August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದುಬಾಯಿಯಲ್ಲಿ ಕೊಂಕಣಿ ಹಾಡು ‘ರಗ್ತಾ ವ್ಹಾಳೊ’ ಬಿಡುಗಡೆಯ ಸಂಭ್ರಮ

ಜನಮನ ಗೆದ್ದ ಶಿಲ್ಪಾ ಕುಟಿನ್ಹೊರವರ ಅದ್ಭುತ ಗಾಯನ – ಮತ್ತೆ ಮತ್ತೆ ಕೇಳಲಾಗುತ್ತಿರುವ ಸೂಪರ್ ಹಿಟ್ ಹಾಡು

ದುಬಾಯಿಯಲ್ಲಿ ಮೇರಿ ಮಾತೆಯ ಜನ್ಮದಿನಾಚರಣೆಯ (ಮೊಂತಿ ಫೆಸ್ಟ್) ಸಂದರ್ಭದಲ್ಲಿ ಬಿಡುಗಡೆಯಾದ ಕೊಂಕಣಿ ಹಾಡು ‘ರಗ್ತಾ ವ್ಹಾಳೊ’ ಶ್ರೋತರ ಹೃದಯವನ್ನು ತಟ್ಟಿದೆ. ದುಬೈ ಕರಾಮಾದ ವಿನ್ನೀಸ್ ರೆಸ್ಟೋರೆಂಟ್‌ನಲ್ಲಿ ಮಂಗಳೂರು ಮೂಲದ ಅನೇಕ ಜನರ ಸಮ್ಮುಖದಲ್ಲಿ ನಡೆದ ಲೋಕಾರ್ಪಣಾ ಸಮಾರಂಭ ಅದ್ಧೂರಿಯಾಗಿ ನೆರವೇರಿತು.

👉 ವಿಲ್ಲಿ ಅಲ್ಲಿಪಾದೆರವರ ಮನಸೂರೆಗೊಳ್ಳುವ ಸಾಹಿತ್ಯ,

👉 ಆ್ಯಲನ್ ಫೆರ್ನಾಂಡಿಸ್ ರವರ ಮಧುರ ಸ್ವರ ಸಂಯೋಜನೆ,

👉 ರೋಶನ್ ಆಂಜೆಲೊರ್ ರವರ ನವೀನ ಸಂಗೀತ ನಿರ್ದೇಶನ,

👉 ಹಾಗೂ ಶಿಲ್ಪಾ ಕುಟಿನ್ಹೊರವರ ಸೊಗಸಾದ, ಮಧುರ, ಹೃದಯ ಹಿಂಡುವ ಗಾಯನ – ಈ ನಾಲ್ಕು ಅಂಶಗಳು ಒಂದಾಗಿ ಸೇರಿ ಹಾಡಿಗೆ ಅಸಾಮಾನ್ಯ ಮೆರಗು ತಂದಿವೆ.

👉 ಈ ಹಾಡು ಆರ್.ಡಿ. ಸ್ಟುಡಿಯೊ ಮಂಗಳೂರು ಇಲ್ಲಿ ರೆಕಾರ್ಡಿಂಗ್ ಮಾಡಲಾಗಿದ್ದು, ಇದರ ವಿಡಿಯೋ ಚಿತ್ರೀಕರಣ ಐವನ್ ಪಿರೇರಾರವರ ಪ್ರೊ – ಫಿಕ್ಸ್ ಸ್ಟುಡಿಯೊ ಇದರಲ್ಲಿ ಮಾಡಲಾಗಿದೆ.

🎶 “ಸಾಹಿತ್ಯ ಒಮ್ಮೆ ಕೇಳಿದರೆ ಮನಸಲ್ಲಿ ಮುದ್ರಿತವಾಗುತ್ತದೆ, ಸಂಗೀತ ಹೃದಯ ತಟ್ಟುತ್ತದೆ, ಗಾಯಕಿ ಶಿಲ್ಪಾರವರ ಗಾಯನ ಹೃದಯವನ್ನು ಸೆಳೆಯುತ್ತದೆ” ಎಂದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಾಡು ಇತ್ತೀಚೆಗೆ ಅತ್ಯಂತ ಹೆಚ್ಚು ಕೇಳಲಾಗುತ್ತಿರುವ ಹಿಟ್ ಗೀತೆ ಆಗಿ ಹೊರಹೊಮ್ಮಿದ್ದು, ಜನರು ಮತ್ತೆ ಮತ್ತೆ ಆನಂದದಿಂದ ಕೇಳುತ್ತಿರುವ ಹಾಡು ಎಂದು ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆ ಹರಿದು ಬಂದಿದೆ.

‘ರಗ್ತಾ ವ್ಹಾಳೊ’ – ಸುಂದರ ಸಾಹಿತ್ಯ, ಅದ್ಭುತ ಸಂಗೀತ, ಶ್ರೇಷ್ಠ ಗಾಯನ – ಇವುಗಳ ಸುವರ್ಣಸಂಗಮದಿಂದ ಜನಮನ ಗೆದ್ದ ಹಾಡಾಗಿದೆ.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page