ಮಾಚ್ 15ರಂದು ಲಯನ್ಸ್ ಜಿಲ್ಲೆ 317 ಡಿ ‘ಆರಾಧ್ಯ’ ಪ್ರಾಂತ್ಯ ಸಮ್ಮೇಳನ – ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ
ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆ 317 ಡಿ ಇದರ ಪ್ರಾಂತ್ಯ 1ರ ಪ್ರಾಂತ್ಯ ಸಮ್ಮೇಳನ “ಆರಾಧ್ಯ” ಇದೇ ಮಾರ್ಚ್ 15ರ ಭಾನುವಾರದಂದು ಚೊಕ್ಕಬೆಟ್ಟದ ಎಡ್ಜ್ ವಾಟರ್ ಸ್ಥಳದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಪ್ರಾಂತ್ಯಾಧ್ಯಕ್ಷ ಬಿ. ಎಸ್. ರವಿಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಪ್ರಾಂತ್ಯ 1ರ ಪ್ರಥಮ ಮಹಿಳೆ ದಿವ್ಯ ರವಿಶಂಕರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಹಾಸ್ಯ ಕವಿ ಎಚ್. ಡುಂಡಿರಾಜ್, ಖ್ಯಾತ ಭರತನಾಟ್ಯ ಕಲಾವಿದೆ ಹಾಗೂ ಚಲನಚಿತ್ರ ನಟಿ ವಿದುಷಿ ಮಾನಸಿ ಸುಧೀರ್ ಮತ್ತು ಲಯನ್ಸ್ ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ್ ಶೆಣೈ ಭಾಗವಹಿಸಲಿದ್ದಾರೆ.



ಸಮ್ಮೇಳನದ ಪ್ರಮುಖ ಮುಖ್ಯಾಂಶಗಳು:
* ಸೇವಾ ಕಾರ್ಯಕ್ರಮ: ಸಮ್ಮೇಳನದ ಸ್ಮರಣಾರ್ಥವಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೊಕ್ಕಬೆಟ್ಟದಲ್ಲಿ ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಅನ್ನು ಶಾಲಾ ಅಭಿವೃದ್ಧಿ ಸಮಿತಿಗೆ ಹಸ್ತಾಂತರಿಸಲಾಗಿದೆ.
* ಆರೋಗ್ಯ ಸೇವೆ: ಸುಮಾರು 3 ಲಕ್ಷ ರೂಪಾಯಿ ವೆಚ್ಚದ ಅತ್ಯಾಧುನಿಕ ‘ಎಕ್ಸ್ಫೋಲ್ಡ್ ಓಕ್ಯುಲರ್ ಲೆನ್ಸ್’ ಅನ್ನು ಜಸ್ಟಿಸ್ ಕೆ. ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿಗೆ ದೇಣಿಗೆಯಾಗಿ ನೀಡಲಾಗಿದೆ.
* ಭಾಗವಹಿಸುವಿಕೆ: ಈ ಸಮ್ಮೇಳನದಲ್ಲಿ ಜಿಲ್ಲೆಯ 7 ಕ್ಲಬ್ಗಳ 300ಕ್ಕೂ ಹೆಚ್ಚು ಸದಸ್ಯರು ಹಾಗೂ ಒಟ್ಟು 750ಕ್ಕೂ ಮಿಕ್ಕಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.



ಸಮ್ಮೇಳನದ ಯಶಸ್ಸಿಗಾಗಿ ಅಧ್ಯಕ್ಷ ಫಿಲಿಪ್ ಪಿರೇರ, ಕಾರ್ಯದರ್ಶಿ ಲಿಡಿಯಾ ಡಿಕೋಸ್ಟಾ, ಖಜಾಂಚಿ ಸುಧಾಕರ್ ತಾಳಿತ್ತಾಯ ಮತ್ತು ಮುಖ್ಯ ಸಂಯೋಜಕ ವಿಜಯ ವಿಷ್ಣು ಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.




