April 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸ್ಪೀಕರ್ ಖಾದರ್ ರವರು ಟೆಂಡರ್ ಇಲ್ಲದೆ ಕಾಮಗಾರಿ ನಡೆಸಿದ ಆರೋಪ

ನನ್ನ ನಿರ್ದಿಷ್ಟ ಆರೋಪಕ್ಕೆ ನಿರ್ದಿಷ್ಟ ಉತ್ತರ ನೀಡಲಿ – ಶಾಸಕ ಭರತ್ ಶೆಟ್ಟಿ 

ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಟೆಂಡರ್ ಇಲ್ಲದೆ ಕಾಮಗಾರಿ ನಡೆಸಿದ ಆರೋಪಕ್ಕೆ ಸ್ಪಷ್ಟ ಉತ್ತರ ನೀಡಬೇಕೆಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು — “ಖಾದರ್ ರವರು ಪಾರದರ್ಶಕವಾಗಿ ಕೆಲಸ ಮಾಡಿದ್ದರೆ ಇನ್ನೂ ಏಕೆ ಉತ್ತರ ನೀಡಿಲ್ಲ?” ಎಂದು ಪ್ರಶ್ನಿಸಿದರು.

ಟೆಂಡರ್ ಇಲ್ಲದೆ ಕೋಟ್ಯಂತರ ವೆಚ್ಚ?

ಶಾಸಕರ ಭವನಕ್ಕೆ ಟೆಂಡರ್ ಇಲ್ಲದೆ 4ಜಿ ರಿಯಾಯಿತಿಯ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಪೀಠೋಪಕರಣಗಳನ್ನು ಖರೀದಿಸಿರುವ ಬಗ್ಗೆ ಡಾ. ಭರತ್ ಶೆಟ್ಟಿ ಪ್ರಶ್ನೆ ಎತ್ತಿದರು. ಅವರ ಹೇಳಿಕೆ ಪ್ರಕಾರ, ಈ ಪ್ರಶ್ನೆಗೆ ಐವನ್ ಡಿಸೋಜರವರಂತಹ ಕಾಂಗ್ರೆಸ್ ನಾಯಕರು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಖಾದರ್ ಪರವಾಗಿ ಉತ್ತರ ನೀಡಿದರೂ, “ಟೆಂಡರ್ ಇಲ್ಲದೆ ಕೆಲಸ ಯಾಕೆ?” ಎಂಬ ಪ್ರಶ್ನೆಗೆ ನೇರ ಉತ್ತರ ಸಿಕ್ಕಿಲ್ಲ.

ಸ್ಪೀಕರ್ ಖಾದರ್ ಪ್ರತಿಕ್ರಿಯೆ:

ಸ್ಪೀಕರ್ ಖಾದರ್ ಅವರು “ನನಗೆ ಪತ್ರ ಬರೆದರೆ ನಾನು ಉತ್ತರಿಸುತ್ತೇನೆ” ಎಂದು ಹೇಳಿದ್ದಾರೆ. ಆದರೆ ಅವರು ಕೂಡ ನಾನು ಕೇಳಿದ ಪ್ರಶ್ನೆಗೆ ಉತ್ತರಿಸಲಿಲ್ಲ. ಖಾದರ್ ಪರವಾಗಿ ಪ್ರೆಸ್ ಮೀಟ್ ನಡೆಸಿದವರಿಗೆ ವಿಷಯದ ಸಂಪೂರ್ಣ ಅರಿವಿಲ್ಲ ಎಂದು ಡಾ. ಭರತ್ ಟೀಕಿಸಿದರು.

ತನಿಖೆಗೆ ಬೇಡಿಕೆ:

ಡಾ. ಶೆಟ್ಟಿಯವರು 2018ರಿಂದಲೂ ಎಲ್ಲಾ ಕಾಮಗಾರಿಗಳ ತನಿಖೆ ನಡೆಯಲಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಮಾತನಾಡಿದ ಬಗ್ಗೆ ತಿಳಿಸಿದ್ದಾರೆ.

“ಕಾಗೇರಿಯವರು ತನಿಖೆ ಮಾಡ್ತೇವೆ ಎಂದಿದ್ದಾರೆ. ಹಿಂದಿನ ಅವಧಿಯದ್ದೂ ಕೊಡ್ತೇವೆ ಎಂದಿದ್ದಾರೆ. ಆದರೆ ನನ್ನ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ” ಎಂದು ಡಾ. ಭರತ್ ಬೇಸರ ವ್ಯಕ್ತಪಡಿಸಿದರು.

ಡಾ. ಭರತ್ ಶೆಟ್ಟಿಯವರ ಮುಖ್ಯ ಅಂಶಗಳು:

1️⃣ಟೆಂಡರ್ ಇಲ್ಲದೆ ಶಾಸಕರ ಭವನ ಕಾಮಗಾರಿ

2️⃣ಖಾದರ್ ಪರವಾಗಿ ಕಾಂಗ್ರೆಸ್ ನಾಯಕರಿಂದ ಸ್ಪಷ್ಟ ಉತ್ತರದ ಕೊರತೆ

3️⃣4ಜಿ ರಿಯಾಯಿತಿಯಲ್ಲಿ ಖರೀದಿ ವಿಚಾರವೂ ಪ್ರಶ್ನೆ ಅಡಿಯಲ್ಲಿದೆ

4️⃣2018ರಿಂದ ತನಿಖೆ ನಡೆಸುವ ಭರವಸೆ

5️⃣ಬೃಹತ್ ರಾಜಕೀಯ ವಿವಾದಕ್ಕೆ ಕಾರಣವಾದ ಈ ಘಟನೆ ಕುರಿತು ಸ್ಪೀಕರ್ ಖಾದರ್ ರವರ ನೇರ ಉತ್ತರ ನಿರೀಕ್ಷೆಯಲ್ಲಿದೆ.

You may also like

News

ಧರ್ಮಸ್ಥಳದಲ್ಲಿ 54ನೇ ವರ್ಷದ ಸಾಮೂಹಿಕ ವಿವಾಹ – 106 ಜೋಡಿಗಳ ದಾಂಪತ್ಯ ಆರಂಭ

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಏಪ್ರಿಲ್ 29ರಂದು ಬುಧವಾರ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ
News

Saint Theresa’s School Mangaluru Records 22nd Consecutive Year of 100% Success in ICSE Class X Exams 2025–26

Principal Sr Lourdes  and faculty congratulate students on their success MANGALURU: In a resounding celebration of intellectual brilliance and disciplined

You cannot copy content of this page