ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಜೆಪ್ಪುವಿನ ಸಂತ ಆಂಥೋನಿ ಆಶ್ರಮದ 350 ಆಶ್ರಿತರಿಗೆ ಹಣ್ಣುಹಂಪಲು ವಿತರಣೆ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ‘ಸೇವಾಸಂಕಲ್ಪ ಅಭಿಯಾನ’ದ ಭಾಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಜೆಪ್ಪುವಿನ ಸಂತ ಆಂಥೋನಿ ಅನಾಥಾಶ್ರಮದ 350 ಆಶ್ರಿತರಿಗೆ ಹಣ್ಣುಹಂಪಲು ವಿತರಿಸಲಾಯಿತು.

ಮಂಡಲದ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದೀಪಕ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮಂಡಲ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು ಉಪಸ್ಥಿತರಿದ್ದರು.
ಅನಾಥಾಶ್ರಮದ ನಿರ್ದೇಶಕ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ, ಅರ್ಷದ್ ಪೋಪಿ, ಶಾಕೀರ್ ಕಣ್ಣೂರು, ನೆಲ್ಸನ್ ಕ್ಯಾಸ್ಟಲಿನೋ, ಸುಶೀಲ್ ಪಾಲನ್ನ, ಎ.ಆರ್. ಬೋಳಾರ್, ಗಿಲ್ಕ್ರಿಸ್ಟ್ ಡಿಸೋಜ, ರೋಹನ್ ಡಿಸೋಜ, ಜೋಶ್ವನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೇವಾ ಮನೋಭಾವದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಆಶ್ರಿತರೊಂದಿಗೆ ಸಮಯ ಕಳೆಯುವ ಮೂಲಕ ಜನ್ಮದಿನಾಚರಣೆಯನ್ನು ಸಮಾಜಮುಖಿ ಕಾರ್ಯದೊಂದಿಗೆ ಆಚರಿಸಲಾಯಿತು.


