ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ನಲ್ಲಿ ಮಂಗಳೂರಿನ ಗ್ಲೋಬಲ್ ಅರೇನಾ ವಿದ್ಯಾರ್ಥಿಗಳ ಸೊಬಗು — ಇಬ್ಬರು ಪ್ರಥಮ ಹಾಗೂ ಓರ್ವ ದ್ವಿತೀಯ ಸ್ಥಾನ
ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 17 ರಂದು ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಮಂಗಳೂರಿನ ವಾಮಂಜೂರಿನ ಗ್ಲೋಬಲ್ ಸ್ಪೋರ್ಟ್ಸ್ ಅರೇನಾ ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಮಿಂಚನ್ನು ತೋರಿಸಿದ್ದಾರೆ.


14 ವರ್ಷದೊಳಗಿನ ವಿಭಾಗದ ಬಾಲಕರ ಶಟಲ್ ಬ್ಯಾಡ್ಮಿಂಟನ್ನಲ್ಲಿ ಜಶನ್ ರಾಜ್ ಹಾಗೂ ನಮಿಶ್ ಎನ್.ಕೆ. ಇವರಿಬ್ಬರು ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಜಶನ್ ರಾಜ್ ರವರು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವುದು ವಿಶೇಷ.

17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ರಿಯೋನಾ ಮೊಂತೇರೊರವರು ದ್ವಿತೀಯ ಸ್ಥಾನ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.


ವಿದ್ಯಾರ್ಥಿಗಳ ಪರಿಚಯ:
ಜಶನ್ ರಾಜ್ – ರವೀಂದ್ರ ಪೊಳಲಿ ಮತ್ತು ಪ್ರಿಯಾರವರ ಪುತ್ರ
ನಮಿಶ್ ಎನ್.ಕೆ. – ನಿತಿನ್ ಕರ್ಕೇರ ಮತ್ತು ಶ್ವೇತಾರವರ ಪುತ್ರ
ರಿಯೋನಾ ಮೊಂತೇರೊ – ನವೀನ್ ರೋಶನ್ ಮತ್ತು ಶಾಂತಿ ಮೊಂತೇರೊರವರ ಪುತ್ರಿ
ಈ ಮೂವರು ಪ್ರತಿಭಾವಂತ ಕ್ರೀಡಾಪಟುಗಳನ್ನು ಗ್ಲೋಬಲ್ ಸ್ಪೋರ್ಟ್ಸ್ ಅರೇನಾ ಸಂಸ್ಥೆ ಅಭಿನಂದಿಸಿದೆ.




