ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ
ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ ಸಂಘಟನೆಯ ಪ್ರಾರಂಭೋತ್ಸವ ಹಾಗೂ ಪುತ್ತೂರು ವಿಭಾಗದ ನೌಕರರ ಕೂಟದ ಅಧ್ಯಕ್ಷ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಪದೋನ್ನತಿಯ ನಿಮಿತ್ತ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಸೆಪ್ಟೆಂಬರ್ 02ರಂದು ಬುಧವಾರ ಬೆಳಿಗ್ಗೆ 10:30ಕ್ಕೆ ಪುತ್ತೂರಿನ ಮೈನ್ ರೋಡ್ನಲ್ಲಿರುವ ಲಕ್ಷ್ಮೀ ಹೋಟೆಲ್ ನಲ್ಲಿ ಜರುಗಲಿದೆ.


ಮುಖ್ಯ ಉಪಸ್ಥಿತಿ ಹಾಗೂ ಪದಾಧಿಕಾರಿಗಳು:
* ಗೌರವಾಧ್ಯಕ್ಷರು: ಸುರೇಶ್ ರಾವ್
* ಸಂಸ್ಥಾಪಕ ಅಧ್ಯಕ್ಷರು: ಚಂದ್ರಶೇಖರ್ ಆರ್.
* ರಾಜ್ಯ ಪ್ರಧಾನ ಕಾರ್ಯದರ್ಶಿ: ತಿಪ್ಪೇಸ್ವಾಮಿ
* ಅಧ್ಯಕ್ಷರು: ಜೀವನ್ ಸಂತೋಷ್ ಮಾರ್ಟಿಸ್
* ಪ್ರಧಾನ ಕಾರ್ಯದರ್ಶಿಗಳು: ಯೋಗೀಂದ್ರ ಬಡಿಗೇರ್

ಈ ಶುಭ ಸಮಾರಂಭದಲ್ಲಿ ಪುತ್ತೂರು ವಿಭಾಗ ವ್ಯಾಪ್ತಿಯ ಎಲ್ಲಾ ಘಟಕಗಳ ಕೂಟದ ಪದಾಧಿಕಾರಿಗಳು, ಸರ್ವಸದಸ್ಯರು ಹಾಗೂ ನೌಕರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೂಟದ ವತಿಯಿಂದ ವಿನಂತಿಸಲಾಗಿದೆ.




