January 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ FOCUS ವಾರ್ಷಿಕ ಸಭೆ

2026–27ನೇ ಸಾಲಿನ ಹೊಸ ಪದಾಧಿಕಾರಿಗಳ ಚುನಾವಣೆ

ಗಮನಸೆಳೆದ ಶೈಕ್ಷಣಿಕ ಪ್ರಶಸ್ತಿ ಹಾಗೂ ದಾನಧರ್ಮ ಕಾರ್ಯಕ್ರಮಗಳು

ಫೋರಂ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (FOCUS) ಇದರ ವಾರ್ಷಿಕ ಸಭೆಯು ಮಂಗಳೂರಿನ ಜೆಪ್ಪು ಸೆಮಿನರಿ ಮರಿಯಾ ಜಯಂತಿ ಹಾಲ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ 2026–27 ನೇ ಸಾಲಿನ ಹೊಸ ಪದಾಧಿಕಾರಿಗಳ ಚುನಾವಣೆಯನ್ನು ನೆರವೇರಿಸಲಾಯಿತು.

ಹೊಸ ಪದಾಧಿಕಾರಿಗಳು:

ಅಧ್ಯಕ್ಷ: ಮೆಲ್ವಿನ್ ಪ್ರಕಾಶ್ ಪಿರೇರಾ (ಮೆಸ್ಕಾಂ, ಬಂಟ್ವಾಳ)

ಉಪಾಧ್ಯಕ್ಷ: ಕೆವಿನ್ ಲೋಬೊ (ಸಿದ್ದಕಟ್ಟೆ, ಬಂಟ್ವಾಳ)

ಕಾರ್ಯದರ್ಶಿ: ಪಿಯುಸ್ ಡಿಸೋಜ (ಮೆಸ್ಕಾಂ, ಮಂಗಳೂರು)

ಕೋಶಾಧಿಕಾರಿ: ಮೆಲ್ವಿನ್ ಡಿಸೋಜ (ಮೆಸ್ಕಾಂ, ಉಳ್ಳಾಲ)

ಸಂಯೋಜಕ: ಸುನಿಲ್ ಮೊಂತೇರೊ (ಮೆಸ್ಕಾಂ, ಗುರುಪುರ ಕೈಕಂಬ)

ಸಂಘಟನಾ ಕಾರ್ಯದರ್ಶಿ: ಸಿರಿಲ್ ರಾಬರ್ಟ್ ಡಿಸೋಜ (ಪೆರ್ಮನ್ನೂರು, ಉಳ್ಳಾಲ) ಆಯ್ಕೆಯಾದರು. ಆಯ್ಕೆಗೊಂಡ ಎಲ್ಲಾ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಕ್ರಿಸ್ಮಸ್ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ FOCUS ಸಂಸ್ಥೆಯು ಬಹುಮಾನಗಳನ್ನು ವಿತರಿಸಿತು. ಜೊತೆಗೆ ದಾನಧರ್ಮದ ಭಾಗವಾಗಿ ಇಬ್ಬರು ಕ್ಯಾನ್ಸರ್ ರೋಗಿಗಳಿಗೆ ಸಹಾಯಧನವನ್ನು ಒದಗಿಸಲಾಯಿತು.

ಕಾರ್ಯಕ್ರಮದಲ್ಲಿ ಆಶೀರ್ವಾದ ಹಾಗೂ ಪ್ರಮುಖ ಅತಿಥಿಗಳು:

ಮಂಗಳೂರು ಧರ್ಮಕ್ಷೇತ್ರದ YCS–YSM ಕೇಂದ್ರೀಯ ನಿರ್ದೇಶಕರಾದ ವಂದನೀಯ ಫಾದರ್ ರೋಶನ್ ಡಿಕುನ್ಹಾ ಅವರು ಕಾರ್ಯಕ್ರಮವನ್ನು ಆಶೀರ್ವದಿಸಿದರು. ರಚನಾ ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಜಾನ್ ಬಿ. ಮೊಂತೇರೊ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಹಿರಿಯ ಸಹಾಯಕ ನಿರ್ದೇಶಕ (ತೋಟಗಾರಿಕೆ) ಜೋ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರ್ವಹಣೆ:

