ಉಡುಪಿ ಶೀರೂರು ಮಠ ಪರ್ಯಾಯ – ಡಿಸೆಂಬರ್ 16ರಂದು ಮಂಗಳೂರಿನಲ್ಲಿ ಪೂರ್ವಭಾವಿ ಸಭೆ
ಜಗದ್ಗುರು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಅಷ್ಟ ಮಠಗಳ ಪೈಕಿ ಒಂದಾದ ಉಡುಪಿ ಶೀರೂರು ಮಠದ ಯತಿಗಳಾದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ದಿನಾಂಕ 18-01-2026ರಂದು ಭಾನುವಾರ ಶ್ರೀ ಕೃಷ್ಣನ ಪೂಜಾ ದೀಕ್ಷೆಯೊಂದಿಗೆ ತಮ್ಮ ಪ್ರಥಮ ಪರ್ಯಾಯ ಸರ್ವಜ್ಞ ಪೀಠಾರೋಹಣವನ್ನು ನೆರವೇರಿಸಲಿದ್ದಾರೆ.
ಈ ಮಹತ್ವದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಪೂಜ್ಯ ಶ್ರೀಪಾದರನ್ನು ಮಂಗಳೂರಿಗೆ ಭವ್ಯವಾಗಿ ಸ್ವಾಗತಿಸುವ ಕಾರ್ಯಕ್ರಮಗಳ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚಿಸಲು ಡಿಸೆಂಬರ್ 16ರಂದು ಮಂಗಳವಾರ ಸಂಜೆ 5 ಗಂಟೆಗೆ ಕೊಡಿಯಾಲ್ಬೈಲ್ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.

ಡಾ. ಎಂ.ಬಿ. ಪುರಾಣಿಕ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಶೀರೂರು ಮಠದ ಪ್ರಮುಖರು ಭಾಗವಹಿಸಲಿದ್ದಾರೆ. ಸುಧಾಕರ ರಾವ್ ಪೇಜಾವರ, ಗುರುಪ್ರಸಾದ್ ಕಡಂಬಾರ್ ಹಾಗೂ ಬಿ. ಸುಬ್ರಹ್ಮಣ್ಯ ರಾವ್ ಉಪಸ್ಥಿತರಿರಲಿದ್ದಾರೆ.

ಶೀರೂರು ಮಠದ ಶಿಷ್ಯವೃಂದ, ಸಮಾಜಬಾಂಧವರು, ವಿವಿಧ ಸಂಘ–ಸಂಸ್ಥೆಗಳ ಪ್ರಮುಖರು ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ನೀಡಬೇಕೆಂದು ಶೀರೂರು ಪರ್ಯಾಯ ಸಮಿತಿಯ ಪರವಾಗಿ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ವಿನಂತಿಸಿದ್ದಾರೆ.


ಸಂಪರ್ಕ ಸಂಖ್ಯೆ:
ಡಾ. ಎಂ.ಬಿ. ಪುರಾಣಿಕ್ – 9448143321
ಎಸ್. ಪ್ರದೀಪ ಕುಮಾರ ಕಲ್ಕೂರ – 9845083736
ಸುಧಾಕರ ರಾವ್ ಪೇಜಾವರ – 9448546051
ಬಿ. ಸುಬ್ರಹ್ಮಣ್ಯ ರಾವ್ – 9448012068
ಗುರುಪ್ರಸಾದ್ ಕಡಂಬಾರ್ – 9380999424




