April 17, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜಿಲ್ಲೆಯಲ್ಲಿ ಅತೀ ದೊಡ್ಡ ಕ್ರಿಸ್ಮಸ್ ನಕ್ಷತ್ರ — ನೆಲ್ಯಾಡಿ ಸಂತ ಆಲ್ಫೋನ್ಸಾ ಚರ್ಚ್ SMYM ಯುವಕರಿಂದ ಅದ್ಭುತ ಸೃಜನಶೀಲತೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯ ಸಂತ ಅಲ್ಫೋನ್ಸಾ ಪುಣ್ಯ ಕ್ಷೇತ್ರಕ್ಕೆ ಸೇರಿದ SMYM ಯುವಕರು ವಿಶಿಷ್ಟ ಸಾಧನೆ ಮಾಡಿ ದಾಖಲೆ ಬರಹಕ್ಕೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಸುಮಾರು 42 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ಮಹಾಕಾಯ ಕ್ರಿಸ್ಮಸ್ ನಕ್ಷತ್ರ ಈಗಾಗಲೇ ಜಿಲ್ಲೆಯ ಅತೀ ಎತ್ತರದ ಕ್ರಿಸ್ಮಸ್ ನಕ್ಷತ್ರ ಎಂಬ ಗೌರವವನ್ನು ಪಡೆದಿದೆ.

ಏಕತೆ, ಪರಿಸರ ಸ್ನೇಹಿ ಅಲಂಕಾರ ಮತ್ತು ಸೌಹಾರ್ದತೆಯ ಸಂಕೇತವಾಗಿ ನಿರ್ಮಿಸಲಾದ ಈ ನಕ್ಷತ್ರ ಯುವಕರ ಪ್ರತಿಭೆ, ಸಮಾಜ ಸೇವೆ ಮತ್ತು ಕ್ರಿಸ್ಮಸ್ ಭಾವನೆಯ ಅರಳಿದ ನೆರಳು. ಈ ಸಾಧನೆ ವಂದನೀಯ ಫಾದರ್ ಶಾಜಿ ಮ್ಯಾಥ್ಯು ಮತ್ತು ವಂದನೀಯ ಫಾದರ್ ಅಲೆಕ್ಸ್ ಜಾನ್ಸನ್ ಅವರ ಮಾರ್ಗದರ್ಶನ-ಸಹಕಾರ ಹಾಗೂ SMYM ಯುವಕರ ಕಠಿಣ ಪರಿಶ್ರಮದ ಫಲವಾಗಿದೆ.

ಪ್ರತಿ ಸಂಜೆ ಬೆಳಕು ಮಿಂಚುತ್ತಿದ್ದಂತೆ ಈ ವಿಶಿಷ್ಟ ನಕ್ಷತ್ರವನ್ನು ನೋಡುವುದಕ್ಕಾಗಿ ವಿವಿಧ ಕಡೆಗಳಿಂದ ಜನರು ನೆಲ್ಯಾಡಿಗೆ ಆಗಮಿಸುತ್ತಿದ್ದು, ಯುವಕರ ಪರಿಶ್ರಮಕ್ಕೆ ಪ್ರಶಂಸೆಯ ಮಳೆ ಸುರಿಯುತ್ತಿದೆ.

You may also like

News

ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ – ಏಪ್ರಿಲ್ 18ಕ್ಕೆ ಪೂರ್ವಭಾವಿ ಸಭೆ ಹಾಗೂ ಸ್ವಾಗತ ಸಮಿತಿ ರಚನೆ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಘಟಕದ ಸಹಯೋಗದಲ್ಲಿ ಮೇ 12ರಂದು ನಡೆಯಲಿರುವ ‘ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ’ದ ಸಿದ್ಧತೆಗಳು
News

ಮಂಗಳೂರು ಧರ್ಮಕ್ಷೇತ್ರದ ವಿವಿಧ ಧರ್ಮಗುರುಗಳ 2026 ನೇ ಸಾಲಿನ ವರ್ಗಾವಣೆ ಪಟ್ಟಿ ಪ್ರಕಟ

ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಆದೇಶ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ

You cannot copy content of this page