August 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಾಲ್ದಾನೆ ಚರ್ಚ್ ವ್ಯಾಪ್ತಿಯ ಕಡುಪು ಪಂಜಿರೆಲ್‌ ನಿವಾಸಿ ಆಲಿಯಾ ಫೆರ್ನಾಂಡಿಸ್ ನಿಧನ

ಮಂಗಳೂರಿನ ಕಡುಪು ಪಂಜಿರೆಲ್ ನಿವಾಸಿ ಅಲ್ಫೋನ್ಸ್ ಫೆರ್ನಾಂಡಿಸ್ ಮತ್ತು ರೆನ್ನಿ ಮೊಂತೇರೊ ದಂಪತಿಯ ಪುತ್ರಿ 38 ವರ್ಷ ಪ್ರಾಯದ ಆಲಿಯಾ ಫೆರ್ನಾಂಡಿಸ್ ಅವರು ಇಂದು ಆಗಸ್ಟ್ 11ರಂದು ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ 18 ವರ್ಷಗಳಿಂದ ತೀವ್ರ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಆಲಿಯಾ ಅವರು, ಅಪಾರ ಧೈರ್ಯ ಮತ್ತು ಸಹನೆಯಿಂದ ಅನಾರೋಗ್ಯದ ವಿರುದ್ಧ ಹೋರಾಡುತ್ತಿದ್ದರು. ಇಂದು ಅಲ್ಪಕಾಲದ ಅಸೌಖ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.

ಪಾಲ್ಡಾನೆ ಚರ್ಚ್ ವ್ಯಾಪ್ತಿಗೆ ಒಳಪಟ್ಟ ಮೃತರು, ತಂದೆ, ತಾಯಿ ಹಾಗೂ ಓರ್ವ ಸಹೋದರ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 38ರ ಹರಯದಲ್ಲೇ ಸುದೀರ್ಘ ಕಾಲದ ನೋವನ್ನು ಅನುಭವಿಸಿ ವಿದಾಯ ಹೇಳಿದ ಆಲಿಯಾ ಅವರ ನಿಧನಕ್ಕೆ ಪಾಲ್ಡಾನೆ ಚರ್ಚ್ ಧರ್ಮಗುರು ವಂದನೀಯ ರಿಚರ್ಡ್ ಕುವೆಲ್ಲೊ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ, ಆಯೋಗಗಳ ಸಂಯೋಜಕರು, ಭಕ್ತಾಧಿಗಳು ಹಾಗೂ ಪಂಜಿರೆಲ್ ಗ್ರಾಮಸ್ಥರು ಅತೀವ ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ನಿತ್ಯ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬಕ್ಕೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

You may also like

News

ನೂತನ ಪಾಲಿಕೆ ಆಯುಕ್ತರಿಗೆ ಕಾಂಗ್ರೆಸ್ ನಿಯೋಗದ ಮನವಿ

ನಾಗರಿಕ ಸಮಸ್ಯೆಗಳಿಗೆ ತ್ವರಿತ ಪರಿಹಾರ – ಅಭಿವೃದ್ಧಿಗೆ ಆದ್ಯತೆ ನೀಡುವಂತೆ MLC ಐವನ್ ಡಿಸೋಜ ಆಗ್ರಹ ಮಂಗಳೂರು ನಗರದ ಸಮಗ್ರ ಅಭಿವೃದ್ಧಿ ಹಾಗೂ ವಿವಿಧ ನಾಗರಿಕ ಸಮಸ್ಯೆಗಳ
News

ಮಂಗಳೂರು ಪ್ರೆಸ್ ಕ್ಲಬ್‌ನ ‘ಸಮಾಚಾರ’ 9ನೇ ಸಂಚಿಕೆ ಬಿಡುಗಡೆ

ಸಂಸ್ಥೆಗಳ ಸಾಧನೆ ದಾಖಲೀಕರಣ ಅಗತ್ಯ – ಪ್ರದೀಪ್ ಡಿಸೋಜ ಸಂಘ-ಸಂಸ್ಥೆಗಳ ಕಾರ್ಯಚಟುವಟಿಕೆಗಳು ಹಾಗೂ ಸಾಧನೆಗಳನ್ನು ವ್ಯವಸ್ಥಿತವಾಗಿ ದಾಖಲಿಸುವುದು ಅತ್ಯಗತ್ಯ. ಇದರಿಂದ ಸಂಸ್ಥೆಯ ಸಾಧನೆಗಳು ಹಾಗೂ ಅದರ ಸಾಮಾಜಿಕ

You cannot copy content of this page