August 25, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರೋಸಾ ಮಿಸ್ಟಿಕಾ ಪಿಯು ಕಾಲೇಜಿನಲ್ಲಿ ಪ್ರಸಿದ್ದ ಗಾಯಕ ರೋನಿ ಕ್ರಾಸ್ತಾರವರಿಗೆ ಸನ್ಮಾನ

ಸಂಗೀತದ ನಾದದಲ್ಲಿ ಮೂಡಿದ ಸಾಂಸ್ಕೃತಿಕ ವೈಭವ

ಪ್ರಸಿದ್ಧ ಹಾಗೂ ಪ್ರತಿಭಾವಂತ ಗಾಯಕ ರೋನಿ ಕ್ರಾಸ್ತಾರವರನ್ನು ರೋಸಾ ಮಿಸ್ಟಿಕಾ ಪಿಯು ಕಾಲೇಜು ತನ್ನ ಸಾಂಸ್ಕೃತಿಕ ಹಬ್ಬದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಿ, ಸಂಗೀತ ಕ್ಷೇತ್ರದಲ್ಲಿ ನೀಡಿರುವ ಅವರ ಅಮೂಲ್ಯ ಕೊಡುಗೆಗಾಗಿ ಗೌರವಿಸಿ ಸನ್ಮಾನಿಸಿತು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕಿ ಸಿಸ್ಟರ್ ರೋಸ್ಲಿಟಾ ಬಿ.ಎಸ್., ಪ್ರಾಚಾರ್ಯೆ ಸಿಸ್ಟರ್ ಅನಿತಾ, ಪಿ.ಟಿ.ಎ. ಉಪಾಧ್ಯಕ್ಷ ದೀಪಕ್ ಕೋಟ್ಯಾನ್ ಹಾಗೂ ಕಾರ್ಯಕ್ರಮ ಸಂಯೋಜಕ ಉಪನ್ಯಾಸಕ ಅವಿಲ್, ಇತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಗೌರವ ಸ್ವೀಕರಿಸಿದ ನಂತರ ರೋನಿ ಕ್ರಾಸ್ತಾರವರು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಹಾಗೂ ಕಲಾತ್ಮಕ ಪ್ರತಿಭೆಯನ್ನು ಉತ್ತೇಜಿಸಲು ಸಂಸ್ಥೆ ಕೈಗೊಂಡಿರುವ ಪ್ರಯತ್ನಗಳನ್ನು ಮೆಚ್ಚಿದರು. ತಮ್ಮ ಯಶಸ್ಸಿಗೆ ಭಗವಂತನ ಕೃಪೆ, ಹಿರಿಯರು ಹಾಗೂ ಗುರುಗಳ ಆಶೀರ್ವಾದ ಮತ್ತು ಜನರ ಪ್ರೋತ್ಸಾಹ ಕಾರಣವೆಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬುವ ಕಿವಿಮಾತು ನೀಡಿದ ಅವರು, “ಜೀವನದಲ್ಲಿ ಸಾಧನೆ ಮಾಡಲು ಛಲ ಬಿಡಬೇಡಿ, ಗುರುಗಳು, ತಂದೆ-ತಾಯಿಗಳ ಮಾರ್ಗದರ್ಶನದಲ್ಲಿ ಮುಂದುವರಿಯಿರಿ” ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ರೋನಿ ಕ್ರಾಸ್ತಾ ಅವರು ತಮ್ಮ ಮಧುರ ಗಾಯನದ ಮೂಲಕ ಜನಪ್ರಿಯ ಚಲನಚಿತ್ರ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನ ಗೆದ್ದರು. ಸಾಂಸ್ಕೃತಿಕ ವೈಭವದ ಮಧ್ಯೆ, ಸಂಗೀತದ ಸ್ಪಂದನದೊಂದಿಗೆ ಕಾಲೇಜು ಆವರಣವೇ ಉಲ್ಲಾಸದಿಂದ ತುಂಬಿತ್ತು.

You may also like

News

ಸಂಚಾರ ನಿಯಮ ಉಲ್ಲಂಘನೆ – ಪುತ್ತೂರಿನಲ್ಲಿ ಗ್ಲಾಸ್ ಸ್ಟಿಕ್ಕರ್ ಅಳವಡಿಸಿದ ಹಾಗೂ ನಂಬರ್ ಪ್ಲೇಟ್ ಮರೆಮಾಚಿದ ವಾಹನಗಳಿಗೆ ಪೊಲೀಸರ ದಂಡ!

ಪುತ್ತೂರು: ವಾಹನಗಳ ಗ್ಲಾಸ್‌ಗಳಿಗೆ ದಟ್ಟವಾದ ಸ್ಟಿಕ್ಕರ್ ಅಳವಡಿಸಿ ಚಾಲನೆಗೆ ಅಡ್ಡಿಪಡಿಸುತ್ತಿದ್ದ ಹಾಗೂ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಮರೆಮಾಚುವ ರೀತಿಯಲ್ಲಿ ಸ್ಟಿಕ್ಕರ್‌ಗಳನ್ನು ಹಾಕಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ
News

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವೆಬ್‌ಸೈಟ್ ಅನಾವರಣ

“ಕಷ್ಟದಲ್ಲಿರುವವರಿಗೆ ನೆರವಾದ ತೃಪ್ತಿ ನನ್ನದು” – ಹರಿಕೃಷ್ಣ ಪುನರೂರು ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ತಮ್ಮಿಂದಾದ ನೆರವು ನೀಡಿದ ಸಂತೃಪ್ತಿ ಇದೆ. “ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ” ಎಂಬ ಮಾತಿನಂತೆ

You cannot copy content of this page