May 17, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜೆಸಿಐ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ JFR ಸೂರ್ಯನಾರಾಯಣ ವರ್ಮ ವಿಟ್ಲ ಘಟಕಕ್ಕೆ ಭೇಟಿ

ಮಾರ್ಚ್ 22ರಂದು ಜೆಸಿಐ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕರಾದ JFR ಸೂರ್ಯ ನಾರಾಯಣ ವರ್ಮಾರವರು ಜೆಸಿಐ ವಿಟ್ಲ ಘಟಕಕ್ಕೆ ಅಧಿಕೃತ ಭೇಟಿ ನೀಡಿದರು. ಇವರನ್ನು ಜೆಸಿಐ ವಿಟ್ಲ ಘಟಕದ ಅಧ್ಯಕ್ಷ ಜೆಸಿಐ ಸೇನೆಟರ್ ಸೌಮ್ಯ ಚಂದ್ರಹಾಸ್ ಹಾಗೂ ಸರ್ವ ಸದಸ್ಯರು ಪ್ರೀತಿ ಪೂರ್ವಕವಾಗಿ ಗಜಾನನ ಸಭಾಭವನದಿಂದ ವಾಹನ ಜಾಥಾದ ಮೂಲಕ ಜೆಸಿ ಆಂಗ್ಲ ಮಾಧ್ಯಮ ಶಾಲೆಗೆ ಕರೆತಂದು, ಶಾಲೆಗೆ ಜೆಸಿಐ ವಿಟ್ಲ ಘಟಕದ ವತಿಯಿಂದ ಜೆಸಿಐ ಶಾಶ್ವತ ಯೋಜನೆಯಡಿಯಲ್ಲಿ ಸಿಸಿಟಿವಿ ಕ್ಯಾಮೆರವನ್ನು ರಾಷ್ಟೀಯ ಉಪಾಧ್ಯಕ್ಷರು ಶಾಲೆಯ ಅಧ್ಯಕ್ಷರಾದ ಜೆಸಿ ಶ್ರೀಧರ್ ಶೆಟ್ಟಿ ಇವರಿಗೆ ಹಸ್ತಾಂತರಿಸಿದರು. ರಾಷ್ಟ್ರೀಯ ಉಪಾಧ್ಯಕ್ಷರು ಈ ಸಂದರ್ಭದಲ್ಲಿ ಜೆಸಿಐ ವಿಟ್ಲದ ಬಗ್ಗೆ ಶ್ಲಾಘನೆಯ ಮಾತನಾಡಿ ಇನ್ನು ಹೆಚ್ಚಿನ ವ್ಯಕ್ತಿತ್ವ ವಿಕಸನದ ಜೊತೆಯಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮ ನೀಡಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಜೆಸಿಐ ಝೊನ್ 15ರ ವಲಯ ಅಧ್ಯಕ್ಷ ಜೆಸಿಐ ಸೇನೆಟರ್ ಅಭಿಲಾಷ್ ಬಿ.ಎ., ವಲಯ ಉಪಾಧ್ಯಕ್ಷ ಜೆ.ಫ್. ಸಂತೋಷ್ ಶೆಟ್ಟಿ, ಶಾಲೆಯ ಅಧ್ಯಕ್ಷ ಜೆಸಿ ಶ್ರೀಧರ್ ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷ ಜೆಸಿಐ ಸೇನೆಟರ್ ಸೌಮ್ಯ, ಅಧ್ಯಕ್ಷರು ಜೆಸಿ ವಿಟ್ಲ ಹಾಗೂ ಜೋನ್ 15 ರ ಪದಾಧಿಕಾರಿಗಳು, ವಿಟ್ಲ ಜೆಸಿಐನ ಪೂರ್ವಧ್ಯಕ್ಷರುಗಳು ಹಾಗೂ ಹೆಚ್ಚಿನ ಸದಸ್ಯರು ಹಾಜರಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಜೆಸಿ ರಾಧಾಕೃಷ್ಣ ಏರುoಬು ವೇದಿಕೆಗೆ ಆಹ್ವಾನಿಸಿದರು. ಹೇಮಲತಾ ಜೈಕಿಶನ್ ವಂದಿಸಿದರು.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page