ಜೀವ ಬೆದರಿಕೆ ಆರೋಪ: ಆರೋಪಿ ಚಿನ್ನ ಸಿ.ಎನ್. ದಂಪತಿಗೆ ರಕ್ಷಣೆ ಕೋರಿ ಬೆಳ್ತಂಗಡಿ ಠಾಣೆಗೆ ಮನವಿ
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಾಗೂ ಬಳಿಕ ಎಸ್.ಐ.ಟಿ.ಗೆ ವರ್ಗಾವಣೆಯಾದ ಅ.ಕ್ರ. 39/2025 ಪ್ರಕರಣದ ಆರೋಪಿತ ಚಿನ್ನ ಸಿ.ಎನ್. ಅವರು, ತನಗೆ ಹಾಗೂ ತನ್ನ ಪತ್ನಿಗೆ ಜೀವ ಬೆದರಿಕೆ ಇರುವ ಸಾಧ್ಯತೆ ಇದೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.


ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಹಾಗೂ ಸಮೀರ್ ಎಂ.ಡಿ. ಎಂಬವರುಗಳಿಂದ ಜೀವ ಅಪಾಯ ಎದುರಾಗಬಹುದೆಂದು ಮನವಿಯಲ್ಲಿ ಉಲ್ಲೇಖಿಸಿ, ತಮ್ಮ ಹಾಗೂ ಪತ್ನಿಯ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಅವರು ದಿನಾಂಕ 18-12-2025ರಂದು ಗುರುವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅರ್ಜಿ ನೀಡಿದ್ದಾರೆ.

ಸದರ ಮನವಿಯನ್ನು ಸ್ವೀಕರಿಸಿದ ಬೆಳ್ತಂಗಡಿ ಪೊಲೀಸರು, PO1070250601253 ಸಂಖ್ಯೆಯಂತೆ ದೂರರ್ಜಿಯನ್ನು ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.




