May 10, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದುಬೈ ಡ್ಯೂಟಿ ಫ್ರೀ ಮಿಲ್ಲೇನಿಯಂ ಮಿಲಿನಿಯರ್ ಲಾಟರಿಯಿಂದ ಕಾಸರಗೋಡು ನಿವಾಸಿಗೆ ಒಲಿಯಿತು 8.5 ಕೋಟಿ ರೂಪಾಯಿ

ದುಬೈ ಡ್ಯೂಟಿ ಫ್ರೀ ಮಿಲ್ಲೇನಿಯಂ ಮಿಲಿನಿಯರ್ ಲಾಟರಿ ಖರೀದಿಸಿರುವ ಕಾಸರಗೋಡು ನಿವಾಸಿಯೋರ್ವರಿಗೆ 8.5 ಕೋಟಿ ರೂಪಾಯಿ ಅದೃಷ್ಟ ಒಲಿದಿದೆ. ಸದ್ಯ ಯುಎಇ ಅಜ್ಮಾನ್‌ನಲ್ಲಿ ವಾಸವಾಗಿರುವ ವೇಣುಗೋಪಾಲ್ ಮುಲ್ಲಚ್ಚೇರಿ ಎಪ್ರಿಲ್ 23ರಂದು ದುಬೈ ವಿಮಾನ ನಿಲ್ದಾಣದ ಟರ್ಮಿನಲ್ -2ರ ಒಳಗಿರುವ ಡ್ಯೂಟಿ ಫ್ರೀ ಕೌಂಟರ್‌ನಲ್ಲಿ ಈ ಲಾಟರಿ ಟಿಕೇಟ್ ಖರೀದಿಸಿದ್ದರು. ನಿನ್ನೆ ಲಾಟರಿ ಡ್ರಾ ನಡೆದಿದ್ದು ವೇಣುಗೋಪಾಲ್ ಅವರಿಗೆ ದಾಖಲೆ ಮೊತ್ತದ ಅದೃಷ್ಟ ಒಲಿದಿದೆ.

ವೇಣುಗೋಪಾಲ್ ಅಜ್ಮಾನಿನ ವಾಣಿಜ್ಯ ಸಂಸ್ಥೆಯೊಂದರಲ್ಲಿ ಐಟಿ ಸಪೋರ್ಟ್ ಉದ್ಯೋಗಿ. ಇವರು ಕಳೆದ 15 ವರ್ಷಗಳಿಂದ ಡ್ಯೂಟಿ ಫ್ರೀ ಟಿಕೇಟುಗಳನ್ನು ಖರೀದಿಸಿ ಅದೃಷ್ಟ ಪರೀಕ್ಷಿಸುತ್ತಿದ್ದರು. “ಡ್ರಾ ದಿನದಂದು ದುಬೈ ಡ್ಯೂಟಿ ಫ್ರೀ ಫೇಸ್‌ಬುಕ್ ಫೇಜ್‌ನಲ್ಲಿ ವಿಜೇತರ ಆಯ್ಕೆಯನ್ನು ಲೈವ್ ನೋಡುತ್ತಿದ್ದರಂತೆ. ತನ್ನ ಟಿಕೇಟ್‌ನ ನಂಬರ್ ಅನೌನ್ಸ್ ಮಾಡಿದಾಗ ಏಕಾಏಕಿ ಭ್ರಮಾ ಲೋಕದಲ್ಲಿದ್ದೇನೆ ಎಂದು ಭಾವಿಸಿದ್ದರಂತೆ. ಡ್ಯೂಟಿ ಫ್ರೀ ಲಾಟರಿ ಸಂಸ್ಥೆಯಿಂದ ಅಧಿಕೃತ ಕರೆ ಬಂದಾಗ ವಿಶೇಷ ಸಂತೋಷವಾಯಿತು” ಎಂದು ವೇಣುಗೋಪಲ್ ಜಿಲ್ಲೆಯ ಮಾಧ್ಯಮಗಳಿಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

You may also like

News

ವಿನೋದ್ ಕುಮಾರ್ ಎಂ. ಅವರಿಗೆ ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಜತ ಪದಕ

ರಾಜ್ಯ ಮಟ್ಟದ ಪವರ್‌ಲಿಫ್ಟಿಂಗ್ ತೀರ್ಪುಗಾರರಾದ ವಿನೋದ್ ಕುಮಾರ್ ಎಂ. ಇವರು ಇತ್ತೀಚೆಗೆ ಬೆಂಗಳೂರು ನಗರದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಮಾಸ್ಟರ್ಸ್ ಪವರ್‌ಲಿಫ್ಟಿಂಗ್ M66 ಕೆಜಿ ಸ್ಪರ್ಧೆಯಲ್ಲಿ
News

ಪಾವೂರು ಉಳಿಯ ದ್ವೀಪಕ್ಕೆ ತೂಗು ಸೇತುವೆ ಮಂಜೂರು

ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ನೇತೃತ್ವದಲ್ಲಿ ಸ್ಪೀಕರ್ ಯು.ಟಿ. ಖಾದರ್ ರವರಿಗೆ ಕೃತಜ್ಞತೆ – ಸನ್ಮಾನ ಪಾವೂರು ಉಳಿಯ ದ್ವೀಪದ ನಿವಾಸಿಗಳಿಗೆ ತೂಗು

You cannot copy content of this page