February 18, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಜ್ಪೆಯ ಪಟಾಕಿ ಅಂಗಡಿಗಳಿಂದ ಬೆದರಿಕೆ ಹಾಕಿ ಸುಲಿಗೆ‌ ಮಾಡಲು ಯತ್ನಿಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲು

ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ – ಪೊಲೀಸ್ ಕಮಿಷನರ್

ಪಟಾಕಿ ಅಂಗಡಿಗಳಿಂದ ಬೆದರಿಕೆ ಹಾಕಿ ಸುಲಿಗೆ‌ ಮಾಡಲೆತ್ನಿಸಿದ್ದ ಇಬ್ಬರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ‌ ಸುರತ್ಕಲ್‌ ಮಂಗಳಪೇಟೆ ಫಾಝಿಲ್‌ ಕೊಲೆ ಆರೋಪಿ ರೌಡಿ ಶೀಟರ್ ಪ್ರಶಾಂತ್ ಯಾನೆ ಪಚ್ಚು ಮತ್ತು ಅಶ್ವಿತ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಜ್ಪೆಯ ಪಟಾಕಿ ಮಾರಾಟ ಮಳಿಗೆಗೆ ಬಂದು ಅದರ‌ ಮಾಲಕ ದಾಮೋದರ ಎಂಬವರಿಗೆ ಬೆದರಿಕೆ ಹಾಕಿ ಹಣ‌ ಸುಲಿಗೆಗೆ ಮುಂದಾಗಿದ್ದಾರೆ. ಈ ಘಟನೆ ಅಕ್ಟೋಬರ್ 22ರಂದು ಬುಧವಾರ ನಡೆದಿದ್ದು, ದಾಮೋದರ್‌ ಅವರು‌ ಆರೋಪಿಗಳಿಗೆ ಹೆದರಿ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದರು.

ಇತ್ತೀಚೆಗೆ ವಿಚಾರ ತಿಳಿದು ದಾಮೋದರ್ ರವರಿಗೆ ಪೊಲೀಸರು ರಕ್ಷಣೆ ‌‌ನೀಡುವ ಭರವಸೆ‌ ನೀಡಿದ ಬಳಿಕ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬಜ್ಪೆ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

 

You may also like

News

ಮಂಗಳೂರಿನ ಅತ್ತಾವರ KMC ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನಾಚರಣೆ – ‘ವಿದ್ಯಾ ಸಂಕಲ್ಪ’ ವೆಬ್‌ಸೈಟ್ ಲೋಕಾರ್ಪಣೆ

ಕ್ಯಾನ್ಸರ್ ಕೇವಲ ದೈಹಿಕವಲ್ಲದೆ ಕುಟುಂಬದ ಮೇಲೆ ಆರ್ಥಿಕ ಮತ್ತು ಮಾನಸಿಕ ಒತ್ತಡವನ್ನೂ ಹೇರುತ್ತದೆ – ಡಾ. ಹರ್ಷ ಪ್ರಸಾದ್ ಎಲ್. ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಮತ್ತು ಡೆವಲಪರ್ಸ್
News

SCDCC ಬ್ಯಾಂಕ್‌ನಿಂದ ಡಿಜಿಟಲ್ ಕ್ರಾಂತಿ – UPI ಹಾಗೂ IMPS ಸೇವೆಗಳಿಗೆ ಚಾಲನೆ

ತಂತ್ರಜ್ಞಾನದ ಯುಗದಲ್ಲಿ ಸಹಕಾರಿ ವಲಯದ ಬ್ಯಾಂಕಿಂಗ್ ಸೇವೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ (SCDCC) ಬ್ಯಾಂಕ್ ತನ್ನ ಗ್ರಾಹಕರಿಗೆ ಯುಪಿಐ (UPI)

You cannot copy content of this page