ಮಾಜಿ ಸೈನಿಕರಿಂದ ಗುತ್ತಿಗೆ ನವೀಕರಿಸಲು ಪುತ್ತೂರು ಶಾಸಕ ಅಶೋಕ್ ರೈಯವರಿಗೆ ವಿನಂತಿ ಪತ್ರ
ಕರ್ನಾಟಕದ ವಿವಿಧ ಭಾಗಗಳಲ್ಲಿ ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆಯ ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ಕಾರ್ಯಗಳಿಗೆ ಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುವ ಮಾಜಿ ಸೈನಿಕರ ಕೆಲಸವು ಇದೇ ವರ್ಷದ ಮೇ 22ರಂದು ಮುಕ್ತಾಯಗೊಂಡಿದೆ. ಆದರೆ ಎರಡು ತಿಂಗಳಾದರೂ ಕೂಡ ಇದನ್ನು ನವೀಕರಿಸಿಲ್ಲ. ಆದುದರಿಂದ ಈ ಕೆಲಸವನ್ನು ಮಾಡುವ ಸುಮಾರು 12 ಜನ ಮಾಜಿ ಸೈನಿಕರು ಇದನ್ನು ನವೀಕರಣಗೊಳಿಸಲು ಸಂಬಂಧಪಟ್ಟ ಸರಕಾರದ ಅಧಿಕಾರಿಗಳ ಗಮನಕ್ಕೆ ತರುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಲಿಖಿತ ಪತ್ರ ಒಂದನ್ನು ನೀಡಿದ್ದಾರೆ.


ಈ ಪತ್ರಕ್ಕೆ ಮಾಜಿ ಸೈನಿಕರಾದ ಸುನಿಲ್ ಕುಮಾರ್, ಅಶೋಕ್ ಎಂ., ರಾಜೇಶ್, ಮೋಹನ್ ಎಸ್., ವಿಶ್ವನಾಥ ಕೊಳ್ಕೆ, ರಂಜಿತ್ ಶೆಟ್ಟಿ, ಜಗದೀಶ್ ಎಂ., ಉಮೇಶ್ ಎನ್., ಶಿವಪ್ರಸಾದ್ ಡಿ.ಕೆ., ದಿನೇಶ್ ಎಸ್., ಪುರಂದರ ಗೌಡ ಹಾಗೂ ಬೇಬಿ ಟಿ. ಸಹಿ ಹಾಕಿದ್ದಾರೆ.




