ಮಂಗಳೂರಿನಲ್ಲಿ “ಅಂತರಾಷ್ಟ್ರೀಯ ನಾಟಕೋತ್ಸವ” – ಉಚಿತ ಪ್ರವೇಶ
ನಾಟಕದ ಪ್ರಿಯರು ಮತ್ತು ಸಾಂಸ್ಕೃತಿಕ ಆಸಕ್ತರಿಗೆ ಸೂಕ್ತ ಅವಕಾಶ
ಅಸ್ತಿತ್ವ (ರಿ.) ಮಂಗಳೂರು, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಆಯೋಜನೆ

ಮಂಗಳೂರಿನಲ್ಲಿ “ಅಂತರಾಷ್ಟ್ರೀಯ ನಾಟಕೋತ್ಸವ”ಸಾಂಸ್ಕೃತಿಕ ಉತ್ಸವದ ರೂಪದಲ್ಲಿ ಕರಾವಳಿಯ ರಂಗಜ್ಞರಿಗೆ ಹಾಗೂ ನಾಟಕಪ್ರೇಮಿಗಳಿಗೆ ಹೊಸ ಅನುಭವವನ್ನು ನೀಡಲು ಸಜ್ಜಾಗಿದೆ. ಈ ನಾಟಕೋತ್ಸವವನ್ನು ಅಸ್ತಿತ್ವ (ರಿ.) ಮಂಗಳೂರು, ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಹಾಗೂ ಅರೆಹೊಳೆ ಪ್ರತಿಷ್ಠಾನವು ಸಹಯೋಗದಲ್ಲಿ ಆಯೋಜಿಸುತ್ತಿವೆ.
ನಾಟಕೋತ್ಸವದ ವೈಶಿಷ್ಟ್ಯಗಳು :
ದಿನಾಂಕ 27-11-2025; ನಾಟಕ: ಸೈರನ್….; ಭಾಷೆ: ಕನ್ನಡ; ನಿರ್ದೇಶನ: ರೋಹಿತ್ ಬೈಕಾಡಿ; ತಂಡ: ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ)
ದಿನಾಂಕ 28-11-2025; ನಾಟಕ: ಪೋಲಿಟಿಕಲ್ ಪ್ರಿಸನರ್ಸ್; ಭಾಷೆ: ಕನ್ನಡ; ರಚನೆ: ಅನುಷ್ ಶೆಟ್ಟಿ ಮತ್ತು ಪ್ರಗಾಥ ಮೋಹನ್; ನಿರ್ದೇಶನ: ಅನುಷ್ ಶೆಟ್ಟಿ; ತಂಡ: ನಿರ್ದಿಗಂತ ಮೈಸೂರು
ದಿನಾಂಕ 29-11-2025; ನಾಟಕ: ಯೇನಾ ಜಾಲ್ಯಾರ್ ವಚಾನಾ; ಭಾಷೆ: ಕೊಂಕಣಿ; ರಚನೆ ಮತ್ತು ನಿರ್ದೇಶನ: ಪ್ರದೀಪ್ ಬರ್ಬೋಜಾ ಪಾಲಡ್ಕ; ತಂಡ: ಸಾಂಗೊನ್ ಮುಗ್ದಾನಾ ಕಲಾಕಾರ್, ದುಬೈ
ದಿನಾಂಕ 30-11-2025; ನಾಟಕ: ಚಿರಿ……. (ತೀಸ್ ನಾಣ್ಯಾಂಚಿ); ಭಾಷೆ: ಕೊಂಕಣಿ; ಪ್ರಸ್ತುತಿ: ಅಸ್ತಿತ್ವ (ರಿ.) ಮಂಗಳೂರು; ರಚನೆ: ಡಾ. ಆಲ್ವಿನ್ ಸೆರಾವೊ; ಸ್ಥಳ: LCRI, Auditorium, St Aloysius (Deemed to be University) Mangalore

ಸಮಯ: ಸಂಜೆ 6.30 ಘಂಟೆಗೆ ಸರಿಯಾಗಿ
ಈ ಕಾರ್ಯಕ್ರಮದಲ್ಲಿ ವಿವಿಧ ಭಾಷೆಗಳಲ್ಲಿ ಸುಂದರವಾದ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದು, ಎಲ್ಲಾ ನಾಟಕಗಳಿಗೆ ಪ್ರವೇಶ ಉಚಿತವಾಗಿದೆ. ನಾಟಕದ ಪ್ರಿಯರು ಮತ್ತು ಸಾಂಸ್ಕೃತಿಕ ಆಸಕ್ತರಿಗೆ ಇದು ಒಂದು ಅಪರೂಪದ ಅವಕಾಶ.
ವಿಶೇಷ ಸಹಕಾರ: ಕನ್ನಡ ವಿಭಾಗ, ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ, ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯ, ಮಂಗಳೂರು. ನಾಟಕೋತ್ಸವದಲ್ಲಿ ನಿಮ್ಮ ಉಪಸ್ಥಿತಿಗೆ ನಿಮ್ಮನ್ನು ಆಮಂತ್ರಿಸುತ್ತೇವೆ!




