July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಸ್.ಟಿ.ಪಿ. ಕೊಳಚೆ ನೀರು ಶುದ್ದೀಕರಣ ಘಟಕ ಎಂ.ಆರ್.ಪಿ.ಎಲ್.‌ಗೆ ಹಸ್ತಾಂತರಿಸುವ ಬಗ್ಗೆ ಎಂ.ಆರ್.ಪಿ.ಎಲ್.‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಜೊತೆ ಮಾತುಕತೆ

ಸರಕಾರದ ಮಟ್ಟದಲ್ಲಿ ಕ್ರಮವಹಿಸಲು ಮನವಿ – MLC ಐವನ್‌ ಡಿಸೋಜಾ

ಕಾವೂರು ಮಾದರಿಯಲ್ಲಿ ಪಚ್ಚನಾಡಿ ಮತ್ತು ಸುರತ್ಕಲ್‌ ಮದ್ಯ ಮತ್ತು ಬಜಾಲ್‌ ನಲ್ಲಿ ಎಸ್.ಟಿ.ಪಿ.ಗಳನ್ನು ಎಂ.ಆರ್.ಪಿ.ಎಲ್‌.ರವರ ಮುಖಾಂತರ ಕೊಳಚೆ ನೀರನ್ನು ಶುದೀಕರಿಸಿ ಕೈಗಾರಿಕಾ ಉದ್ದೇಶಕ್ಕಾಗಿ ಬಳಕೆ ಮಾಡುವ ಬಗ್ಗೆ ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿದಿಗಳ ಮೂಲಕ ಚರ್ಚಿಸಿ MLC ಐವನ್‌ ಡಿಸೋಜಾ ಇವರ ಕಛೇರಿಯಲ್ಲಿ ನಗರ ಪಾಲಿಕೆ ಕಾರ್ಪೊರೇಟರ್‌ ಗಳ, ಎಂಆರ್.ಪಿ.ಎಲ್‌.  ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ಯಾಮ್‌ ಪ್ರಸಾದ್‌, ಎ.ಏಂ.ಡಿ. ಕೃಷ್ಣ ಪ್ರಸಾದ್‌ ಹೆಗ್ಡೆ, ಅಧಿಕಾರಿ ಸೂರ್ಯನಾರಾಯಣ ಇವರುಗಳ ಜೊತೆ ದೀರ್ಘವಾದ ಮಾತುಕತೆ ನಡೆಸಿ ಕೊಳಚೆ ನೀರು ಸಂಗ್ರಹಿಸಿ, ಸಾರ್ವಜನಿಕ ತೋಡುಗಳಲ್ಲಿ ಹರಿದು ಹೋಗುವ ನೀರನ್ನು ಶುದ್ದೀಕರಿಸಿ ಮತ್ತು ಬಳಕೆ ಮಾಡಲು ಕ್ರಮ ವಹಿಸುವ ಬಗ್ಗೆ ವಿಚಾರವನ್ನು ನಡೆಸಲಾಯಿತು.

ಪ್ರಸ್ತುತ ಜೆಪ್ಪಿನಮೊಗರು ಎಸ್.ಟಿ.ಪಿ., ಪಚ್ಚನಾಡಿ ಎಸ್.ಟಿ.ಪಿ. 8.75 ಸಾಮರ್ಥ್ಯ  ಸುರತ್ಕಲ್‌ ಮದ್ಯ 16.5 ಸಾಮರ್ಥ್ಯ ಈ ಎಲ್ಲಾ ಎಸ್.ಟಿ.ಪಿ.ಗಳನ್ನು ಮೇಲ್ದರ್ಜೆಗೇರಿಸಲು ನೀರು ಶುದ್ದಿಖರಿಸಿಸಲು ಸುಮಾರು ಇನ್ನೂರು ಕೋಟಿ ರೂಪಾಯಿಗಳ ವೆಚ್ಚ ತಗಲುವುದು ಎಂದು ಇದನ್ನು ಯಾವ ರೀತಿ ಹೊಂದಿಸಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚಿಸಲಾಯಿತು ಕಲುಷಿತ ನೀರು ಸಂಸ್ಕರಿಸಿ ಕೈಗಾರಿಕಾ ಗುಣಮಟ್ಟದಲ್ಲಿ ಪರಿಸರ ಮತ್ತು ತೋಡುಗಳಲ್ಲಿ ಹರಿದು ಕಲುಷಿತ ನೀರು ಶುದ್ದಿಕರಿಸಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ಈ ವಿಚಾರ ವಿನಿಮಯದಲ್ಲಿ ಹಿರಿಯ ಕಾರ್ಪೊರೇಟರ್‌ ಶಶಿಧರ್‌ ಹೆಗ್ಡೆ, ಲ್ಯಾನ್ಸ್‌ ಲೋಟ್‌ ಪಿಂಟೋ, ಶಂಶುದೀನ್‌ ಕುದ್ರೋಳಿ, ಲತೀಫ್‌ ಕಂದಕ್‌, ಅಶ್ರಫ್‌ ಬಜಾಲ್‌, ಸತೀಶ್‌ ಪೆಂಗಲ್‌, ಹೇಮಂತ್‌ ಗರೋಡಿ, ತನ್ವೀರ್‌ ಷಾ, ಮುಂತಾದವರು ಉಪಸ್ಥಿತರಿದ್ದರು.

You may also like

News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು

You cannot copy content of this page