January 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೈಂಟ್ ವಿನ್ಸೆಂಟ್ ಡಿ. ಪಾವ್ಲ್ ಸೊಸೈಟಿಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ

ಮಂಗಳೂರು ಧರ್ಮಕ್ಷೇತ್ರದ ಬಿಷಪ್ಸ್ ಹೌಸ್ ನಲ್ಲಿ ನಡೆದ ಕಾರ್ಯಕ್ರಮ

ಮಂಗಳೂರು ಧರ್ಮಕ್ಷೇತ್ರದ ಬಿಷಪ್ಸ್ ಹೌಸ್‌ನಲ್ಲಿ ಸೈಂಟ್ ವಿನ್ಸೆಂಟ್ ಡಿ. ಪಾವ್ಲ್ ಸೊಸೈಟಿಯು (SSVP) ತನ್ನ ಶತಮಾನೋತ್ಸವ ಕಾರ್ಯಕ್ರಮಗಳ ಹಾಗೂ ಶತಮಾನೋತ್ಸವ ಯೋಜನೆಗಳ ಉದ್ಘಾಟನೆ ಅಕ್ಟೋಬರ್ 5ರಂದು ಭಾನುವಾರ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಫಾದರ್ ಮುಲ್ಲರ್ಸ್ ಸಂಸ್ಥೆಗಳ ಪ್ರಧಾನ ನಿರ್ದೇಶಕರಾದ ವಂದನೀಯ ಫಾದರ್ ಫಾವುಸ್ಟಿನ್ ಲುಕಾಸ್ ಲೋಬೊ, ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೋ, KCO ಅಬುಧಾಬಿ ಉಪಾಧ್ಯಕ್ಷ CA ವಲೇರಿಯನ್ ಅಡಾ, SSVP ಆಧ್ಯಾತ್ಮಿಕ ಸಲಹೆಗಾರಾದ ವಂದನೀಯ ಫಾದರ್ ಪ್ಲಾವಿಯನ್ ಲೋಬೊ, SSVP ಕೇಂದ್ರೀಯ ಅಧ್ಯಕ್ಷ ಜ್ಯೋ ಕುವೆಲ್ಲೊ, ಕಾರ್ಯದರ್ಶಿ ಲಿಗೋರಿ ಫರ್ನಾಂಡಿಸ್, ಖಜಾಂಚಿ ಕ್ಲ್ಯಾರನ್ಸ್ ಮಚಾದೊ ಮತ್ತು SSVP ಶತಮಾನೋತ್ಸವ ಸಮಿತಿಯ ಅಧ್ಯಕ್ಷೆ  ಫಿಲೋಮಿನಾ ಮಿನೇಜಸ್ ಇವರೆಲ್ಲರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಯಿತು. SSVP ಕೇಂದ್ರೀಯ ಅಧ್ಯಕ್ಷ ಜೋ ಕುವೆಲ್ಲೊರವರು ಎಲ್ಲರನ್ನು ಸ್ವಾಗತಿಸಿದರು ಹಾಗೂ SSVP ಸಂಸ್ಥೆಯು ಯೇಸು ಕ್ರಿಸ್ತನ ಹಾದಿಯನ್ನು ಅನುಸರಿಸುವ ಬದ್ಧತೆಯನ್ನು ವಿವರಿಸಿದರು ಮತ್ತು ಶತಮಾನೋತ್ಸವದ ಯೋಜನೆಗಳನ್ನು ವಿವರಿಸಿದರು, ವಿಶೇಷವಾಗಿ ಶಿಕಪ್’-SSVP ಸಂಸ್ಥೆಯಿಂದ ದತ್ತು ಪಡೆದ ಕುಟುಂಬಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯವನ್ನು ಒದಗಿಸುವ ಯೋಜನೆ. ಈ ಯೋಜನೆಯ ಅಗತ್ಯತೆ ಮತ್ತು ಯಶಸ್ಸಿಗಾಗಿ ಸಂಪನ್ಮೂಲಗಳನ್ನು ಸಂಗ್ರಹಿಸುವ ಮಹತ್ವವನ್ನು ಅವರು ಒತ್ತಾಯಿಸಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎಂದರೆ ಜುಬಿಲಿ ಥೀಮ್ ಹಾಡು ಬಿಡುಗಡೆ. ಈ ಹಾಡನ್ನು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೋ ಬಿಡುಗಡೆ ಮಾಡಿದರು. ಪ್ರಸಿದ್ದ ಕವಿ ಲೊಯ್ಡ್ ತಾಕೊಡೆ ರವರು ಈ ಹಾಡನ್ನು ಬರೆದು ಸಂಗೀತ ನೀಡಿದ್ದಾರೆ. ಈ ಹಾಡು ಸಭಿಕರನ್ನು ಆಕರ್ಷಿಸಿ, ಶತಮಾನೋತ್ಸವದ ಅಂತರಾಳವನ್ನು ಎತ್ತಿ ಹಿಡಿಯಿತು. ಲೊಯ್ಡ್ ತಾಕೊಡೆರವರನ್ನು ಲೂವಿ ಪಿಂಟೋ ಸನ್ಮಾನಿಸಿ, SSVP ಸದಸ್ಯರು ನೀಡುತ್ತಿರುವ ಮಹಾನ್ ಸೇವೆಯನ್ನು ಪ್ರಶಂಸಿಸಿದರು ಮತ್ತು ಮುಂದುವರಿಯುವಂತೆ ಪ್ರೋತ್ಸಾಹಿಸಿದರು.

