August 26, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನ ಪಡೀಲ್ ಅಂಗನವಾಡಿ ಶಾಲೆ ನವೀಕರಣ ಪೂರ್ಣ – ತುಳುಕೂಟ ಥೈಲ್ಯಾಂಡ್‌ನಿಂದ ಜನವರಿ 3ರಂದು ಹಸ್ತಾಂತರ

ಅಧ್ಯಕ್ಷ ವಿನಯ್ ರೈ ಅವರ ನೇತೃತ್ವ

ತುಳುಕೂಟ ಥೈಲ್ಯಾಂಡ್ ವತಿಯಿಂದ ಪಡೀಲ್ ನಲ್ಲಿರುವ ಸರ್ಕಾರಿ ಅಂಗನವಾಡಿ ಶಾಲೆಯ ನವೀಕರಣ ಕಾರ್ಯವನ್ನು ಥೈಲ್ಯಾಂಡ್ ತುಳುಕೂಟದ ಅಧ್ಯಕ್ಷ ವಿನಯ್ ರೈ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಈ ಯೋಜನೆಯಡಿಯಲ್ಲಿ ಶಾಲೆಯ ಮೇಲ್ಛಾವಣಿ ದುರಸ್ತಿ, ಸಿವಿಲ್ ಕಾಮಗಾರಿ, ಕಾರ್ಪೆಂಟ್ರಿ ಹಾಗೂ ಪ್ಲಂಬಿಂಗ್ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಬೇಸಿಗೆ ಸಮಯದಲ್ಲಿ ಮಕ್ಕಳಿಗೆ ಉಷ್ಣತೆಯಿಂದ ರಕ್ಷಣೆ ದೊರಕುವಂತೆ ಮೇಲ್ಛಾವಣಿ ಕಲ್ಲಿನ ಅಡಿಯಲ್ಲಿ ಹೊಸ ಸೀಲಿಂಗ್ ಅಳವಡಿಸಲಾಗಿದೆ. ಪ್ರಸ್ತುತ ಶಾಲಾ ಕಟ್ಟಡದ ಬಣ್ಣ ಹಚ್ಚುವ ಕೆಲಸ ಪ್ರಗತಿಯಲ್ಲಿದೆ.

ಮುಂದಿನ ಹಂತದಲ್ಲಿ ಶಾಲೆಗೆ ಅಗತ್ಯವಿರುವ ಸೌಲಭ್ಯಗಳಾದ ಸೀಲಿಂಗ್ ಫ್ಯಾನ್ ಗಳು, ಶಾಲಾ ಅವಧಿಯಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಯುಪಿಎಸ್ ವ್ಯವಸ್ಥೆ, ಶಾಲಾ ಸಾಮಗ್ರಿಗಳನ್ನು ಸಂಗ್ರಹಿಸಲು ಸ್ಟೀಲ್ ಅಲಮಾರಿಗಳು, ಶಾಲಾ ಕಾರ್ಯಕ್ರಮಗಳಿಗೆ ಸೌಂಡ್ ಬಾಕ್ಸ್ ಮತ್ತು ಮೈಕ್ರೋಫೋನ್, ಅಡುಗೆಮನೆಯಲ್ಲಿ ಉಪಯೋಗಕ್ಕೆ ಮರದ ಕ್ಯಾಬಿನೆಟ್‌ಗಳು, ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ಪ್ರೆಶರ್ ಕುಕ್ಕರ್‌ಗಳು ಹಾಗೂ ದಿನಸಿ ಸಂಗ್ರಹಣೆಗೆ ಸ್ಟೇನ್‌ಲೆಸ್ ಸ್ಟೀಲ್ ಡಬ್ಬೆಗಳು ಖರೀದಿಸುವ ಯೋಜನೆ ರೂಪಿಸಲಾಗಿದೆ.

ಇದಲ್ಲದೆ, ಸ್ಟೇಷನರಿ ಸಾಮಗ್ರಿಗಳು, ಪುಸ್ತಕಗಳು, ಕಲಿಕಾ ಪೋಸ್ಟರ್‌ಗಳು, ಆಟಿಕೆಗಳು ಹಾಗೂ ಅಧ್ಯಯನ ಸಾಮಗ್ರಿಗಳನ್ನು ಪ್ರಾಯೋಜಕರಿಂದ ಈಗಾಗಲೇ ಸ್ವೀಕರಿಸಲಾಗಿದೆ. ನವೀಕರಿಸಲಾದ ಶಾಲಾ ಕಟ್ಟಡವನ್ನು ಎಲ್ಲಾ ಸೌಲಭ್ಯಗಳೊಂದಿಗೆ ಜನವರಿ 3ರಂದು ಶನಿವಾರ, ಮಧ್ಯಾಹ್ನ ಸುಮಾರು 2:00 ಗಂಟೆಗೆ ಶಾಲಾ ಸಮಿತಿಗೆ ಅಧಿಕೃತವಾಗಿ ಹಸ್ತಾಂತರಿಸುವ ಯೋಜನೆ ಮಾಡಲಾಗಿದೆ. ಮಂಗಳೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿರುವ ತುಳುಕೂಟ ಸದಸ್ಯರು ಈ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಈ ಕಾರ್ಯದ ಮೂಲಕ ಅಂಗನವಾಡಿಯಲ್ಲಿ ಓದುತ್ತಿರುವ ಪುಟ್ಟ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಒದಗಿಸಲು ಸಹಕರಿಸುತ್ತಿರುವುದು ತುಳುಕೂಟ ಥೈಲ್ಯಾಂಡ್‌ನ ಎಲ್ಲಾ ಸದಸ್ಯರಿಗೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿಯೂ ತಮ್ಮ ಹುಟ್ಟೂರಿನಲ್ಲಿ ವರ್ಷಕ್ಕೊಮ್ಮೆ ಇಂತಹ ಸಾಮಾಜಿಕ ಸೇವಾ ಯೋಜನೆಗಳನ್ನು ಮುಂದುವರಿಸುವ ಆಶಯವನ್ನು ಸಂಘಟನೆ ವ್ಯಕ್ತಪಡಿಸಿದೆ.

You may also like

News

ಮಡಂತ್ಯಾರಿನ ಶಾನ್ವಿ ಮತ್ತು ಶ್ರೇಯಸ್‌ ಅವರಿಗೆ ‘ರಾಷ್ಟ್ರೀಯ ಪ್ರತಿಭಾ ರತ್ನ’ ಗೌರವ

ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್‌ (ರಿ.), ಕರ್ನಾಟಕ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಸ್ವಾತಂತ್ರ್ಯೋತ್ಸವ–2026’ ಕಾರ್ಯಕ್ರಮದಲ್ಲಿ ಮಡಂತ್ಯಾರಿನ ಪ್ರತಿಭೆಗಳಾದ ಶಾನ್ವಿ ಪೂಜಾರಿ ಹಾಗೂ ಶ್ರೇಯಸ್ ಪೂಜಾರಿ ಅವರಿಗೆ
News

ಮಡಂತ್ಯಾರಿನಲ್ಲಿ ಸಂಭ್ರಮದ ಕೊಂಕಣಿ ಮಾನ್ಯತಾ ದಿವಸ್

ಕೊಂಕಣಿ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಐಸಿವೈಎಂ ಮಡಂತ್ಯಾರು ಘಟಕ, ಸಾಮಾಜಿಕ ಸಂವಹನ ಆಯೋಗ, ಕಥೊಲಿಕ್ ಸಭಾ ಮಡಂತ್ಯಾರು ಹಾಗೂ

You cannot copy content of this page