1700ಕ್ಕೂ ಹೆಚ್ಚು ಕುಟುಂಬಗಳಿಗೆ 9 ಕೋಟಿ ರೂಪಾಯಿ ಸೇವೆ — ಅರ್ಜುನ್ ಭಂಡಾರ್ಕರ್ಗೆ ಹುಟ್ಟೂರ ಸನ್ಮಾನ
ಕಳೆದ ಆರು ವರ್ಷಗಳಿಂದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮೂಲಕ 1700ಕ್ಕೂ ಅಧಿಕ ಕುಟುಂಬಗಳಿಗೆ ಸುಮಾರು 9 ಕೋಟಿ ರೂಪಾಯಿ ಮೌಲ್ಯದ ಸೇವೆಯನ್ನು ದಾನಿಗಳ ಸಹಕಾರದಿಂದ ಸಮಾಜಕ್ಕೆ ಅರ್ಪಣೆಗೈದ ಸಂಸ್ಥಾಪಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2025 ಪುರಸ್ಕೃತ ಅರ್ಜುನ್ ಭಂಡಾರ್ಕರ್ ಅವರಿಗೆ ವಿಶಿಷ್ಟ ಸನ್ಮಾನ ಕಾದಿದೆ.

ಸೇವಾಸಂಸ್ಥೆಗಳ ಸಹಭಾಗಿತ್ವದಲ್ಲಿ ಹುಟ್ಟೂರ ಅಭಿನಂದನಾ ಸಮಿತಿ ವತಿಯಿಂದ ಆಯೋಜಿಸಿರುವ ಈ ಹುಟ್ಟೂರ ಸನ್ಮಾನ ಕಾರ್ಯಕ್ರಮವು ಡಿಸೆಂಬರ್ 07ರಂದು ಭಾನುವಾರ ಬೆಳಿಗ್ಗೆ 9.00ರಿಂದ 10.30ರ ತನಕ ಬಂಟ್ವಾಳದ ರಾಜಸೌಧದ ಸ್ವರ್ಣಸಭಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಪ್ರಕಟಿಸಿದೆ.


ಸೇವಾ ತತ್ವ, ಸಮಾಜಮುಖಿ ಕಾರ್ಯ ಹಾಗೂ ಅನನ್ಯ ಕೊಡುಗೆಗಳ ಪರಿಗಣನೆಯೊಂದಿಗೆ ನೀಡಲಾಗುತ್ತಿರುವ ಈ ಸನ್ಮಾನವನ್ನು ಸ್ಥಳೀಯರು ಹಾಗೂ ಸಮಾಜಸೇವಕರು ಹರ್ಷದಿಂದ ಸ್ವಾಗತಿಸಿದ್ದಾರೆ.




