May 2, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಛತ್ತೀಸಗಢದಲ್ಲಿಇಬ್ಬರು ಕ್ರೈಸ್ತಧರ್ಮ ಭಗನಿಯರ ಬಂಧನ – KSMCA ವತಿಯಿಂದ ಅಧ್ಯಕ್ಷರಾದ ಬಿಟ್ಟಿ ನೆಡುನಿಲಂರವರಿಂದ ಖಂಡನೆ

ಛತ್ತೀಸಗಢದಲ್ಲಿ ಇಬ್ಬರು ಧರ್ಮಭಗನಿಯರು ಸೇರಿ ಮೂವರನ್ನು ಸತ್ಯಕ್ಕೆ ದೂರವಾದ ಕಾರಣಗಳನ್ನು ಮುಂದಿಟ್ಟು ಬಂಧಿಸಿ ಜೈಲಿಗೆ ಹಾಕಲಾಗಿದೆ. ಇದು ಅತ್ಯಂತ ಹೀನಾಯ ಕೃತ್ಯವಾಗಿದ್ದು ಸರಕಾರ ಹಾಗೂ ಕೆಲವು ಸಂಘಟನೆಗಳು ಒಟ್ಟು ಸೇರಿ ಭಾರತದ ಸಂವಿಧಾನದಲ್ಲಿ ಹೇಳಿರುವ ಜಾತ್ಯಾತೀತ ಹಾಗೂ ಸಮಾಜವಾದ ಹಕ್ಕುಗಳ ಉಲ್ಲಂಖನೆ ಕೂಡ ಮಾಡಿರುತ್ತದೆ. ಇದು ಭಾರತದ ಪ್ರಜ್ಞಾವಂತ ಜನರು ಒಪ್ಪುವ ಹಾಗಿಲ್ಲ. ಪ್ರಯಾಣಕ್ಕೆ ಬೇಕಾದ ಎಲ್ಲಾ ದಾಖಲೆಗಳು ಅವರ ಪೋಷಕರ ಅನುಮತಿಯೂ ಜೊತೆಯಲ್ಲಿ ಇದ್ದರೂ ಭಾರತದೊಳಗೆ ಪ್ರಯಾಣ ಮಾಡಲು ವಯಸ್ಸಿಗೆ ಬಂದಂತಹ ಪ್ರಜೆಗಳಿಗೆ ಸಾಧ್ಯ ಇಲ್ಲ ಎಂದರೆ ಇದು ಸಂವಿಧಾನದ ಸ್ಪಷ್ಟವಾದ ಉಲ್ಲಂಘನೆ ಕೂಡ ಆಗಿರುತ್ತದೆ. ಈ ಬಗ್ಗೆ KSMCA ಅತ್ಯಂತ ತೀವ್ರವಾದ ಕಳವಳ ವ್ಯಕ್ತಪಡಿಸಿದ್ದು, ಕೂಡಲೆ ಪ್ರಜಾಪ್ರಭುತ್ವ ನೀಡುವ ಹಕ್ಕಿನ ಆಧಾರದಲ್ಲಿ ಇವರನ್ನು ಜೈಲಿನಿಂದ ಹೊರಕಳುಹಿಸಿ ಕಾನೂನು ಬದ್ಧವಾಗಿ ಬದುಕಲು ಎಲ್ಲರಿಗೂ ಇರುವ ಹಕ್ಕನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸಿದರು. ಬಿಟ್ಟಿ ನೆಡುನಿಲಂರವರ ಅಧ್ಯಕ್ಷತೆಯಲ್ಲಿ KSMCA ಕೇಂದ್ರ ಸಮಿತಿ ಸಭೆಸೇರಿ ಖಂಡನಾ ನಿರ್ಣಯವನ್ನು ಮಂಡಿಸಲಾಯಿತು.

ನಿರ್ದೇಶಕರಾದ ವಂದನೀಯ ಫಾದರ್ ಆದರ್ಶ್ ಜೋಸೆಫ್, ಪ್ರಧಾನ  ಕಾರ್ಯದರ್ಶಿ ಸೆಬಾಸ್ಟಿಯನ್ ಎಂ,ಜೆ. ಕ್ಯಾಥೋಲಿಕ್ ಕಾಂಗ್ರೆಸ್ ಜಾಗತಿಕ ಸಮಿತಿ ಕಾರ್ಯದರ್ಶಿ ಜೈಸನ್ ಪಟ್ಟೇರಿ ಹಾಗೂ ಕೇಂದ್ರ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು ಎಂದು KSMCA ಅಧ್ಯಕ್ಷರಾದ ಬಿಟ್ಟಿ ನೆಡುನಿಲಂರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

You may also like

News

Mumbai Archbishop Cardinal Oswald Gracias Offers Solace to Residents of Saint Anthony’s Ashram

MANGALURU: His Eminence Cardinal Oswald Gracias, Archbishop of Mumbai and a member of the Pope’s Council of Cardinals, paid a
News

ಸೂರಿಕುಮೇರು – ಮಾಣಿಯಲ್ಲಿ ಅದ್ದೂರಿ ‘ಅನ್ಫಾಲ್ ರೆಸ್ಟೋರೆಂಟ್’ ಮೇ 3ರಂದು ಉದ್ಘಾಟನೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಭಾಗಿ ಉದ್ಘಾಟನಾ ಭವ್ಯ ಸಮಾರಂಭದಲ್ಲಿ ಮೂವರು ಸಾಧಕರಾದ ಚೇತನ್ ರೈ, ನಾಗರಾಜ್ ಶೆಟ್ಟಿ ಹಾಗೂ ಯಾಸೀರ್ ಕಲ್ಲಡ್ಕ

You cannot copy content of this page