ಮುಖ್ಯ ಅತಿಥಿಗಳಾದ ವಂದನೀಯ ಫಾದರ್ ಫಾವುಸ್ಟಿನ್ ಲುಕಾಸ್ ಲೋಬೊರವರು SSVP ಸಂಸ್ಥೆಯ ಶಿಕಪ್ ಯೋಜನೆಯ ಆಶಯಗಳನ್ನು ತೋರಿಸುವ ಡಾಕ್ಯುಮೆಂಟರಿ ಪ್ರೋಮೋವನ್ನು ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವಂತೆ ಪ್ರೋತ್ಸಾಹಿಸಿದರು, ‘ಶಿಕಪ್’ ‘ ಯೋಜನೆಯು ಸಾಮರ್ಥ್ಯ ನಿರ್ಮಾಣ ಮತ್ತು ಸಬಲೀಕರಣದಲ್ಲಿ ಪಾತ್ರವಹಿಸುತ್ತಿದೆ ಎಂದು ವಿವರಿಸಿದರು. ಅವರು SSVP ಸಂಸ್ಥೆಯ ಸ್ವಾವಲಂಬನೆ ಉತ್ತೇಜಿಸುವ ಬದ್ಧತೆಯನ್ನು ಪ್ರಶಂಸಿಸಿದರು.

SSVP ಆಧ್ಯಾತ್ಮಿಕ ಸಲಹೆಗಾರರಾದ ವಂದನೀಯ ಫಾದರ್ ಪ್ಲಾವಿಯನ್ ಲೋಬೊ ಶತಮಾನೋತ್ಸವ ಸಮಾಪನ ಸಮಾರಂಭದಲ್ಲಿ ಪ್ರಕಟಿಸಲು ಉದ್ದೇಶಿಸಿರುವ ಸ್ಮರಣಿಕೆಯ ಅಪೀಲನ್ನು ಬಿಡುಗಡೆ ಮಾಡಿದರು. ಅವರು SSVP ಸಂಸ್ಥೆಯ ಅಚಲ ಸೇವೆಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಸದಸ್ಯರಿಗೆ ಹೊಸ ಉತ್ಸಾಹ ಮತ್ತು ಬದ್ಧತೆಯಿಂದ ಮುಂದುವರಿಯಲು ಆಶೀರ್ವಾದಗಳನ್ನು ನೀಡಿದರು.