ಗಣ್ಯರನ್ನು ಫೋಕಸ್ ಸಂಘಟನೆಯ ಅಧ್ಯಕ್ಷ ಜಾನ್ ಡಿಸೋಜ  ಸ್ವಾಗತಿಸಿದರು. ಸಂಘಟನೆಯ ಕಾರ್ಯದರ್ಶಿ ಬೀನಾ ಡಿಸೋಜ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಮೌರಿಸ್ ಡಿಸೋಜ ಕನ್ವೇನರ್ ವಹಿಸಿದ್ದರು. ವಿಲ್ಫ್ರೆಡ್ ಮತಾಯಸ್ ಅವರು ಮನೋರಂಜನಾ ಆಟಗಳನ್ನು ನಡೆಸಿ ರಂಜಿಸಿದರು.

ಸುಮಾರು 92 ಮಂದಿ ಕ್ರೈಸ್ತ ಸಮುದಾಯದ ಸರ್ಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ನಿವೃತ್ತ ನೌಕರರು ಹಾಗೂ ವಿದ್ಯುತ್ ಗುತ್ತಿಗೆದಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಮಂಗಳೂರು ಕ್ರೈಸ್ತ ಸಮುದಾಯದ ಒಕ್ಕೂಟ, ಸೇವಾ ಚಟುವಟಿಕೆ ಮತ್ತು ಪರಸ್ಪರ ಸಹಕಾರಕ್ಕೆ ಸಾಕ್ಷಿಯಾದ ಕಾರ್ಯಕ್ರಮ FOCUS ಸಂಸ್ಥೆಯ ಮತ್ತೊಂದು ಯಶಸ್ವಿ ಆಯೋಜನೆ ಆಗಿ ದಾಖಲಾಗಿದೆ.

You may also like

News

ಸೂರಿಕುಮೇರುವಿನ ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಬ್ರಷ್ಟಾಚಾರದ ಆರೋಪ ಸಂಪೂರ್ಣ ಸುಳ್ಳು – ಹಿಂದಿನ ಆಡಳಿತ ಮಂಡಳಿಯ ಖಡಕ್ ಸ್ಪಷ್ಟನೆ

ಬ್ರಷ್ಟಾಚಾರ ನಡೆದಿದ್ದರೆ ಧರ್ಮಾಧ್ಯಕ್ಷರ ಮೌನ ಹೇಗೆ ಸಾಧ್ಯ? – ಅಪಪ್ರಚಾರಕರಿಗೆ ಭಕ್ತಾಧಿಗಳ ನೇರ ಸವಾಲು ನಿಷ್ಟಾವಂತ ಸೇವೆ ನೀಡಿದ ಹಿಂದಿನ ಧರ್ಮಗುರುಗಳ ಹೆಸರುಗಳಿಗೆ ಮಸಿ ಬಳಿಸಲು ಷಡ್ಯಂತ್ರ
News

ತುಳುಕೂಟ ಥೈಲ್ಯಾಂಡ್ ಸಹಕಾರದಿಂದ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರ ಸಂಪೂರ್ಣ ಪುನರ್‌ನವೀಕರಣ – ಹಸ್ತಾಂತರ ಹಾಗೂ ಸೇವಾ ಕಾರ್ಯಕ್ರಮಗಳು ಯಶಸ್ವಿ

ಅಧ್ಯಕ್ಷ ವಿನಯ್ ರೈ ಅವರ ಕಾರ್ಯ ವೈಖರಿಗೆ ವ್ಯಾಪಕ ಮೆಚ್ಚುಗೆ ಬಟ್ಟಾರಬೆಟ್ಟು–ಅಳಪೆ–ಪಡೀಲ್‌ನ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರವು ತುಳುಕೂಟ ಥೈಲ್ಯಾಂಡ್‌ನ ಅಮೂಲ್ಯ ಸಹಕಾರದಿಂದ ಸಂಪೂರ್ಣವಾಗಿ ಪುನರ್‌ನವೀಕರಣಗೊಂಡಿದ್ದು, ಇದರ ಹಸ್ತಾಂತರ

You cannot copy content of this page