July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಹಕಾರಿ ರಂಗದಲ್ಲಿ ಹೊಸ ಇತಿಹಾಸ ಸೃಷ್ಠಿಸಲಿರುವ ಫ್ಯಾಮ್‌ಕೋ (FAMCO) – ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ

ಕೇವಲ ಒಂದು ದಿನದಲ್ಲಿ 26 ಶಾಖೆಗಳನ್ನು ಆರಂಭಿಸಲಿರುವ FAMCO

ಮಂಗಳೂರು: ಪ್ರಸಿದ್ಧ ಬಹು-ರಾಜ್ಯ ಸಹಕಾರಿ ಸಂಸ್ಥೆಯಾದ ಫ್ಯಾಮ್‌ಕೋ (Family Development Co-operative Thrift & Credit Society Ltd) ಫೆಬ್ರವರಿ 28ರಂದು ಶನಿವಾರ ಭಾರತದ ಸಹಕಾರಿ ಇತಿಹಾಸದಲ್ಲೇ ಅತಿದೊಡ್ಡ ಮೈಲಿಗಲ್ಲನ್ನು ಸ್ಥಾಪಿಸಲು ಮುಂದಾಗಿದೆ. ಈ ಕುರಿತು ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಇಂದು ಫೆಬ್ರವರಿ 21ರಂದು ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಗಣ್ಯರು:

* ಮ್ಯಾಥ್ಯೂ ತೊಮಸ್ (Group COO – FAMCO)

* ಸುರೇಶ್ ಕೆ.ಪಿ. (Zhonal Head, Karnataka – FAMCO)

* ಡಾ. ಎಲ್. ಕೆ. ಸುವರ್ಣ (Organiser – FAMCO)

* ಗುರು ಲಿಂಗಯ್ಯ ಜಿ. (State Co-ordinator – FAMCO Karnataka)

ಪ್ರಮುಖ ಘೋಷಣೆಗಳು:

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗಣ್ಯರು, ಫೆಬ್ರವರಿ 28ರಂದು ಶನಿವಾರ ಒಂದೇ ದಿನದಲ್ಲಿ ದೇಶಾದ್ಯಂತ 26 ಹೊಸ ಶಾಖೆಗಳನ್ನು ಉದ್ಘಾಟಿಸುವ ಮೂಲಕ ಸಂಸ್ಥೆಯು ದಾಖಲೆ ನಿರ್ಮಿಸಲಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ತನ್ನ ನೆಲೆಯನ್ನು ವಿಸ್ತರಿಸುತ್ತಿರುವ ಫ್ಯಾಮ್‌ಕೋ, ಈಗಾಗಲೇ ಮೈಸೂರು ಮತ್ತು ಭದ್ರಾವತಿಯಲ್ಲಿ ಶಾಖೆಗಳನ್ನು ಆರಂಭಿಸಿದ್ದು, ಫೆಬ್ರವರಿ 23ರಂದು ಸೋಮವಾರ ಮಂಗಳೂರಿನಲ್ಲಿ ನೂತನ ಶಾಖೆ ಲೋಕಾರ್ಪಣೆಯಾಗಲಿದೆ.

ಸಂಸ್ಥೆಯ ಗುರಿ ಮತ್ತು ಸಾಧನೆ:

* ಆರ್ಥಿಕ ಭದ್ರತೆ: ಮಧ್ಯಮ ವರ್ಗದ ಕುಟುಂಬಗಳ ಸಬಲೀಕರಣವೇ ಸಂಸ್ಥೆಯ ಮುಖ್ಯ ಧ್ಯೇಯವಾಗಿದ್ದು, ಆಕರ್ಷಕ ಬಡ್ಡಿ ದರದಲ್ಲಿ ಚಿನ್ನದ ಸಾಲ ಮತ್ತು ಉಳಿತಾಯ ಯೋಜನೆಗಳನ್ನು ಜಾರಿಗೆ ತರಲಾಗಿದೆ.

* ಸಾಮಾಜಿಕ ಕಳಕಳಿ: ಡಾ. ವಿಬಿಂದಾಸ್ ಕಡಿಂಗೋಟು ಅವರ ನೇತೃತ್ವದಲ್ಲಿ 216 ಆದಿವಾಸಿ ಜೋಡಿಗಳ ಸಾಮೂಹಿಕ ವಿವಾಹ, ವಯನಾಡಿನ ಸಂತ್ರಸ್ತರಿಗೆ ಮನೆ ನಿರ್ಮಾಣ ಮತ್ತು ಹಸಿವು ಮುಕ್ತ ಸಮಾಜಕ್ಕಾಗಿ ‘ಅನ್ನಸಾರಥಿ’ ಯೋಜನೆಗಳನ್ನು ಸಂಸ್ಥೆ ಯಶಸ್ವಿಯಾಗಿ ನಡೆಸುತ್ತಿದೆ.

* ಉದ್ಯೋಗಾವಕಾಶ: ಪ್ರಸ್ತುತ 1,400ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ಸಂಸ್ಥೆಯು, ಮುಂದಿನ 12 ತಿಂಗಳಲ್ಲಿ 200 ಹೊಸ ಶಾಖೆಗಳನ್ನು ತೆರೆಯುವ ಮೂಲಕ ಕನಿಷ್ಠ 750 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.

* ದೂರದೃಷ್ಟಿ 2030: 2030ರ ವೇಳೆಗೆ ಫ್ಯಾಮ್‌ಕೋ ಸಂಸ್ಥೆಯನ್ನು ‘ಸ್ಮಾಲ್ ಫೈನಾನ್ಸ್ ಬ್ಯಾಂಕ್’ ಆಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಲಾಯಿತು.

You may also like

News

Father Muller Principal Wins Prestigious Global Young Investigator Award at MASCC/ISOO Congress in Australia

In a moment of immense pride for the nation and the physiotherapy fraternity, Prof. Cherishma Dsilva, Principal of Father Muller
News

ಮಂಗಳೂರಿನ ಸಂದೇಶ ಫೌಂಡೇಶನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಹೊಸ ಅಧ್ಯಾಯ

‘Mangalore IAS – A School for Civil Services’ಗೆ ಚಾಲನೆ ನೀಡಿದ ಬಳ್ಳಾರಿ ಧರ್ಮಕ್ಷೇತ್ರದ ಬಿಷಪ್ ಹೆನ್ರಿ ಡಿಸೋಜ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ

You cannot copy content of this page