May 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ಅಧ್ಯಕ್ಷರಾಗಿ ವಿಜಯ್ ಕಾರ್ಡೋಜ – ಉಪಾಧ್ಯಕ್ಷರಾಗಿ ಮೆಲ್ ರೊಯ್ ಡಿಸೋಜ ಆಯ್ಕೆ

2025-26 ನೇ ಸಾಲಿಗೆ ನಡೆದ ವಾರ್ಷಿಕ ಚುನಾವಣೆ

ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ಸಮಿತಿಯ ಮಹಾಸಭೆಯು ಜುಲಾಯ್ 6ರಂದು ಆದಿತ್ಯವಾರ ಮಂಗಳೂರಿನ ರುಸಾರಿಯೊ ಕೆಥೆಡ್ರಲ್ ಚರ್ಚ್ ಸಭಾಂಗಣದಲ್ಲಿ ನಡೆಯಿತು. ಇದರಲ್ಲಿ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಚುನಾವಣೆಯು ನಡೆಯಿತು. ಈ ಚುನಾವಣೆಯಲ್ಲಿ ಮೂಡಬಿದ್ರೆ ಚರ್ಚ್ ನ ವಿಜೋಯ್ ಅಶ್ವಿನ್ ಕಾರ್ಡೋಜ ಕೇಂದ್ರೀಯ ಅಧ್ಯಕ್ಷರಾಗಿ ಹಾಗೂ ಅಲ್ಲಿಪಾದೆ ಚರ್ಚ್ ನ  ಮೆಲ್ ರೊಯ್  ಪ್ರೇಮ್ ಡಿಸೋಜ ಉಪಾಧ್ಯಕ್ಷರಾಗಿ ಆಯ್ಕೆಯಾದರು.

 

ICYM ಕೇಂದ್ರೀಯ ಅಧ್ಯಕ್ಷ ವಿನ್ಸ್ಟನ್ ಜೋಯಲ್ ಸಿಕ್ವೇರಾ ಅತಿಥಿಗಳನ್ನು ಮತ್ತು ಸಭೆಯನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆಶ್ಲಿನ್ ಅವಿತಾ ಡಿಸೋಜ ವಾರ್ಷಿಕ ವರದಿಯನ್ನು ಮಂಡಿಸಿದರು. 2024-25ರ ವಾರ್ಷಿಕ ಲೆಕ್ಕಪತ್ರವನ್ನು ಖಜಾಂಚಿ ರೀನಾ ಅಂಜಲಿ ಕ್ರಾಸ್ತಾ ಸಭೆಯಲ್ಲಿ ಮಂಡಿಸಿದರು. ಐಸಿವೈಎಂ ಕೇಂದ್ರೀಯ ಸಮಿತಿಯ ವಾರ್ಷಿಕ ಚುನಾವಣೆಯು ಮಧ್ಯಾಹ್ನ 12:00 ರಿಂದ 2:00 ತನಕ ನಡೆಯಿತು. ಚುನಾವಣಾಧಿಕಾರಿಯಾಗಿ ಕುಳೂರು ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್  ವಿಕ್ಟರ್ ವಿಜಯ್ ಲೋಬೊರವರು ಆಗಮಿಸಿ ಚುನಾವಣೆಯನ್ನು ನಡೆಸಿಕೊಟ್ಟರು.

2025-26 ನೇ ಸಾಲಿನ ನೂತನ ಪದಾಧಿಕಾರಿಗಳಾಗಿ Vijoy Ashwin Cardoza Moodbidri – President, Maria Dsilva Surathkal – General Secretary, Melroy Prem Dsouza Allipade, Vice President, Ashinta Monteiro – Lady Vice President, Floyd Vincent Pinto Neerude – Joint Secretary, Supreeth Fernandes Arva – Treasurer, Muriel Mascarenhas -Social Cause Secretary ಆಯ್ಕೆಯಾದರು. ಚುನಾವಣೆಯ ನಂತರ ಎಲ್ಲಾ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.

ಇತರ ಸಮಿತಿ ಸದಸ್ಯರು: Regional Vice President – Jaison Dsouza Fajir, Regional Representative Female – Clarin Ashwitha Dsouza, MIJARC Asia Coordinator – Viola Reshma Lewis, Immediate Past President – Winston Jeol Sequeira Hospet.

 

 

ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ನಿರ್ದೇಶಕರಾದ ವಂದನೀಯ ಫಾದರ್ ಅಶ್ವಿನ್ ಕಾರ್ಡೋಜ, ICYM ನಿಯೋಜಿತ ನಿರ್ದೇಶಕರಾದ ವಂದನೀಯ ಫಾದರ್ ಪ್ರವೀಣ್ ಡಿಸೋಜ, ಚುನಾವಣಾಧಿಕಾರಿ ಹಾಗೂ ಕುಳೂರು ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್  ವಿಕ್ಟರ್ ವಿಜಯ್ ಲೋಬೊ, ರುಸಾರಿಯೊ ಕೆಥೆದ್ರಲ್ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ವಲೇರಿಯನ್ ಡಿಸೋಜ ಮತ್ತು ನೆರೆದವರೆಲ್ಲರೂ ನೂತನ ಪದಾಧಿಕಾರಿಗಳನ್ನು ಮತ್ತು ಇತರ ಸಮಿತಿ ಸದಸ್ಯರುಗಳನ್ನು ಅಭಿನಂದಿಸಿ ಶುಭ ಹಾರೈಸಿದರು.

You may also like

News

ಉಡುಪಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವಾರ್ಷಿಕ ಸಭೆ – ಸಂಘಟನೆ ಬಲವರ್ಧನೆಗೆ ಪಣ

ಉಡುಪಿ: ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವಾರ್ಷಿಕ ಮಹಾಸಭೆಯು ಮೇ 1ರಂದು ಶುಕ್ರವಾರ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯಶಸ್ವಿಯಾಗಿ ಜರುಗಿತು. ಜಿಲ್ಲೆಯ ಯುವ ಶಕ್ತಿಯನ್ನು ರಾಜಕೀಯವಾಗಿ
News

Mumbai Archbishop Cardinal Oswald Gracias Offers Solace to Residents of Saint Anthony’s Ashram

MANGALURU: His Eminence Cardinal Oswald Gracias, Archbishop of Mumbai and a member of the Pope’s Council of Cardinals, paid a

You cannot copy content of this page