January 12, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜಿಲ್ಲೆಯಲ್ಲಿ ಅತೀ ದೊಡ್ಡ ಕ್ರಿಸ್ಮಸ್ ನಕ್ಷತ್ರ — ನೆಲ್ಯಾಡಿ ಸಂತ ಆಲ್ಫೋನ್ಸಾ ಚರ್ಚ್ SMYM ಯುವಕರಿಂದ ಅದ್ಭುತ ಸೃಜನಶೀಲತೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯ ಸಂತ ಅಲ್ಫೋನ್ಸಾ ಪುಣ್ಯ ಕ್ಷೇತ್ರಕ್ಕೆ ಸೇರಿದ SMYM ಯುವಕರು ವಿಶಿಷ್ಟ ಸಾಧನೆ ಮಾಡಿ ದಾಖಲೆ ಬರಹಕ್ಕೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಸುಮಾರು 42 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ಮಹಾಕಾಯ ಕ್ರಿಸ್ಮಸ್ ನಕ್ಷತ್ರ ಈಗಾಗಲೇ ಜಿಲ್ಲೆಯ ಅತೀ ಎತ್ತರದ ಕ್ರಿಸ್ಮಸ್ ನಕ್ಷತ್ರ ಎಂಬ ಗೌರವವನ್ನು ಪಡೆದಿದೆ.

ಏಕತೆ, ಪರಿಸರ ಸ್ನೇಹಿ ಅಲಂಕಾರ ಮತ್ತು ಸೌಹಾರ್ದತೆಯ ಸಂಕೇತವಾಗಿ ನಿರ್ಮಿಸಲಾದ ಈ ನಕ್ಷತ್ರ ಯುವಕರ ಪ್ರತಿಭೆ, ಸಮಾಜ ಸೇವೆ ಮತ್ತು ಕ್ರಿಸ್ಮಸ್ ಭಾವನೆಯ ಅರಳಿದ ನೆರಳು. ಈ ಸಾಧನೆ ವಂದನೀಯ ಫಾದರ್ ಶಾಜಿ ಮ್ಯಾಥ್ಯು ಮತ್ತು ವಂದನೀಯ ಫಾದರ್ ಅಲೆಕ್ಸ್ ಜಾನ್ಸನ್ ಅವರ ಮಾರ್ಗದರ್ಶನ-ಸಹಕಾರ ಹಾಗೂ SMYM ಯುವಕರ ಕಠಿಣ ಪರಿಶ್ರಮದ ಫಲವಾಗಿದೆ.

ಪ್ರತಿ ಸಂಜೆ ಬೆಳಕು ಮಿಂಚುತ್ತಿದ್ದಂತೆ ಈ ವಿಶಿಷ್ಟ ನಕ್ಷತ್ರವನ್ನು ನೋಡುವುದಕ್ಕಾಗಿ ವಿವಿಧ ಕಡೆಗಳಿಂದ ಜನರು ನೆಲ್ಯಾಡಿಗೆ ಆಗಮಿಸುತ್ತಿದ್ದು, ಯುವಕರ ಪರಿಶ್ರಮಕ್ಕೆ ಪ್ರಶಂಸೆಯ ಮಳೆ ಸುರಿಯುತ್ತಿದೆ.

You may also like

News

ಸೂರಿಕುಮೇರುವಿನ ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಬ್ರಷ್ಟಾಚಾರದ ಆರೋಪ ಸಂಪೂರ್ಣ ಸುಳ್ಳು – ಹಿಂದಿನ ಆಡಳಿತ ಮಂಡಳಿಯ ಖಡಕ್ ಸ್ಪಷ್ಟನೆ

ಬ್ರಷ್ಟಾಚಾರ ನಡೆದಿದ್ದರೆ ಧರ್ಮಾಧ್ಯಕ್ಷರ ಮೌನ ಹೇಗೆ ಸಾಧ್ಯ? – ಅಪಪ್ರಚಾರಕರಿಗೆ ಭಕ್ತಾಧಿಗಳ ನೇರ ಸವಾಲು ನಿಷ್ಟಾವಂತ ಸೇವೆ ನೀಡಿದ ಹಿಂದಿನ ಧರ್ಮಗುರುಗಳ ಹೆಸರುಗಳಿಗೆ ಮಸಿ ಬಳಿಸಲು ಷಡ್ಯಂತ್ರ
News

ತುಳುಕೂಟ ಥೈಲ್ಯಾಂಡ್ ಸಹಕಾರದಿಂದ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರ ಸಂಪೂರ್ಣ ಪುನರ್‌ನವೀಕರಣ – ಹಸ್ತಾಂತರ ಹಾಗೂ ಸೇವಾ ಕಾರ್ಯಕ್ರಮಗಳು ಯಶಸ್ವಿ

ಅಧ್ಯಕ್ಷ ವಿನಯ್ ರೈ ಅವರ ಕಾರ್ಯ ವೈಖರಿಗೆ ವ್ಯಾಪಕ ಮೆಚ್ಚುಗೆ ಬಟ್ಟಾರಬೆಟ್ಟು–ಅಳಪೆ–ಪಡೀಲ್‌ನ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರವು ತುಳುಕೂಟ ಥೈಲ್ಯಾಂಡ್‌ನ ಅಮೂಲ್ಯ ಸಹಕಾರದಿಂದ ಸಂಪೂರ್ಣವಾಗಿ ಪುನರ್‌ನವೀಕರಣಗೊಂಡಿದ್ದು, ಇದರ ಹಸ್ತಾಂತರ

You cannot copy content of this page