ಜನಪ್ರಿಯ ಗಾಯಕ ನಿಹಾಲ್ ತೌರೋರವರಿಂದ ಡಿಸೆಂಬರ್ 07ರಂದು ಕುಲಶೇಕರ ಚರ್ಚ್ ಮೈದಾನದಲ್ಲಿ ನಡೆಯಲಿರುವ ಬಹು ನಿರೀಕ್ಷಿತ “ಧಬಾಜೊ’ ಕೊಂಕಣಿ ಸಾಂಸ್ಕೃತಿಕ ಸಂಜೆಯ ಪ್ರವೇಶ ಪಾಸ್ ಗಳನ್ನು KCO ಅಬುಧಾಬಿ ಉಪಾಧ್ಯಕ್ಷ CA ವಲೇರಿಯನ್ ಆಲ್ಮೇಡಾರವರು ಬಿಡುಗಡೆಗೊಳಿಸಿ, ಪಾಸ್‌ಗಳನ್ನು ಸಭೆಗೆ ವಿತರಿಸಿ, ಈ ಸಾಂಸ್ಕೃತಿಕ ಸಂಜೆಯ ಯಶಸ್ಸಿಗೆ ಶುಭಾಶಯಗಳನ್ನು ತಿಳಿಸಿದರು. ಇದು ಕೊಂಕಣಿ ಪರಂಪರೆಯ LIVE ಆಚರಣೆಯಾಗಲಿದೆ.

ಕಾರ್ಯಕ್ರಮವು SSVP ಶತಮಾನೋತ್ಸವ ಸಮಿತಿಯ ಅಧ್ಯಕ್ಷೆ ಫಿಲೋಮಿನಾ ಮೆನೇಜಸ್ ರವರ ಧನ್ಯವಾದಗಳೊಂದಿಗೆ ಮುಕ್ತಾಯವಾಯಿತು. ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ SSVP ಸಂಸ್ಥೆಯ ನೂರು ವರ್ಷಗಳ ಸೇವೆ, ದಯೆ ಮತ್ತು ಸಾಮಾಜಿಕ ಉನ್ನತಿಗೆ ಸಾಕ್ಷಿಯಾಗಿದೆ. ಸಂಸ್ಥೆ ತನ್ನ ಸ್ಥಾಪನೆಯ ತತ್ವಗಳಿಗೆ ಬದ್ಧವಾಗಿದ್ದು, ಮುಂದಿನ ಶತಮಾನದಲ್ಲಿ ಪರಿವರ್ತನೆಯ ಕಾರ್ಯವನ್ನು ಮುಂದುವರಿಸಲು ಸಿದ್ಧವಾಗಿದೆ.

You may also like

News

ತುಳುಕೂಟ ಥೈಲ್ಯಾಂಡ್ ಸಹಕಾರದಿಂದ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರ ಸಂಪೂರ್ಣ ಪುನರ್‌ನವೀಕರಣ – ಹಸ್ತಾಂತರ ಹಾಗೂ ಸೇವಾ ಕಾರ್ಯಕ್ರಮಗಳು ಯಶಸ್ವಿ

ಅಧ್ಯಕ್ಷ ವಿನಯ್ ರೈ ಅವರ ಕಾರ್ಯ ವೈಖರಿಗೆ ವ್ಯಾಪಕ ಮೆಚ್ಚುಗೆ ಬಟ್ಟಾರಬೆಟ್ಟು–ಅಳಪೆ–ಪಡೀಲ್‌ನ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರವು ತುಳುಕೂಟ ಥೈಲ್ಯಾಂಡ್‌ನ ಅಮೂಲ್ಯ ಸಹಕಾರದಿಂದ ಸಂಪೂರ್ಣವಾಗಿ ಪುನರ್‌ನವೀಕರಣಗೊಂಡಿದ್ದು, ಇದರ ಹಸ್ತಾಂತರ
News

ಶಾಸಕಿ ಭಾಗೀರಥಿ ಮುರುಳ್ಯರ ಭಾವಚಿತ್ರ ಅವಹೇಳನ – ಬಿಜೆಪಿ ದಕ್ಷಿಣ ಕನ್ನಡದಿಂದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಭಾವಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವುದನ್ನು ಖಂಡಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ನಗರದ ಮಿನಿ ವಿಧಾನಸೌಧದ

You cannot copy content of this page