ದೇವಸ್ಥಾನಗಳ ಭದ್ರತೆಗೆ ಭಟ್ಕಳ ಗ್ರಾಮೀಣ ಪೊಲೀಸರ ಮುಂದಾಳತ್ವ – ಸಿಸಿ ಕ್ಯಾಮರಾ ಕಡ್ಡಾಯ, ಒಮ್ಮತದ ನಿರ್ಧಾರ
ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಇತ್ತೀಚಿನ ಹುಂಡಿ ಕಳ್ಳತನ ಪ್ರಕರಣಗಳ ಹಿನ್ನೆಲೆ ಈ ನಿರ್ಧಾರ ಜಾರಿಗೊಳಿಸಲಾಗಿದೆ.



ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಸ್ಥಾನಗಳ ಕಮಿಟಿ ಸದಸ್ಯರ ಸಭೆಯಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರು ಮಾತನಾಡಿ, “ಸಿಸಿ ಕ್ಯಾಮರಾ ಅಳವಡಿಕೆಯಿಂದ ಹುಂಡಿ ಕಳ್ಳತನ ಮತ್ತು ಸ್ವತ್ತಿನ ಅಪರಾಧಗಳನ್ನು ತಡೆಯಲು ನೆರವಾಗುತ್ತದೆ. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳನ್ನು ದಾಖಲಿಸಲು ಸಹಾಯಕವಾಗುತ್ತದೆ. ತನಿಖಾ ಕಾರ್ಯಕ್ಕೆ ಸ್ಪಷ್ಟವಾದ ಸಾಕ್ಷ್ಯ ದೊರೆಯುತ್ತದೆ. ಭಕ್ತರ ವಿಶ್ವಾಸ ಹೆಚ್ಚಿಸಿ ದೇವಸ್ಥಾನದ ಭದ್ರತೆಯನ್ನು ಬಲಪಡಿಸುತ್ತದೆ” ಎಂದು ಹೇಳಿದರು.





ಈ ಹಿನ್ನೆಲೆಯಲ್ಲಿ, ಸೂಡಿಗದ್ದೆ ದುರ್ಗಾಪರಮೇಶ್ವರಿ, ಕಂಚಿನ ದುರ್ಗಾಪರಮೇಶ್ವರಿ, ಸೇಡ ಬದಿ ಸೇರಿದಂತೆ ಠಾಣಾ ವ್ಯಾಪ್ತಿಯ ಹಲವು ದೇವಸ್ಥಾನಗಳ ಕಮಿಟಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡು, ಎಲ್ಲಾ ದೇವಸ್ಥಾನಗಳಿಗೆ ಶೀಘ್ರದಲ್ಲೇ ಸಿಸಿ ಕ್ಯಾಮರಾ ಅಳವಡಿಸಲು ಒಮ್ಮತದಿಂದ ತೀರ್ಮಾನಿಸಿದರು.




