August 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸ್ಪೀಕರ್ ಖಾದರ್ ರವರು ಟೆಂಡರ್ ಇಲ್ಲದೆ ಕಾಮಗಾರಿ ನಡೆಸಿದ ಆರೋಪ

ನನ್ನ ನಿರ್ದಿಷ್ಟ ಆರೋಪಕ್ಕೆ ನಿರ್ದಿಷ್ಟ ಉತ್ತರ ನೀಡಲಿ – ಶಾಸಕ ಭರತ್ ಶೆಟ್ಟಿ 

ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಟೆಂಡರ್ ಇಲ್ಲದೆ ಕಾಮಗಾರಿ ನಡೆಸಿದ ಆರೋಪಕ್ಕೆ ಸ್ಪಷ್ಟ ಉತ್ತರ ನೀಡಬೇಕೆಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು — “ಖಾದರ್ ರವರು ಪಾರದರ್ಶಕವಾಗಿ ಕೆಲಸ ಮಾಡಿದ್ದರೆ ಇನ್ನೂ ಏಕೆ ಉತ್ತರ ನೀಡಿಲ್ಲ?” ಎಂದು ಪ್ರಶ್ನಿಸಿದರು.

ಟೆಂಡರ್ ಇಲ್ಲದೆ ಕೋಟ್ಯಂತರ ವೆಚ್ಚ?

ಶಾಸಕರ ಭವನಕ್ಕೆ ಟೆಂಡರ್ ಇಲ್ಲದೆ 4ಜಿ ರಿಯಾಯಿತಿಯ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಪೀಠೋಪಕರಣಗಳನ್ನು ಖರೀದಿಸಿರುವ ಬಗ್ಗೆ ಡಾ. ಭರತ್ ಶೆಟ್ಟಿ ಪ್ರಶ್ನೆ ಎತ್ತಿದರು. ಅವರ ಹೇಳಿಕೆ ಪ್ರಕಾರ, ಈ ಪ್ರಶ್ನೆಗೆ ಐವನ್ ಡಿಸೋಜರವರಂತಹ ಕಾಂಗ್ರೆಸ್ ನಾಯಕರು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಖಾದರ್ ಪರವಾಗಿ ಉತ್ತರ ನೀಡಿದರೂ, “ಟೆಂಡರ್ ಇಲ್ಲದೆ ಕೆಲಸ ಯಾಕೆ?” ಎಂಬ ಪ್ರಶ್ನೆಗೆ ನೇರ ಉತ್ತರ ಸಿಕ್ಕಿಲ್ಲ.

ಸ್ಪೀಕರ್ ಖಾದರ್ ಪ್ರತಿಕ್ರಿಯೆ:

ಸ್ಪೀಕರ್ ಖಾದರ್ ಅವರು “ನನಗೆ ಪತ್ರ ಬರೆದರೆ ನಾನು ಉತ್ತರಿಸುತ್ತೇನೆ” ಎಂದು ಹೇಳಿದ್ದಾರೆ. ಆದರೆ ಅವರು ಕೂಡ ನಾನು ಕೇಳಿದ ಪ್ರಶ್ನೆಗೆ ಉತ್ತರಿಸಲಿಲ್ಲ. ಖಾದರ್ ಪರವಾಗಿ ಪ್ರೆಸ್ ಮೀಟ್ ನಡೆಸಿದವರಿಗೆ ವಿಷಯದ ಸಂಪೂರ್ಣ ಅರಿವಿಲ್ಲ ಎಂದು ಡಾ. ಭರತ್ ಟೀಕಿಸಿದರು.

ತನಿಖೆಗೆ ಬೇಡಿಕೆ:

ಡಾ. ಶೆಟ್ಟಿಯವರು 2018ರಿಂದಲೂ ಎಲ್ಲಾ ಕಾಮಗಾರಿಗಳ ತನಿಖೆ ನಡೆಯಲಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಮಾತನಾಡಿದ ಬಗ್ಗೆ ತಿಳಿಸಿದ್ದಾರೆ.

“ಕಾಗೇರಿಯವರು ತನಿಖೆ ಮಾಡ್ತೇವೆ ಎಂದಿದ್ದಾರೆ. ಹಿಂದಿನ ಅವಧಿಯದ್ದೂ ಕೊಡ್ತೇವೆ ಎಂದಿದ್ದಾರೆ. ಆದರೆ ನನ್ನ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ” ಎಂದು ಡಾ. ಭರತ್ ಬೇಸರ ವ್ಯಕ್ತಪಡಿಸಿದರು.

ಡಾ. ಭರತ್ ಶೆಟ್ಟಿಯವರ ಮುಖ್ಯ ಅಂಶಗಳು:

1️⃣ಟೆಂಡರ್ ಇಲ್ಲದೆ ಶಾಸಕರ ಭವನ ಕಾಮಗಾರಿ

2️⃣ಖಾದರ್ ಪರವಾಗಿ ಕಾಂಗ್ರೆಸ್ ನಾಯಕರಿಂದ ಸ್ಪಷ್ಟ ಉತ್ತರದ ಕೊರತೆ

3️⃣4ಜಿ ರಿಯಾಯಿತಿಯಲ್ಲಿ ಖರೀದಿ ವಿಚಾರವೂ ಪ್ರಶ್ನೆ ಅಡಿಯಲ್ಲಿದೆ

4️⃣2018ರಿಂದ ತನಿಖೆ ನಡೆಸುವ ಭರವಸೆ

5️⃣ಬೃಹತ್ ರಾಜಕೀಯ ವಿವಾದಕ್ಕೆ ಕಾರಣವಾದ ಈ ಘಟನೆ ಕುರಿತು ಸ್ಪೀಕರ್ ಖಾದರ್ ರವರ ನೇರ ಉತ್ತರ ನಿರೀಕ್ಷೆಯಲ್ಲಿದೆ.

You may also like

News

CODP Extends Education Aid to Students, Spreads Awareness on Government Welfare Schemes

The Canara Organisation for Development and Peace (CODP) organised an Education Aid Cheque Distribution Programme along with an awareness session
News

ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ – ಕೆಲವೇ ಗಂಟೆಗಳಲ್ಲಿ ಉಡುಪಿ ಪೊಲೀಸರಿಂದ ಆರೋಪಿ ರಾಜು ಬಂಧನ

ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ

You cannot copy content of this page