May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೊಗರ್ನಾಡ್ ಚರ್ಚ್ ಇದರ 250ನೇ ಜುಬಿಲಿ ಅಂಗವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ‘ಡಿವೈನ್ ಮರ್ಸಿ’ ನೂತನ ಗೃಹ ಹಸ್ತಾಂತರ

ಮಂಗಳೂರು ಧರ್ಮಕ್ಷೇತ್ರದ ಮೊಗರ್ನಾಡ್ ಧರ್ಮಕೇಂದ್ರದ 250ನೇ ವರ್ಷದ ಜುಬಿಲಿ ಸಂಭ್ರಮಾಚರಣೆಯ ಅಂಗವಾಗಿ ಸಂಕಷ್ಟದಲ್ಲಿರುವವರಿಗೆ ಮನೆ ನಿರ್ಮಾಣ ಯೋಜನೆಯನ್ನು ಲಯನ್ಸ್ ಕ್ಲಬ್ ಕೊಲ್ನಾಡು–ಸಾಲೆತ್ತೂರು, ಪತ್ತುಗುಡ್ಡೆ ಬೊಳ್ಳಾಯಿ, ಸಂತ ವಿಶೆಂತ್ ಪಾವ್ಲ್ ಸಭಾ ಮೊಗರ್ನಾಡ್ ಘಟಕ ಹಾಗೂ ಜುಬಿಲಿ ಸಮಿತಿ ಮೊಗರ್ನಾಡ್ ಸಂಯುಕ್ತವಾಗಿ ಕೈಗೆತ್ತಿಕೊಂಡಿದ್ದರು. ಈ ಯೋಜನೆಯಡಿ ಬೊಳ್ಳಾಯಿ ಗ್ರಾಮದ ದಿವಗಂತ ಲಿಯೊ ಡಿಕುನ್ಹಾ ಮತ್ತು ಫೆಲ್ಸಿ ಡಿಕುನ್ಹಾ ಕುಟುಂಬಕ್ಕೆ ನಿರ್ಮಿಸಲಾದ ‘ಡಿವೈನ್ ಮರ್ಸಿ’ ಎಂಬ ನೂತನ ಗೃಹವನ್ನು ಡಿಸೆಂಬರ್ 20ರಂದು ಶನಿವಾರ ಸಂಪೂರ್ಣ ಕಾಮಗಾರಿ ಮುಗಿದ ಬಳಿಕ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮೊಗರ್ನಾಡ್ ಚರ್ಚ್ ನಲ್ಲಿ ಸೇವೆ ನೀಡುತ್ತಿರುವ ಡೀಕನ್ ಅವಿಲ್ ಸಾಂತುಮಾಯೊರ್ ಅವರು ನೂತನ ಮನೆಯ ಆಶೀರ್ವಚನ ನೆರವೇರಿಸಿದರು. ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ಅವರು ನೂತನ ಮನೆಯ ಉದ್ಘಾಟನೆ ನಡೆಸಿದರು. ಕುಟುಂಬದವರು ಈ ಯೋಜನೆಗೆ ಉದಾರ ಮನಸ್ಸಿನಿಂದ ದಾನ ನೀಡಿ ಸಹಕಾರ ನೀಡಿದ ಎಲ್ಲರ ಉಪಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದರು.

ನೂತನ ಗೃಹ ಪ್ರವೇಶದ ಉದ್ಘಾಟನಾ ಸಮಾರಂಭದಲ್ಲಿ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವ ಮಾತಾ ಕಾನ್ವೆಂಟಿನ ಧರ್ಮ ಭಗಿನಿಯರು, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೋ, ಸರ್ವ ಆಯೋಗಗಳ ಸಂಚಾಲಕಿ ಎಮಿಲಿಯಾನಾ ಡಿಕುನ್ಹಾ, ಜುಬಿಲಿ ಸಮಿತಿಯ ಸಂಚಾಲಕ ನವೀನ್ ರಾಜೇಶ್, ಪ್ರೊಜೆಕ್ಟ್ ಸಮಿತಿಯ ಸಂಚಾಲಕ ಎಲಿಯಾಸ್ ಡಿಸೋಜ, ಚರ್ಚ್ ಪಾಲನಾ ಸಮಿತಿಯ ಸದಸ್ಯರು, ಆರ್ಥಿಕ ಸಮಿತಿಯ ಸದಸ್ಯರು, ಜುಬಿಲಿ ಸಮಿತಿಯ ಸದಸ್ಯರು, ಸಂತ ವಿಶೆಂತ್ ಪಾವ್ಲ್ ಸಭೆಯ ಸದಸ್ಯರು ಹಾಗೂ ದೇವ ಮಾತಾ ಧರ್ಮಕೇಂದ್ರದ ಭಕ್ತಾಧಿಗಳು ಉಪಸ್ಥಿತರಿದ್ದರು.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page