April 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದಕ್ಷ ಪೊಲೀಸ್ ಅಧಿಕಾರಿ ಸಂದೇಶ್ ಪಿ.ಜಿ. ತೇಜೋವಧೆಗೆ ಸಂಚು – ಸುಮತಿ ನಾಯ್ಕ್ ಅಸಲಿಯತ್ತು ಬಿಚ್ಚಿಟ್ಟ ಸ್ವಂತ ಅಕ್ಕ ಪ್ರಫುಲ್ಲಾ

ಮೂಡಬಿದ್ರೆಯ ದಕ್ಷ ಇನ್ಸ್‌ಪೆಕ್ಟರ್‌ ಸಂದೇಶ್‌ ಪಿ.ಜಿ. ಅವರ ವಿರುದ್ಧ ಕೇಳಿಬಂದಿರುವ ಆರೋಪಗಳು ಕೇವಲ ವೈಯಕ್ತಿಕ ದ್ವೇಷದ ಪಿತೂರಿ ಎಂಬ ಸತ್ಯ ಇದೀಗ ಬಯಲಾಗಿದೆ. ಆರೋಪ ಮಾಡುತ್ತಿರುವ ಸುಮತಿ ನಾಯ್ಕ್ ಎಂಬಾಕೆಯ ಅಸಲಿ ಮುಖವಾಡವನ್ನು ಆಕೆಯ ಸ್ವಂತ ಅಕ್ಕ ಪ್ರಫುಲ್ಲಾ ನಾಯ್ಕ್ ಅವರೇ ಮಾಧ್ಯಮಗಳ ಮುಂದೆ ಅನಾವರಣಗೊಳಿಸಿದ್ದಾರೆ.

ವೈಯಕ್ತಿಕ ದ್ವೇಷಕ್ಕಾಗಿ ಸುಳ್ಳು ಆರೋಪದ ನಾಟಕ:

ಸುಮತಿ ನಾಯ್ಕ್ ತನ್ನ ಅಕ್ಕನ ಸಂಸಾರದಲ್ಲಿ ಬಿರುಕು ಮೂಡಿಸಿ, ಆಕೆಯ ಗಂಡ ಮತ್ತು ಮಗನನ್ನು ತನ್ನ ವಶದಲ್ಲಿ ಇರಿಸಿಕೊಂಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ದೂರು ನೀಡಲು ಪ್ರಫುಲ್ಲಾ ನಾಯ್ಕ್ ಪೊಲೀಸ್ ಠಾಣೆಗೆ ಹೋದಾಗ, ಅಲ್ಲಿಯೂ ಸುಮತಿ ಪೊಲೀಸರ ಎದುರೇ ಅಕ್ಕನ ಮೇಲೆ ಹಲ್ಲೆ ನಡೆಸಿ ದರ್ಪ ತೋರಿದ್ದಾಳೆ. ಈ ಸಂದರ್ಭದಲ್ಲಿ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾದಾಗ, ಅದರಿಂದ ತಪ್ಪಿಸಿಕೊಳ್ಳಲು ಮತ್ತು ಇನ್ಸ್‌ಪೆಕ್ಟರ್ ಸಂದೇಶ್ ಅವರ ಮೇಲಿನ ದ್ವೇಷ ತೀರಿಸಿಕೊಳ್ಳಲು “ಪೊಲೀಸ್ ಹಲ್ಲೆ” ಎಂಬ ಸುಳ್ಳು ಕಥೆಯನ್ನು ಸೃಷ್ಟಿಸಿದ್ದಾಳೆ ಎಂದು ಪ್ರಫುಲ್ಲಾ ಗಂಭೀರವಾಗಿ ಆರೋಪಿಸಿದ್ದಾರೆ.

ಆರೋಪಿಯ ಹಿನ್ನೆಲೆ ಮತ್ತು ಅಕ್ರಮ ಚಟುವಟಿಕೆಗಳು:

ಸುಮತಿ ನಾಯ್ಕ್ ಕೇವಲ ಕೌಟುಂಬಿಕ ಕಲಹದಲ್ಲಿ ಮಾತ್ರವಲ್ಲದೆ, ಕೆಲವೊಂದು ಅಪರಾಧ ಚಟುವಟಿಕೆಗಳಲ್ಲೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಸುಮತಿ ಅಕ್ಕ ಪ್ರಫುಲ್ಲಾ ಅವರಿಂದ ತಿಳಿದು ಬಂದಿದೆ.:

* ಬೆಂಗಳೂರಿನಲ್ಲಿ ಬಂಧನ: ಈ ಮೊದಲು ಬೆಂಗಳೂರಿನ ಪ್ರಕರಣವೊಂದರಲ್ಲಿ ಭಾಗಿಯಾದ ಈಕೆಯನ್ನು ಮಡಿವಾಳ ಪೊಲೀಸರು  ಬಂಧಿಸಿದ್ದರು.

* ದಾಖಲೆಗಳ ಪೋರ್ಜರಿ: ತನ್ನ ತಾಯಿಯ ಸಹಿಯನ್ನು ಪೋರ್ಜರಿ ಮಾಡಿ ಪಿತ್ರಾರ್ಜಿತ ಆಸ್ತಿಯನ್ನು ಲಪಟಾಯಿಸಲು ಯತ್ನಿಸಿರುವ ಆರೋಪವೂ ಈಕೆಯ ಮೇಲಿದೆ.

ಅಧಿಕಾರಿಯ ಘನತೆಗೆ ಧಕ್ಕೆ ತರುವ ಯತ್ನ:

ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರು ಮೂಡಬಿದ್ರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಗ್ಯಾಂಗ್ ರೇಪ್‌ನಂತಹ ಗಂಭೀರ ಪ್ರಕರಣಗಳನ್ನು ತಡೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿಷ್ಠಾವಂತ ಹಾಗೂ ಪ್ರಾಮಾಣಿಕ ಅಧಿಕಾರಿಯ ಘನತೆಗೆ ಧಕ್ಕೆ ತರುವ ಯತ್ನ ಇದಾಗಿದೆ.

ನ್ಯಾಯದ ಹಾದಿಯಲ್ಲಿ ಅಧಿಕಾರಿ:

ಈ ಕುರಿತು ಪ್ರತಿಕ್ರಿಯಿಸಿರುವ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ., “ಸಂತ್ರಸ್ತರಿಗೆ ನ್ಯಾಯ ಕೊಡಿಸುವಾಗ ಇಂತಹ ಸುಳ್ಳು ಆರೋಪಗಳು ಎದುರಾಗುವುದು ಸಹಜ. ಸಾರ್ವಜನಿಕರಿಗೆ ನನ್ನ ಪ್ರಾಮಾಣಿಕತೆಯ ಮೇಲೆ ನಂಬಿಕೆಯಿದೆ. ನನ್ನ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.

You may also like

News

ಧರ್ಮಸ್ಥಳದಲ್ಲಿ 54ನೇ ವರ್ಷದ ಸಾಮೂಹಿಕ ವಿವಾಹ – 106 ಜೋಡಿಗಳ ದಾಂಪತ್ಯ ಆರಂಭ

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಏಪ್ರಿಲ್ 29ರಂದು ಬುಧವಾರ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ
News

Saint Theresa’s School Mangaluru Records 22nd Consecutive Year of 100% Success in ICSE Class X Exams 2025–26

Principal Sr Lourdes  and faculty congratulate students on their success MANGALURU: In a resounding celebration of intellectual brilliance and disciplined

You cannot copy content of this page