November 5, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಆಂಜೆಲೋರ್‌ ಚರ್ಚ್ ಪಾಲನಾ ಸಮಿತಿಯಿಂದ ‘ಪ್ರಕೃತಿಯಲ್ಲಿ ಒಂದು ದಿನ’  ಕಾರ್ಯಕ್ರಮ

ಮಂಗಳೂರಿನ ನಾಗುರಿಯಲ್ಲಿರುವ ಗಾರ್ಡಿಯನ್‌ ಏಂಜಲ್ಸ್‌ ಚರ್ಚ್, ಆಂಜೆಲೋರ್‌, ಇದರ ಚರ್ಚ್ ಪಾಲನಾ ಸಮಿತಿಯ ಸದಸ್ಯರು ‘ಪ್ರಕೃತಿಯಲ್ಲಿ ಒಂದು ದಿನ’ವನ್ನು ಬ್ರಹ್ಮಾವರದ ರಮಣೀಯ ತಾಣದಲ್ಲಿ ಕಳೆದರು.

ಚರ್ಚ್ ಗಳಲ್ಲಿ ಪ್ರತೀ ಮೂರು ವರ್ಷಗಳಿಗೊಮ್ಮೆ ಚರ್ಚ್ ಪಾಲನಾ ಸಮಿತಿಗೆ ಚುನಾವಣೆ ನಡೆಯುತ್ತಿದ್ದು, ಈ ಸಮಿತಿಯ ಸೇವಾವಧಿ  2025 ಡಿಸೆಂಬರ್ 31ರ ವರೆಗೆ ಇರುತ್ತದೆ. ‘ಪ್ರಕೃತಿಯಲ್ಲಿ ಒಂದು ದಿನ’ ಕಾರ್ಯಕ್ರಮದಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ಫೆಡ್ರಿಕ್‌ ಮೊಂತೇರೊ, ವಾಸ್ತವ್ಯ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿ ಫೆರ್ನಾಂಡಿಸ್‌, ಚರ್ಚ್ ಉಪಾಧ್ಯಕ್ಷ ಪಾವ್ಲ್ ರೊಡ್ರಿಗಸ್‌, ಕಾರ್ಯದರ್ಶಿ ಲೊಲಿನಾ ಡಿಸೋಜ, ಸರ್ವ ಆಯೋಗಗಳ ಸಂಚಾಲಕಿ ರೆನಿಟಾ ಮಿನೇಜಸ್‌, ಕಪಿತಾನಿಯೋ ಕಾನ್ವೆಂಟಿನ ಸುಪೀರಿಯರ್‌ ಭಗಿನಿ ಪ್ರೆಸಿಲ್ಲಾ ಮಿನೇಜಸ್‌, ಬೆಲ್ವದೆರೆ ಕಾನ್ವೆಂಟಿನ ಸುಪೀರಿಯರ್ ಭಗಿನಿ ಸ್ಟೆಫಾನಿಯೋ ಕುವೆಲ್ಲೊ, ಕಾಸಾಗಯಾ ಕಾನ್ವೆಂಟಿನ ಸುಪೀರಿಯರ್ ಭಗಿನಿ ಪ್ರಮಿಳಾ ಡಿಸೋಜ ಮುಂತಾದವರು ಭಾಗವಹಿಸಿದ್ದರು.

ಈ ಪ್ರಕೃತಿ ಪ್ರವಾಸದ ಸಂದರ್ಭದಲ್ಲಿ ಪ್ರಕೃತಿಯ ಸೌಂದಯರ್ವನ್ನು ಸವಿಯುವುದರ ಜತೆಗೆ ಚರ್ಚ್ ನ ಸಮಗ್ರ ಏಳಿಗೆಗಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಇದೇ ವೇಳೆ ವಿವಿಧ ಆಟೋಟಗಳನ್ನು ಕೂಡಾ ಆಯೋಜಿಸಲಾಗಿತ್ತು.

You may also like

News

ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಎತ್ತರ ಜಿಗಿತದಲ್ಲಿ ಅಶ್ಮಿತಾ ಸುವಾರಿಸ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಥೊಲಿಕ್ ಸಭಾ ಸೂರಿಕುಮೇರು ಘಟಕದಿಂದ ಅಭಿನಂದನೆ ಸೂರಿಕುಮೇರು ಚರ್ಚ್ ವ್ಯಾಪ್ತಿಯ ಅರುಣ್ ಮತ್ತು ಪ್ರೀತಿ ಸುವಾರಿಸ್ ದಂಪತಿ ಪುತ್ರಿ ಅಶ್ಮಿತಾ ಸುವಾರಿಸ್ ಬಂಟ್ವಾಳ ತಾಲೂಕು ಮಟ್ಟದಲ್ಲಿ ನಡೆದ
News

Bethany Champion Program 2025 – A Celebration of Leadership and Holistic Growth

The Bethany Champion Program was successfully hosted at Saint Raymond’s English Medium School Vamanjoor, on November 4. The event brought

You cannot copy content of this page