ಬೈಕ್ ಅಪಘಾತದಲ್ಲಿ ಉಡುಪಿ ಮೂಲದ ಯುವಕ ಸೇರಿದಂತೆ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮೃತ್ಯು
ಶಿವಮೊಗ್ಗ ನಗರದ ಸಮೀಪ ನಂದಿನಿ ಹಾಲು ಸಾಗಾಟ ವಾಹನ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾವನ್ನಪ್ಪಿದ ವಿದ್ಯಾರ್ಥಿಗಳು ಉಡುಪಿಯ ನಿವಾಸಿ ಆದಿತ್ಯ ಹಾಗೂ ದಾವಣಗೆರೆ ನಿವಾಸಿ ಸಂದೀಪ್ ಎಂದು ತಿಳಿದು ಬಂದಿದೆ.

ಈ ಘಟನಾ ಸ್ಥಳಕ್ಕೆ ಶಿವಮೊಗ್ಗ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




