ಹೆಬಳೆ ಗ್ರಾಮದ ಅರಿಕಲ್ ಜಟಕೇಶ್ವರ ದೇವಸ್ಥಾನದ ಹುಂಡಿ ಒಡೆದು ಕಳ್ಳತನ – ಇಬ್ಬರು ಆರೋಪಿಗಳ ಬಂಧನ
ಆರೋಪಿಗಳಿಂದ ಬೈಕ್ ಸೇರಿದಂತೆ ರೂಪಾಯಿ 2.21 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡ ಭಟ್ಕಳ ಗ್ರಾಮೀಣ ಪೊಲೀಸರು

ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ಶ್ರೀ ಅರಿಕಲ್ ಜಟಕೇಶ್ವರ ದೇವಸ್ಥಾನದ ಹುಂಡಿಯನ್ನು ಮಧ್ಯರಾತ್ರಿ ಒಡೆದು ಹಣ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 14ರಂದು ಸಂಭವಿಸಿದ ಈ ಘಟನೆ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ (Cr.No.125/2025) ದಾಖಲಿಸಲಾಗಿತ್ತು. 331(4), 305(2) BNS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಂಧಿತರಾದವರು ಶಿರಾಲಿ ನಿವಾಸಿ ಅಮೀರ್ (ತಂದೆ ಹಸನ ಬ್ಯಾರಿ) ಹಾಗೂ ಭಟ್ಕಳ ನಿವಾಸಿ ಮಹ್ಮದ್ ಇಮ್ರಾನ್ (ತಂದೆ ಅಬ್ದುಲ್ ಗಫಾರ). ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಎರಡು ಬೈಕ್ಗಳ ಜೊತೆಗೆ ಒಟ್ಟು ರೂಪಾಯಿ 2,21,295 ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.




