May 13, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಗಾಯಗೊಂಡ ನೌಶಾದ್ ರನ್ನು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜರವರು ಆಸ್ಪತ್ರೆಯಲ್ಲಿ ಭೇಟಿ – ಪರಿಹಾರದ ಭರವಸೆ

ಮೇ 2ರಂದು ಶುಕ್ರವಾರ ರಾತ್ರಿ 3:30 ಗಂಟೆಗೆ ಕಣ್ಣೂರು ನಿವಾಸಿ ನೌಶಾದ್ ಎಂಬುವರಿಗೆ ಚೂರಿ ಇರಿತದಿಂದ ಗಂಭೀರ ಗಾಯಗಳಾಗಿತ್ತು. ಅವರು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದೇಶಿ ಪ್ರವಾಸದಲ್ಲಿದ್ದ MLC ಐವನ್ ಡಿಸೋಜರವರು ಇಂದು ಮೇ 4ರಂದು ಆದಿತ್ಯವಾರ ಮಂಗಳೂರಿಗೆ ಆಗಮಿಸಿದ ದಿನದಂದೇ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೌಶಾದ್ ರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಸರಕಾರದಿಂದ ಸಿಗುವ ಪರಿಹಾರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕೂಡಲೇ ಒದಗಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಅಶ್ರಫ್ ಬಂದರ್, ಇಮ್ರಾನ್ ಕುದ್ರೋಳಿ, ಸಲೀಂ, ಸಲೀಹ್ ಬಜ್ಪೆ, ನವಾಜ್ ಜೆಪ್ಪು, ಹಬೀಬುಲ್ಲಾ ಕಣ್ಣೂರು, ಮಾಜಿ ಮನಪಾ ಸದಸ್ಯರು ಬಾಸ್ಕರ್ ರಾವ್, ನಜೀರ್ ಬಜಾಲ್ ಹಾಗೂ ಇತರರು ಉಪಸ್ಥಿತರಿದ್ದರು.

You may also like

News

ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಲು ತಂಡ ರಚನೆ

ಮಂಗಳೂರು:  ಜಿಲ್ಲೆಯ ರಾಜ್ಯ ಮತ್ತು ಗ್ರಾಮೀಣ ಭಾಗದ ರಸ್ತೆ ಬದಿಯ ತ್ಯಾಜ್ಯ ಬೀಳುವುದನ್ನು ತಡೆಯುವ ಸಲುವಾಗಿ “ಸ್ವಚ್ಛತೆಗಾಗಿ ನಿಮ್ಮೊಂದಿಗೆ ನಾವು ನಮ್ಮೊಂದಿಗೆ ನೀವು” ಅಭಿಯಾನ ಯಶ್ವಸ್ವಿಯಾಗಿ ಕೈಗೊಳ್ಳುವಂತೆ
News

Golden Jubilee Radiance at Bethany Mother House – 2025

The Congregation of the Sisters of the Little Flower of Bethany was immersed in a spirit of thanksgiving and joy

You cannot copy content of this page