಟು ಕೊಡದ ಕಾರಣಕ್ಕಾಗಿ ಸೈಂಟ್ ಆ್ಯಂಟನೀಸ್ ಚಾರಿಟೇಬಲ್ ಟ್ರಸ್ಟ್ ಗೆ 11.50 ಕೋಟಿ ರೂಪಾಯಿಗಳನ್ನು ಎಪ್ರಿಲ್ 30ರ ಒಳಗೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ನಿನ್ನೆ ಎಪ್ರಿಲ್ 30ರಂದು 1.70 ಎಕ್ರೆ ಜಮೀನು ಅದರಲ್ಲಿರುವ ಕಟ್ಟಡ ಹಾಗೂ 11.50 ಕೋಟಿ ರೂಪಾಯಿ ಹಸ್ತಾಂತರಿಸುವ ಮೂಲಕ ಕೋರ್ಟ್ ಆದೇಶಕ್ಕೆ ಎ.ಜೆ. ಶೆಟ್ಟಿ ಆ್ಯಂಡ್ ಕಂಪೆನಿ ಗೌರವಿಸಿತು.

ಸೈಂಟ್ ಆ್ಯಂಟನೀಸ್ ಚಾರಿಟೇಬಲ್ ಟ್ರಸ್ಟ್ ಪರವಾಗಿ ವಕೀಲರಾದ ಎಂ.ಪಿ. ನೊರೊನ್ಹಾ ಹಾಗೂ ವಂದನೀಯ ಫಾದರ್ ಜೆ.ಬಿ. ಕ್ರಾಸ್ತ ಉಪಸ್ಥಿತರಿದ್ದರು.

You may also like

News

ಪಾವೂರು ಉಳಿಯ ದ್ವೀಪಕ್ಕೆ ತೂಗು ಸೇತುವೆ ಮಂಜೂರು

ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ನೇತೃತ್ವದಲ್ಲಿ ಸ್ಪೀಕರ್ ಯು.ಟಿ. ಖಾದರ್ ರವರಿಗೆ ಕೃತಜ್ಞತೆ – ಸನ್ಮಾನ ಪಾವೂರು ಉಳಿಯ ದ್ವೀಪದ ನಿವಾಸಿಗಳಿಗೆ ತೂಗು
News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕರಿಯಂಗಳ ಗ್ರಾಮದ ಪೊಳಲಿ ಬಳಿ  ಪುನಶ್ಚೇತನ ಗೊಂಡಿರುವ ಕಾಳಿ ಸರೋವರದ ಹಸ್ತಾಂತರ ಕಾರ್ಯಕ್ರಮ

ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಕೆರೆ, ಸರೋವರಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಇದರಿಂದಾಗಿ ಸ್ಥಳೀಯ ಬೋರ್‌ವೆಲ್ ಹಾಗೂ ಬಾವಿಗಳಲ್ಲಿ ನೀರು ಮರುಪೂರಣಗೊಂಡಿದೆ. ಅನೇಕ ಕೆರೆಗಳು ಹೂಳು

You cannot copy content of this page